ಬ್ರೇಕಿಂಗ್ ನ್ಯೂಸ್
23-02-26 11:36 am HK News Desk ಕ್ರೈಂ
ಕಾಸರಗೋಡು, ಫೆ.23: ಚಿನ್ನ ಕದ್ದಿದ್ದಾಳೆಂಬ ಆರೋಪದಿಂದ ಬೇಸತ್ತ ಎರಡು ಮಕ್ಕಳ ತಾಯಿ, ಗೃಹಿಣಿಯೊಬ್ಬಳು ಇಲಿಪಾಷಾಣ ಸೇವಿಸಿ ಸಾವಿಗೆ ಶರಣಾದ ಘಟನೆ ಅಡೂರು ಠಾಣೆ ವ್ಯಾಪ್ತಿಯ ನಾಲತ್ತಡ್ಕ ಎಂಬಲ್ಲಿ ನಡೆದಿದೆ. ಸಾವಿಗೂ ಮುನ್ನ ವಿಡಿಯೋ ಮಾಡಿದ್ದು, ತಾನೇನೂ ತಪ್ಪು ಮಾಡಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
ನಾಲತ್ತಡ್ಕ ನಿವಾಸಿ ಜಸೀಲಾ (24) ಮೃತಪಟ್ಟ ಯುವತಿ. ಕಳೆದ ಭಾನುವಾರ ಫೆ.15ರಂದು ಜಸೀಲಾ ತನ್ನ ಮನೆಯಲ್ಲಿ ವಿಷ ಸೇವಿಸಿದ್ದು, ಆಬಳಿಕ ಕಾಸರಗೋಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು ಫೆ.20ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಈಗ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಯ ಬಗ್ಗೆಯೂ ಆರೋಪ ಕೇಳಿಬಂದಿದೆ. ಜಸೀಲಾ ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದು ಕಳವು ಆರೋಪದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ.
ಜಸೀಲಾ ಅವರು ನೆರೆಮನೆಯ ಗೆಳತಿಯೊಂದಿಗೆ ಕೋಜಿಕ್ಕೋಡ್ ತೆರಳಿದ್ದರು. ಹಿಂದಿರುಗಿ ಬಂದಿದ್ದ ಸಂದರ್ಭದಲ್ಲಿ 9.5 ಪವನ್ ಚಿನ್ನದ ಸರ ಕಳವಾಗಿತ್ತು. ಜಸೀಲಾ ಜೊತೆಗೆ ತೆರಳಿದ್ದಾಗ ಕಳವಾಗಿದ್ದೆಂದು ಹೇಳಿ ಆ ಮನೆಯವರು ಆರೋಪ ಮಾಡಿದ್ದರು. ಇದರಂತೆ, ಅಡೂರು ಪೊಲೀಸರು ಜಸೀಲಾ ಮನೆಗೆ ಬಂದು ಶೋಧ ನಡೆಸಿದ್ದರು. ಅಲ್ಲದೆ, ಆಕೆಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದರು. ಇದರಿಂದ ಜಸೀಲಾ ಮನೆಯವರು ತೀವ್ರ ನೊಂದಿದ್ದರು. ಜಸೀಲಾ ತಾನು ಕದ್ದಿಲ್ಲ ಎಂದು ಹೇಳಿದರೂ, ಆಕೆಯ ಗಂಡ ಮತ್ತು ಅತ್ತೆ ಈಕೆಯ ಬಗ್ಗೆಯೇ ಆರೋಪ ಮಾಡಿದ್ದರು.
ನಾನು ಚಿನ್ನ ಕದ್ದಿದ್ದಾಗಿ ಆರೋಪಿಸಿ ಪೊಲೀಸರು ಮನೆಯನ್ನು ಶೋಧ ಮಾಡಿದರು. ಇದರಿಂದ ನನ್ನ ಮನೆಯವರು ತೀವ್ರ ಬೇಸರಗೊಂಡಿದ್ದಾರೆ. ನಾನು ಕದ್ದಿದ್ದರೆ ಅಲ್ವಾ ಕೊಡೋದು. ನಾನು ಎಲ್ಲಿಂದ ಚಿನ್ನ ತಂದು ಕೊಡಲಿ. ನಾನು ಸತ್ತರೆ ಇದಕ್ಕೆ ಕಿರುಕುಳ ಕೊಟ್ಟವರನ್ನೇ ಶಿಕ್ಷಿಸಬೇಕು. ನಾನು ಕದ್ದಿಲ್ಲ ಅಂದರೂ ಕೇಳುತ್ತಿಲ್ಲ. ಪೊಲೀಸರು ನನ್ನನ್ನು ಯಾಕೆ ಪೀಡಿಸುತ್ತಿದ್ದಾರೆ ಎಂದು ಆಕೆ ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾಳೆ.
ಜಸೀಲಾ ತಾಯಿ ಮಾಧ್ಯಮಕ್ಕೆ ಮಾತನಾಡಿದ್ದು ನನ್ನ ಮಗಳು ಖುರಾನ್ ಮೇಲೆ ಕೈಯಿಟ್ಟು ಹೇಳಿದರೂ ಆಕೆಯ ಗಂಡ ಮತ್ತು ಕುಟುಂಬದವರು ಕೂಡ ನಂಬಲಿಲ್ಲ. ಚಿನ್ನ ಕಳವಾಗಿದೆ ಎಂದು ಹೇಳಿದ ಮನೆಯವರು ನಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದರು. ಇದರಿಂದಾಗಿ ಮಗಳು ತೀವ್ರ ನೊಂದುಕೊಂಡಿದ್ದಳು ಎಂದಿದ್ದಾರೆ. ಈ ಬಗ್ಗೆ ಜಸೀಲಾ ಮನೆಯವರು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.
ಅಡೂರು ಪೊಲೀಸರು ಚಿನ್ನ ಕಳವು ಪ್ರಕರಣ ಸಂಬಂಧಿಸಿ ಜಸೀಲಾಳನ್ನು ಕರೆದು ವಿಚಾರಣೆ ನಡೆಸಿದ್ದರು. ಆನಂತರ ಸರಿಯಾದ ಸಾಕ್ಷ್ಯ ಸಿಕ್ಕಿಲ್ಲವೆಂದು ಹಿಂದಕ್ಕೆ ಕಳಿಸಿದ್ದರು. ಸದ್ಯಕ್ಕೆ ಪೊಲೀಸರು ಯುವತಿ ಸಾವಿನ ಬಗ್ಗೆ ಮತ್ತು ಚಿನ್ನ ಕಳವು ದೂರಿನ ಬಗ್ಗೆ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
29-05-26 10:41 pm
HK News Staffer
ಒಬ್ಬರಿಗೆ ಒಂದೇ ಹುದ್ದೆ ; ಕೆಪಿಸಿಸಿ ಅಧ್ಯಕ್ಷ ಹುದ್ದ...
29-05-26 04:30 pm
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 10:21 pm
HK News Staffer
Expert College Case, Mangalore: ಕೋವಿಡ್ ಲಾಕ್ಡ...
29-05-26 08:30 pm
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am