ಬ್ರೇಕಿಂಗ್ ನ್ಯೂಸ್
03-10-22 03:42 pm HK News Desk ದೇಶ - ವಿದೇಶ
ಕೊಲ್ಕತ್ತಾ, ಅ.3: ದುರ್ಗಾ ಮೂರ್ತಿಯ ಕಾಲ ಕೆಳಗೆ ಮಹಿಷಾಸುರನ ಬದಲು ಮಹಾತ್ಮ ಗಾಂಧೀಜಿ ಇರುವಂತೆ ಬಿಂಬಿಸಿ ಪ್ರತಿಮೆ ರಚಿಸಿದ್ದು ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕೊಲ್ಕತ್ತಾದಲ್ಲಿ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮೂರ್ತಿಯ ಪೆಂಡಾಲ್ ನಲ್ಲಿ ಈ ರೀತಿ ಚಿತ್ರಿಸಲಾಗಿದ್ದು, ಗೃಹ ಸಚಿವಾಲಯದ ಸೂಚನೆಯಂತೆ ಬಳಿಕ ಗಾಂಧೀಜಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅಖಿಲ ಭಾರತೀಯ ಹಿಂದು ಮಹಾಸಭಾ ವತಿಯಿಂದ ಹಾಕಲಾಗಿದ್ದ ದುರ್ಗಾ ಮಾತೆಯ ಪ್ರತಿಮೆಯಲ್ಲಿ ಅಸುರ ಗಾಂಧಿಯನ್ನು ದುರ್ಗಾಮಾತೆ ಕೊಲ್ಲುವ ರೀತಿ ಚಿತ್ರಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಂದು ಮಹಾಸಭಾ ಪಶ್ಚಿಮ ಬಂಗಾಳ ಘಟಕದ ಕಾರ್ಯಾಧ್ಯಕ್ಷ ಚಂದ್ರಾಚುರ್ ಗೋಸ್ವಾಮಿ, ನಾವು ಗಾಂಧಿಯನ್ನು ನೈಜ ಅಸುರನಾಗಿಯೇ ನೋಡುತ್ತೇವೆ. ಗಾಂಧಿ ಒಬ್ಬ ರಾಕ್ಷಸನಾಗಿದ್ದ. ಅದಕ್ಕಾಗಿಯೇ ಆ ರೀತಿ ಮೂರ್ತಿಯನ್ನು ಚಿತ್ರಿಸಲಾಗಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಗಾಂಧೀಜಿಯನ್ನು ಪ್ರಮೋಟ್ ಮಾಡುತ್ತಿದೆ. ಆದರೆ ನಾವು ಗಾಂಧಿಯನ್ನು ಒಪ್ಪುವುದಿಲ್ಲ. ನಾವು ಅಸುರನಂತೆ ಚಿತ್ರಿಸಿ ಹಾಕಿದ್ದ ಮೂರ್ತಿಯನ್ನು ಬಲವಂತದಿಂದ ಬದಲಿಸಿದ್ದಾರೆ. ನಾವು ಎಲ್ಲ ಕಡೆ ಹಾಕಿರುವ ಗಾಂಧಿ ಚಿತ್ರಣವನ್ನು ತೆಗೆದು ಸುಭಾಸ್ ಚಂದ್ರ ಬೋಸ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಮುನ್ನೆಲೆಯಲ್ಲಿ ಹಾಕಲಿದ್ದೇವೆ ಎಂದು ಗೋಸ್ವಾಮಿ ಹೇಳಿದ್ದಾರೆ. ದಸರಾ ಎಂದರೆ, ಮಹಿಷಾಸುರನನ್ನು ದೇವಿ ಕೊಂದಿರುವ ದಿನವೆಂದು ಪುರಾಣ ನಂಬಿಕೆ. ಅದೇ ರೀತಿ ಅಸುರನನ್ನು ಕೊಂದ ದೇವಿಯ ಪ್ರತೀಕವಾಗಿ ದೇಶದೆಲ್ಲೆಡೆ ದೇವಿಯ ಆರಾಧನೆ ನಡೆಯುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕವಾಗಿ ಗಾಂಧೀಜಿ ಜನ್ಮದಿನದ ಸಂದರ್ಭದಲ್ಲಿ ದಸರಾ ಬಂದಿದ್ದರಿಂದ ಗಾಂಧೀಜಿಯನ್ನೇ ದುರ್ಗೆ ಕೊಲ್ಲುವ ರೀತಿ ಚಿತ್ರಿಸಿ ವಿವಾದ ಎಬ್ಬಿಸಲಾಗಿದೆ. ಘಟನೆ ಬಗ್ಗೆ ತೃಣಮೂಲ ಕಾಂಗ್ರೆಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರೆಲ್ಲ ಪಕ್ಷಗಳು ಖಂಡನೆ ವ್ಯಕ್ತಪಡಿಸಿವೆ.
A controversy erupted after a durga puja in Kolkata organised by the All India Hindu Mahasabha depicted the ‘Mahisasura’ as Mahatma Gandhi, sparking a controversy. However, after pressure from the Ministry of Home Affairs , the organisers of the puja changed and removed the face, they alleged.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm