ಪಾಕ್ ಜೊತೆ ನಾವು ಯಾಕೆ ಮಾತಾಡ್ಬೇಕು, ನಾವು ಕಾಶ್ಮೀರಿ ಜನರೊಂದಿಗೆ ಮಾತಾಡ್ತೀವಿ, 70 ವರ್ಷ ಆಳಿದವರು ಕಾಶ್ಮೀರಕ್ಕೇನು ಕೊಟ್ಟಿದ್ದಾರೆ ; ಅಮಿತ್ ಷಾ

05-10-22 07:17 pm       HK News Desk   ದೇಶ - ವಿದೇಶ

70 ವರ್ಷ ಆಳ್ವಿಕೆ ನಡೆಸಿದವರು ಪಾಕಿಸ್ಥಾನದ ಜೊತೆ ಮಾತನಾಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಯಾಕೆ ನಾವು ಪಾಕಿಸ್ಥಾನದ ಜೊತೆ ಮಾತನಾಡಬೇಕೆಂದು ನಾನು ಕೇಳುತ್ತೇನೆ.

ಶ್ರೀನಗರ, ಅ.5: 70 ವರ್ಷ ಆಳ್ವಿಕೆ ನಡೆಸಿದವರು ಪಾಕಿಸ್ಥಾನದ ಜೊತೆ ಮಾತನಾಡುವುದಾಗಿ ಹೇಳುತ್ತಾ ಬಂದಿದ್ದರು. ಆದರೆ ಯಾಕೆ ನಾವು ಪಾಕಿಸ್ಥಾನದ ಜೊತೆ ಮಾತನಾಡಬೇಕೆಂದು ನಾನು ಕೇಳುತ್ತೇನೆ. ನಾವು ಯಾವತ್ತಿಗೂ ಪಾಕ್ ಜೊತೆ ಮಾತನಾಡುವುದಕ್ಕೆ ಇಚ್ಚಿಸುವುದಿಲ್ಲ. ನಾವು ಕಾಶ್ಮೀರದ ಜನರ ಜೊತೆ ಮಾತನಾಡಲು ಬಯಸುತ್ತೇವೆ, ಬಾರಾಮುಲ್ಲಾ ಜನರ ಜೊತೆ ಮಾತನಾಡುತ್ತೇವೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, 1990ರಿಂದ ಜಮ್ಮು ಕಾಶ್ಮೀರದಲ್ಲಿ 40 ಸಾವಿರ ಸಾಮಾನ್ಯ ಜನರನ್ನು ಉಗ್ರರು ಕೊಂದಿದ್ದಾರೆ. ಆದರೆ ಈಗ ನಾವು ಭಯೋತ್ಪಾದಕರನ್ನು ಕೊಲ್ಲುತ್ತಿದ್ದೇವೆ. ಜಮ್ಮು ಕಾಶ್ಮೀರದಿಂದ ಪೂರ್ತಿಯಾಗಿ ಭಯೋತ್ಪಾದಕರನ್ನು ಹೊಡೆದೋಡಿಸುತ್ತೇವೆ. ದೇಶದಲ್ಲಿ ಅತ್ಯಂತ ಶಾಂತಿಯುತ ಜಾಗವಾಗಿ ಜಮ್ಮು ಕಾಶ್ಮೀರವನ್ನು ಪರಿವರ್ತಿಸುತ್ತೇವೆ ಎಂದು ಹೇಳಿದ್ದಾರೆ.  

In Kashmir, Amit Shah Rules Out Talks With Pak, Says Won't Tolerate Terror

ಕೆಲವು ದಿನಗಳ ಹಿಂದೆ ಮೆಹಬೂಬ ಮುಫ್ತಿ ಟ್ವೀಟ್ ಮಾಡಿ, ಅಮಿತ್ ಷಾ ಇಲ್ಲಿ ಬಂದು ಏನು ಮಾಡುತ್ತಾರೆ, ಏನು ಕೊಟ್ಟಿದ್ದಾರೆ ಎಂದು ಕೇಳಿದ್ದರು. ಆದರೆ ಜಮ್ಮು ಕಾಶ್ಮೀರವನ್ನು ಬಹುಕಾಲ ಆಳಿದ ಮೆಹಬೂಬ ಮುಫ್ತಿ, ಫಾರೂಕ್ ಅಬ್ದುಲ್ಲಾ ಮತ್ತು ಗಾಂಧಿ ಕುಟುಂಬಕ್ಕೆ ಕೇಳಲು ಬಯಸುತ್ತೇನೆ. 70 ವರ್ಷ ಕಾಲ ಆಳಿದ ನೀವು ಕಾಶ್ಮೀರಕ್ಕೆ ಏನು ಕೊಟ್ಟಿದ್ದೀರಿ. ಮೆಹಬೂಬ ಮುಫ್ತಿ ಮತ್ತು ಫಾರೂಕ್ ಅಬ್ದುಲ್ಲಾ ನಾಲ್ಕು ಮೆಡಿಕಲ್ ಕಾಲೇಜು ಆರಂಭಿಸಿದ್ದರು. ನಾವು 2014ರಿಂದ ಈವರೆಗೆ 9 ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದೇವೆ. 2014ರ ನಂತರ ಒಂದು ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಕಾಶ್ಮೀರದ ಪ್ರತಿ ಗ್ರಾಮದ ಹಳ್ಳಿಗೂ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿಯೂ ವಿದ್ಯುತ್ ತಲುಪಿಸಿದ್ದೇವೆ ಎಂದು ಹೇಳಿದರು.

Amit Shah rules out talks with Pakistan, says will wipe out terrorism from  J&K - India News

ಕೆಲವರು ಬಾರಾಮುಲ್ಲಾದಲ್ಲಿ ನನ್ನ ಮಾತನ್ನು ಕೇಳಲು ಯಾರು ಬರುತ್ತಾರೆಂದು ಪ್ರಶ್ನೆ ಮಾಡಿದ್ದರು. ಆದರೆ ಅವರಿಗೆ ಹೇಳಲು ಬಯಸುತ್ತೇನೆ, ಇವತ್ತು ಕಾಶ್ಮೀರದ ಸಾವಿರಾರು ಜನರು ಸೇರಿದ್ದಾರೆ, ದೇಶದ ಅಭಿವೃದ್ಧಿಯ ಗಾಥೆಯನ್ನು ಕೇಳಲು ಬಯಸಿ ಬಂದಿದ್ದಾರೆ. ಮೋದಿಜೀ ಜೊತೆಗೆ ಸಾಥ್ ನೀಡುತ್ತೇವೆಂದು ಹೇಳಲು ಇಲ್ಲಿ ಸೇರಿದ್ದಾರೆ ಎಂದು ಹೇಳಿದ ಅಮಿತ್ ಷಾ, ಎರಡು ದಿನಗಳ ಹಿಂದೆ ರಾಜೌರಿ ಜಿಲ್ಲೆಯ ಪಹಾರಿ ಕಮ್ಯುನಿಟಿಯನ್ನು ಎಸ್ಟಿಗೆ ಸೇರಿಸಿದ್ದ ಬಗ್ಗೆ ಘೋಷಣೆ ಮಾಡಲಾಗಿತ್ತು. ಆ ಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಎಸ್ಟಿ ಮೀಸಲು ಸವಲತ್ತು ಸಿಗಲಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ 370 ವಿಧಿ ಇದ್ದಾಗ ಈ ರೀತಿಯ ಮೀಸಲಾತಿ ಸಾಧ್ಯವಿರಲಿಲ್ಲ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ವಿಚಾರದಲ್ಲಿ ಸುಳಿವಿತ್ತ ಸಚಿವರು, ಈಗಾಗಲೇ ವೋಟರ್ ಲಿಸ್ಟ್ ತಯಾರಾಗುತ್ತಿದೆ, ಅದು ಪೂರ್ಣಗೊಂಡ ಕೂಡಲೇ ಪಾರದರ್ಶಕವಾಗಿ ಚುನಾವಣೆ ನಡೆಯಲಿದೆ ಎಂದು ಹೇಳಿದರು. 

Union Home Minister Amit Shah ruled out holding talks with Pakistan and vowed to wipe out terrorism from Jammu and Kashmir. Addressing a massive rally in Baramullah, Amit Shah said terrorism in J&K has claimed 42,000 lives since the 1990s.The Union minister also tore into the families of the Abdullahs (National Conference), Muftis (PDP) and Nehru-Gandhi (Congress) for the alleged underdevelopment of Jammu and Kashmir as they ruled the erstwhile state most of the time since the country's independence in 1947.