ಬ್ರೇಕಿಂಗ್ ನ್ಯೂಸ್
02-10-22 05:42 pm HK News Desk ದೇಶ - ವಿದೇಶ
ಕಾಸರಗೋಡು, ಅ.2: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾಸರಗೋಡು ಜಿಲ್ಲಾ ಘಟಕದ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ನಾಯಮ್ಮಾರಮೂಲೆಯಲ್ಲಿದ್ದ ಕಚೇರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಬೀಗ ಜಡಿದು ಮೊಹರು ಹಾಕಿದ್ದಾರೆ. ಅಲ್ಲದೆ, ಪಿಎಫ್ಐ ನಾಯಕರು ಸಹಿತ ಜಿಲ್ಲೆಯ ಹಲವಾರು ಮಂದಿ ಸದಸ್ಯರಾಗಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೆ ಸೇರಿದ ಕಚೇರಿಗೂ ಬೀಗ ಹಾಕಲಾಗಿದೆ.
ಕಾಸರಗೋಡು ನಗರ ಹೊರವಲಯದ ಚೆಂಗಳ ಪಂಚಾಯತ್ ಏರಿಯಾದ ಪೆರುಂಬಳ ಕಡವು ಸುತುವೆ ಬಳಿಯಿದ್ದ ಚಂದ್ರಗಿರಿ ಚಾರಿಟೇಬಲ್ ಟ್ರಸ್ಟ್ ಹೆಸರಿನ ಪಿಎಫ್ಐ ಕಚೇರಿಗೂ ಬೀಗ ಹಾಕಿ ಮೊಹರು ಹಾಕಲಾಗಿದೆ. ಇದಲ್ಲದೆ, ಕೇಂದ್ರ ಸರಕಾರ ಇತ್ತೀಚೆಗೆ ನಿಷೇಧಿಸಿರುವ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳ ಬಗ್ಗೆ ಮಾಹಿತಿಗಳಿದ್ದ ನೋಟೀಸನ್ನು ಕಚೇರಿಯ ಬಾಗಿಲಿಗೆ ಅಂಟಿಸಲಾಗಿದೆ.

ಎನ್ಐಎ ಕೊಚ್ಚಿ ಘಟಕದ ಎಸ್ಪಿ ಉಮೇಶ್ ರಾಯ್ ನೇತೃತ್ವದ ತಂಡ ಇಲ್ಲಿಗೆ ಆಗಮಿಸಿದ್ದು, ನೋಟೀಸ್ ಅಂಟಿಸಿ ಕಚೇರಿಗೆ ಬೀಗ ಹಾಕಿದೆ. ಈ ವೇಳೆ, ಇಬ್ಬರು ತಹಸೀಲ್ದಾರರು, ಡಿವೈಎಸ್ಪಿ ವಿವಿ ಮನೋಜ್, ವಿದ್ಯಾನಗರ ಪೊಲೀಸ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ಉಪಸ್ಥಿತರಿದ್ದರು. ಎನ್ಐಎ ಸೂಚನೆಯಂತೆ ಹೊಸದುರ್ಗ ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಚಂದೇರ ಪೊಲೀಸ್ ಇನ್ ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ಪೊಲೀಸರು ಪಡನ್ನ ಎಂಬಲ್ಲಿದ್ದ ನೀರಂ ಚಾರಿಟೇಬಲ್ ಟ್ರಸ್ಟಿಗೂ ಬೀಗ ಹಾಕಿದ್ದಾರೆ. ಪಡನ್ನ ಹೈಸ್ಕೂಲ್ ಸಮೀಪದ ಕಟ್ಟಡದಲ್ಲಿ ನಾಮಫಲಕ ಇಲ್ಲದೆ ನೀರ ಚಾರಿಟೇಬಲ್ ಟ್ರಸ್ಟ್ ಕಚೇರಿ ಕಾರ್ಯಾಚರಿಸುತ್ತಿತ್ತು. ಎನ್ಐಎ ಬಂಧಿಸಿರುವ ಪಿಎಫ್ಐ ಜಿಲ್ಲಾಧ್ಯಕ್ಷ ತೃಕ್ಕರಿಪುರ ಮೂಲದ ಸಿಟಿ ಸುಲೇಮಾನ್ ಸೇರಿ ಕಾಸರಗೋಡಿನ ಹಲವು ಪ್ರಮುಖರು ಟ್ರಸ್ಟಿನಲ್ಲಿ ಸದಸ್ಯರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
Following the Central government order to ban Popular Front of India, offices were closed and sealed in Kannur and Kasaragod district.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm