ಎಐಸಿಸಿ ಅಧ್ಯಕ್ಷ ಸ್ಥಾನ ; ತ್ರಿಪಾಠಿ ನಾಮಪತ್ರ ತಿರಸ್ಕೃತ, ಖರ್ಗೆ - ತರೂರ್ ಮಧ್ಯೆ ನೇರ ಪೈಪೋಟಿ 

01-10-22 05:10 pm       HK News Desk   ದೇಶ - ವಿದೇಶ

ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಅಖಾಡಕ್ಕಿಳಿದಿದ್ದ ಜಾರ್ಖಂಡ್ ಮೂಲದ ಕಾಂಗ್ರೆಸ್ ಮುಖಂಡ ಕೆ.ಎನ್. ತ್ರಿಪಾಠಿ ಅವರ ನಾಮಪತ್ರ ತಿರಸ್ಕೃತವಾಗಿದ್ದು ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಾತ್ರ ಉಳಿದುಕೊಂಡಿದ್ದಾರೆ. 

ನವದೆಹಲಿ, ಅ.1 : ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯ ಅಖಾಡಕ್ಕಿಳಿದಿದ್ದ ಜಾರ್ಖಂಡ್ ಮೂಲದ ಕಾಂಗ್ರೆಸ್ ಮುಖಂಡ ಕೆ.ಎನ್. ತ್ರಿಪಾಠಿ ಅವರ ನಾಮಪತ್ರ ತಿರಸ್ಕೃತವಾಗಿದ್ದು ಕಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಾತ್ರ ಉಳಿದುಕೊಂಡಿದ್ದಾರೆ. 

ನಿಗದಿತ ಮಾನದಂಡ ಪೂರೈಸಿಲ್ಲದ ಕಾರಣ ಕಾಂಗ್ರೆಸ್ ಕೇಂದ್ರ ಚುನಾವಣಾ ಮಂಡಳಿಯ ಅಧ್ಯಕ್ಷ ಮಧುಸೂದನ್​ ಮಿಸ್ತ್ರಿ ಅವರು ಕೆ.ಎನ್.ತ್ರಿಪಾಠಿ ಅವರ ನಾಮಪತ್ರ ತಿರಸ್ಕೃತ ಮಾಡಿದ್ದಾರೆ. ಇದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಹಾಗೂ ಶಶಿ ತರೂರ್ ನಡುವೆ ನೇರ ಪೈಪೋಟಿ ನಡೆಯಲಿದೆ. ಇಬ್ಬರು ನಾಯಕರಲ್ಲಿ ಯಾರು ಗದ್ದುಗೆ ಗಿಟ್ಟಿಸಿದರೂ, ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ಅತ್ಯುನ್ನತ ಹುದ್ದೆ ಸಿಕ್ಕಂತಾಗುತ್ತದೆ. 

Congress President Election Former Jharkhand minister KN Tripathi  nomination rejected Kharge vs Tharoor | India News – India TV

ಈ ಹಿಂದೆ ಕಾಂಗ್ರೆಸ್ ಕುಟುಂಬ ನಾಯಕತ್ವ ಪ್ರಶ್ನಿಸಿ ಸುದ್ದಿಗೆ ಗ್ರಾಸವಾಗಿದ್ದ ಜಿ 23 ನಾಯಕರು ಕೂಡ ಖರ್ಗೆ ಅವರಿಗೆ ಬೆಂಬಲ ಸೂಚಿಸಿದ್ದು ಹೊಸ ಬೆಳವಣಿಗೆ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಬಹುಮತದಿಂದ ಗೆದ್ದು ಅಧ್ಯಕ್ಷರಾಗುವ ಸಾಧ್ಯತೆ ಅಧಿಕ. ತರೂರ್ ಚುನಾವಣೆ ಕಣದಿಂದ ಹಿಂದೆ ಸರಿಯದೇ ಇದ್ದರೆ ಇದೇ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ಪಕ್ಷದ ಎಲ್ಲ ರಾಜ್ಯ ಘಟಕಗಳ ಸದಸ್ಯರಿಗೆ ಮತದಾನದ ಅವಕಾಶಗಳಿದ್ದು ನೇರವಾಗಿ ಅಧ್ಯಕ್ಷರ ಆಯ್ಕೆ ಮಾಡಲಿದ್ದಾರೆ.

Former Jharkhand minister K N Tripathi’s nomination for the Congress presidential election was rejected on Saturday, leaving party leaders Mallikarjun Kharge and Shashi Tharoor in the fray.The three had filed nominations on Friday, the last day of the process.The last date for withdrawal of nominations is October 8 and the final list of candidates will be out at 5 pm on the same day. Addressing a press conference at the Congress headquarters here, the party’s central election authority chairman Madhusudan Mistry said the panel met for scrutiny of forms on Saturday.