ಮದುವೆ ದಿಬ್ಬಣ ಹೊರಟಿದ್ದ ಬಸ್ ಹೊಂಡಕ್ಕೆ ; 32 ಜನರ ದುರ್ಮರಣ, 20ಕ್ಕೂ ಹೆಚ್ಚು ಗಾಯ  

05-10-22 04:05 pm       HK News Desk   ದೇಶ - ವಿದೇಶ

ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ 500 ಮೀಟರ್ ಆಳದ ಹೊಂಡಕ್ಕೆ ಬಿದ್ದು 32 ಜನರು ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ.   

ನವದೆಹಲಿ, ಅ.5 : ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ 500 ಮೀಟರ್ ಆಳದ ಹೊಂಡಕ್ಕೆ ಬಿದ್ದು 32 ಜನರು ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ.   

ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ್ದು, ಧುಮಾಕೋಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಮ್ದಿ ಎಂಬಲ್ಲಿ ಘಟನೆ ನಡೆದಿದೆ. ಹರಿದ್ವಾರದ ಲಾಲ್ ದಾಂಗ್ ನಿಂದ ಪೌರಿ ಜಿಲ್ಲೆಯ ಬಿರ್ಖಾಲ್ ಎಂಬಲ್ಲಿಗೆ ಬಸ್ ತೆರಳುತ್ತಿತ್ತು. ಮದುವೆ ದಿಬ್ಬಣಕ್ಕೆ ಹೊರಟಿದ್ದವರನ್ನು ಹೊತ್ತುಕೊಂಡು ಬಸ್ ತೆರಳುತ್ತಿತ್ತು.

ಬಸ್ ಅವಘಡದ ಬಗ್ಗೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಆಘಾತ ವ್ಯಕ್ತಪಡಿಸಿದ್ದು, ಕೂಡಲೇ ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ರಕ್ಷಣಾ ಕಾರ್ಯಕ್ಕೆ ಕಳಿಸಿಕೊಟ್ಟಿದ್ದಾರೆ. ಪ್ರಧಾನ ಮಂತ್ರಿ ಕಾರ್ಯಾಲಯ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ಕೇಳಿ ಹೃದಯ ಕಲಕಿದೆ. ಮೃತರ ಕುಟುಂಬಗಳ ಬಗ್ಗೆ ಸಾಂತ್ವನ ಹೇಳಿದ್ದಾರೆ. ಬಸ್ ಅವಘಡ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

At least 32 people were killed and as many as 20 sustained injuries after a passenger bus carrying around 55 people fell into a 500-metre deep gorge in Uttarakhand's Kotdwar district on Tuesday. Teams of SDRF and NDRF are carrying out rescue operations and the injured have been shifted to the hospital.The bus lost control and fell into the gorge near Simdi village in the Dhumakote police station area of Pauri district. It was going from Laldhang in Haridwar district to Birkhal block of Pauri district.