ಬ್ರೇಕಿಂಗ್ ನ್ಯೂಸ್
03-10-22 03:42 pm HK News Desk ದೇಶ - ವಿದೇಶ
ಕೊಲ್ಕತ್ತಾ, ಅ.3: ದುರ್ಗಾ ಮೂರ್ತಿಯ ಕಾಲ ಕೆಳಗೆ ಮಹಿಷಾಸುರನ ಬದಲು ಮಹಾತ್ಮ ಗಾಂಧೀಜಿ ಇರುವಂತೆ ಬಿಂಬಿಸಿ ಪ್ರತಿಮೆ ರಚಿಸಿದ್ದು ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೊಲ್ಕತ್ತಾದಲ್ಲಿ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮೂರ್ತಿಯ ಪೆಂಡಾಲ್ ನಲ್ಲಿ ಈ ರೀತಿ ಚಿತ್ರಿಸಲಾಗಿದ್ದು, ಗೃಹ ಸಚಿವಾಲಯದ ಸೂಚನೆಯಂತೆ ಬಳಿಕ ಗಾಂಧೀಜಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅಖಿಲ ಭಾರತೀಯ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯಲ್ಲಿ ಅಸುರ ಗಾಂಧಿಯನ್ನು ದುರ್ಗಾಮಾತೆ ಕೊಲ್ಲುವ ರೀತಿ ಚಿತ್ರಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದು ಮಹಾಸಭಾ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಾಚುರ್ ಗೋಸ್ವಾಮಿ, ನಾವು ಗಾಂಧಿಯನ್ನು ನೈಜ ಅಸುರನಾಗಿಯೇ ನೋಡುತ್ತೇವೆ. ಗಾಂಧಿ ಒಬ್ಬ ರಾಕ್ಷಸನಾಗಿದ್ದ. ಅದಕ್ಕಾಗಿಯೇ ಆ ರೀತಿ ಮೂರ್ತಿಯನ್ನು ಚಿತ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಗಾಂಧೀಜಿಯನ್ನು ಪ್ರಮೋಟ್ ಮಾಡುತ್ತಿದೆ. ಆದರೆ ನಾವು ಗಾಂಧಿಯನ್ನು ಒಪ್ಪುವುದಿಲ್ಲ. ನಾವು ಅಸುರನಂತೆ ಚಿತ್ರಿಸಿ ಹಾಕಿದ್ದ ಮೂರ್ತಿಯನ್ನು ಬಲವಂತದಿಂದ ಬದಲಿಸಿದ್ದಾರೆ. ನಾವು ಎಲ್ಲ ಕಡೆ ಹಾಕಿರುವ ಗಾಂಧಿ ಚಿತ್ರಣವನ್ನು ತೆಗೆದು ಸುಭಾಸ್ ಚಂದ್ರ ಬೋಸ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಮುನ್ನೆಲೆಯಲ್ಲಿ ಹಾಕಲಿದ್ದೇವೆ ಎಂದು ಗೋಸ್ವಾಮಿ ಹೇಳಿದ್ದಾರೆ. ದಸರಾ ಎಂದರೆ, ಮಹಿಷಾಸುರನನ್ನು ದೇವಿ ಕೊಂದಿರುವ ದಿನವೆಂದು ಪುರಾಣ ನಂಬಿಕೆ. ಅದೇ ರೀತಿ ಅಸುರನನ್ನು ಕೊಂದ ದೇವಿಯ ಪ್ರತೀಕವಾಗಿ ದೇಶದೆಲ್ಲೆಡೆ ದೇವಿಯ ಆರಾಧನೆ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಗಾಂಧೀಜಿ ಜನ್ಮದಿನದ ಸಂದರ್ಭದಲ್ಲಿ ದಸರಾ ಬಂದಿದ್ದರಿಂದ ಗಾಂಧೀಜಿಯನ್ನೇ ದುರ್ಗೆ ಕೊಲ್ಲುವ ರೀತಿ ಚಿತ್ರಿಸಿ ವಿವಾದ ಎಬ್ಬಿಸಲಾಗಿದೆ. ಘಟನೆ ಬಗ್ಗೆ ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
A controversy erupted after a durga puja in Kolkata organised by the All India Hindu Mahasabha depicted the ‘Mahisasura’ as Mahatma Gandhi, sparking a controversy. However, after pressure from the Ministry of Home Affairs , the organisers of the puja changed and removed the face, they alleged.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 03:35 pm
Mangalore Correspondent
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm