ಬ್ರೇಕಿಂಗ್ ನ್ಯೂಸ್
23-09-22 10:44 pm HK News Desk ದೇಶ - ವಿದೇಶ
ನವದೆಹಲಿ, ಸೆ.23 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ಎನ್ಐಎ ದಾಳಿಯನ್ನು ಉತ್ತರ ಭಾರತದ ಬಹುತೇಕ ಮುಸ್ಲಿಂ ಸಂಘಟನೆಗಳು ಬೆಂಬಲಿಸಿವೆ. ಇವುಗಳಲ್ಲಿ ಸೂಫಿ ಖಾನ್ಖಾಹ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಕೂಡ ಸೇರಿವೆ.
ಸೂಫಿ ಖಾನ್ಬಾಹ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಪಿಎಫ್ಐ ನಿಷೇಧಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಪಿಎಫ್ಐ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದೆ, ಆದ್ದರಿಂದ ಅದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಪಿಎಫ್ಐ ದೇಶದ ಯುವಕರನ್ನ ತಪ್ಪು ದಾರಿಗೆಳೆಯುತ್ತಿದೆ ಮತ್ತು ಅವರನ್ನ ಭಯೋತ್ಪಾದಕರನ್ನಾಗಿ ಮಾಡುತ್ತಿದೆ ಮತ್ತು ಕಳೆದ ಎರಡು ವರ್ಷಗಳಿಂದ, ಅದು ದೇಶದ ವಿರುದ್ಧ ಹೋರಾಡಲು ಐಸಿಸ್ಗೆ ಹೋರಾಟಗಾರರನ್ನ ನೇಮಕ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಪಿಎಫ್ಐ ಸಂಘಟನೆಯ ಸಿದ್ಧಾಂತವು ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಲ್ಲ ಎಂದು ಕೌಸರ್ ಹಸನ್ ಮಜಿದಿ ಹೇಳಿದ್ದಾರೆ. ಇದು ದೇಶದಲ್ಲಿ ಶಾಂತಿ ಕೆಡಿಸಲು ಕೆಲಸ ಮಾಡುತ್ತಿದೆ. ದೇಶದ ವಿರುದ್ಧವಾದ ಸಿದ್ಧಾಂತವನ್ನ ಹೊಂದಿರುವ ಸಂಘಟನೆಯನ್ನ ನಿಷೇಧಿಸುವುದು ಒಳ್ಳೆಯದು. 'ನಿಷೇಧವು ಹಳೆಯ ಬೇಡಿಕೆಯಾಗಿದೆ, ಆದರೆ ನಿಷೇಧವು ಮಾತ್ರ ಏನನ್ನೂ ಮಾಡುವುದಿಲ್ಲ. ಅಂತಹ ಸಿದ್ಧಾಂತದ ವಿರುದ್ಧ ದೃಢವಾದ ಕ್ರಮಗಳನ್ನ ತೆಗೆದುಕೊಳ್ಳಬೇಕು' ಎಂದು ಅವರು ಹೇಳಿದ್ದಾರೆ.
ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಸಂಸ್ಥೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ವಿರುದ್ಧ ಅನುಮಾನಾಸ್ಪದ ಚಟುವಟಿಕೆಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿದೆ ಮತ್ತು ಅದರ ಹಲವಾರು ಕಾರ್ಯಕರ್ತರನ್ನ ಬಂಧಿಸಿದೆ' ಎಂದು ಅಖಿಲ ಭಾರತ ಪಾಸ್ಮಾಂಡಾ ಮುಸ್ಲಿಂ ಮಹಾಜ್ ರಾಷ್ಟ್ರೀಯ ಅಧ್ಯಕ್ಷ ಪರ್ವೇಜ್ ಹನೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಖಿಲ ಭಾರತ ಪಾಸ್ಮಾಂಡ ಮುಸ್ಲಿಂ ಮಹಾಜ್ ದಾಳಿ ನಡೆಸುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತದೆ. ಇದು ದೇಶದ ಹಿತದೃಷ್ಟಿಯಿಂದ ಉತ್ತಮ ನಡೆ. ನಮ್ಮ ಸಂಸ್ಥೆ ಭಾರತೀಯ ಸಂವಿಧಾನವನ್ನ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದಿದ್ದಾರೆ.
Sufi body seeks PFI ban, writes letter to PM Modi. All India Sufi Sajjadanashin Council (AISSC), a Muslim body set up four years ago, has now written letter to PM Modi for banning the Popular Front of India (PFI) and any religious organisation involved in radicalism or incidents in India.
08-05-24 04:37 pm
Bangalore Correspondent
C P Yogeshwara slams Dk Shivakumar: ಬಾಲ್ಯದಲ್ಲ...
08-05-24 04:28 pm
ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರ...
08-05-24 01:03 pm
DK Shivakumar, HD Kumarasway, Prajwal case:...
07-05-24 09:11 pm
Lok Sabha Elections 2024, Uttar Karnataka Vot...
07-05-24 07:11 pm
08-05-24 11:59 am
HK News Desk
ಹೈದರಾಬಾದ್ ; ಭಾರೀ ಮಳೆಗೆ ಗೋಡೆ ಕುಸಿತ, 4 ವರ್ಷದ ಮಗ...
08-05-24 10:44 am
Cyber crime, gold biscut: ಸೈಬರ್ ವಂಚಕನಿಗೆ ಸೇರಿ...
07-05-24 10:26 pm
Solapur Lok Sabha Constituency, Maharashtra,...
07-05-24 08:38 pm
Ram Mandir, Rahul Gandhi, Acharya Pramod Kris...
07-05-24 05:16 pm
08-05-24 08:11 pm
Mangalore Correspondent
Congress Vasantha Bangera death: ಬೆಳ್ತಂಗಡಿಯ ಹ...
08-05-24 06:19 pm
Mangalore Jds Akshith Suvarna , Prajwal Revan...
08-05-24 04:54 pm
ರೈಲು ನಿಲ್ದಾಣದಲ್ಲಿ ಆಟೋ ಚಾಲಕರ ಜಟಾಪಟಿ, ಪ್ರಯಾಣಿಕರ...
08-05-24 03:20 pm
Mangalore Dr Palthadi Ramakrishna Achar: ತುಳು...
08-05-24 12:49 pm
08-05-24 04:35 pm
Bengaluru Correspondent
ಹಲ್ಲಿನ ಚಿಕಿತ್ಸೆಗೆ ಬಂದು ಮೆಡಿಕಲ್ ಕಾಲೇಜಿನ ಟಾಯ್ಲೆ...
08-05-24 11:33 am
ಆನ್ಲೈನ್ ಗೇಮಿಂಗ್ ಗಾಗಿ 2 ಸಾವಿರ ರೂ. ಸಾಲ, ದುಡ್ಡ...
07-05-24 10:03 pm
Bangalore Cyber crime: ಸ್ಟಾಕ್ ಮಾರ್ಕೆಟ್ ಹೂಡಿಕೆ...
07-05-24 09:48 pm
Bangalore crime, Robbery: ಊರಿಗೆ ಹೋದ್ಲು ಅಕ್ಕ ;...
07-05-24 02:57 pm