ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಆಮ್‌ ಆದ್ಮಿ ಪಕ್ಷದ ಸಚಿವ ಭಾಗಿ ; 10 ಸಾವಿರ ಹಿಂದೂಗಳು ಬೌದ್ಧ ಧರ್ಮಕ್ಕೆ ಎಂಟ್ರಿ , ಹಿಂದೂ ದೇವರುಗಳ ಪೂಜೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ! 

08-10-22 02:42 pm       HK News Desk   ದೇಶ - ವಿದೇಶ

ಆಮ್​ ಆದ್ಮಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಸಾಮೂಹಿಕ ಮತಾಂತರ ಕಾರ್ಯಕ್ರಮ ಆಯೋಜಿಸಿ 10 ಸಾವಿರ ಹಿಂದೂಗಳನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.

ನವದೆಹಲಿ, ಅ.8: ಆಮ್​ ಆದ್ಮಿ ಸರ್ಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಸಾಮೂಹಿಕ ಮತಾಂತರ ಕಾರ್ಯಕ್ರಮ ಆಯೋಜಿಸಿ 10 ಸಾವಿರ ಹಿಂದೂಗಳನ್ನು ಬೌದ್ಧ ಧರ್ಮಕ್ಕೆ ಮತಾಂತರ ಮಾಡಿದ್ದಾರೆ.

ಮತಾಂತರ ಆಗುವ ಸಂದರ್ಭದಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜೆ ಮಾಡುವುದಿಲ್ಲ ಎಂದು ಮತಾಂತರಗೊಂಡವರಲ್ಲಿ ಪ್ರತಿಜ್ಞೆ ಮಾಡಿಸಲಾಗಿದೆ. ಜತೆಗೆ ಬೌದ್ಧ ಧರ್ಮದಲ್ಲಿ ಪೂರ್ಣ ನಂಬಿಕೆಯನ್ನು ಹೊಂದಬೇಕು ಎಂದು ಸೂಚಿಸಲಾಗಿದೆ.

'ಮಿಷನ್ ಜೈ ಭೀಮ್ ಬೆಂಬಲದೊಂದಿಗೆ, 10,000 ಕ್ಕೂ ಹೆಚ್ಚು ಜನರು ಮತಾಂತರದ ಪ್ರತಿಜ್ಞೆ ಮಾಡಿದ್ದಾರೆ. ಗೌತಮ ಬುದ್ಧನ ನಂಬಿಕೆಗೆ ಮತಾಂತರಗೊಳ್ಳುವ ಮೂಲಕ ಜಾತಿ ಮುಕ್ತ ಮತ್ತು ಅಸ್ಪೃಶ್ಯ ಭಾರತ ನಿರ್ಮಾಣವಾಗುತ್ತಿದೆ' ಎಂದು ಎಎಪಿ ನಾಯಕರೊಬ್ಬರು ಟ್ವೀಟ್ ಮಾಡಿದ್ದಾರೆ.

AAP minister attends mass conversion event in Delhi, BJP demands  resignation for insulting Hindu Gods | Catch News

ಧಮ್ಮ ಚಕ್ರ ಪ್ರವರ್ತನ ದಿನ ಎಂದು ಕರೆಯಲಾಗುವ ಈ ಕಾರ್ಯಕ್ರಮವನ್ನು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ಲಕ್ಷಾಂತರ ಜನ ಅನುಯಾಯಿಗಳ ಜತೆ 1956ರ ಅಕ್ಟೋಬರ್‌ನಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ ದಿನದ ಸ್ಮರಣಾರ್ಥ ಪ್ರತಿ ವರ್ಷ ನಡೆಸಲಾಗುತ್ತದೆ. ಇದರಲ್ಲಿ ಸಾಮೂಹಿಕ ಮತಾಂತರಗಳು ನಡೆಯುತ್ತಿವೆ. ಡಾ. ಅಂಬೇಡ್ಕರ್ ಅವರು, ಹಿಂದೂ ದೇವತೆಗಳನ್ನು ನಿರಾಕರಿಸುವುದು ಸೇರಿದಂತೆ 22 ಪ್ರತಿಜ್ಞೆಗಳನ್ನು ಕೈಗೊಂಡಿದ್ದರು. ಈ ಸಾಮೂಹಿಕ ಮತಾಂತರ ಕಾರ್ಯಕ್ರಮದಲ್ಲಿ ಅವುಗಳನ್ನು ಪುನರುಚ್ಚರಿಸಲಾಗಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಎಎಪಿ ಸಚಿವ, "ಇದನ್ನು ಬುದ್ಧನ ಕಡೆಗಿನ ಯೋಜನೆ ಎನ್ನೋಣ. ಜೈ ಭೀಮ್. ಇಂದು, ಅಶೋಕ ವಿಜಯದಶಮಿಯ 'ಮಿಷನ್ ಜೈ ಭೀಮ್'ನಲ್ಲಿ 10,000ಕ್ಕೂ ಅಧಿಕ ಬುದ್ಧಿಜೀವಿಗಳು ಭಾರತವನ್ನು ಜಾತಿ ಮತ್ತು ಅಸ್ಪೃಶ್ಯತೆ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಶಪಥ ಕೈಗೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

UP BJP top brass to chalk out action plan for civic polls in Lucknow today  - India Today

ಬಿಜೆಪಿ ಆಕ್ರೋಶ ;

ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಎಎಪಿ ನಾಯಕನ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಇದು 'ಭಾರತವನ್ನು ಒಡೆಯುವ' ಯೋಜನೆ ಎಂದು ಕಿಡಿಕಾರಿದೆ.

Guess what Donald Trump and Amit Malviya have in common? | SabrangIndia

AAP MP Raghav Chadha will be arrested soon, charges are being thought up:  Delhi CM Arvind Kejriwal | Cities News,The Indian Express

ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, "ಅರವಿಂದ್ ಕೇಜ್ರಿವಾಲ್ ಅವರ ಸಚಿವ ರಾಜೇಂದ್ರ ಪಾಲ್ ಅವರು "ಭಾರತ ಒಡೆಯುವ" ಯೋಜನೆ ನಡೆಸುತ್ತಿದ್ದಾರೆ. ಹಿಂದೂ ದ್ವೇಷ ಪ್ರಚಾರದ ಪ್ರಮುಖ ಪ್ರಾಯೋಜಕರೇ ಕೇಜ್ರಿವಾಲ್" ಎಂದು ಟೀಕಿಸಿದ್ದಾರೆ.

"ಇದು ಹಿಂದುತ್ವ ಮತ್ತು ಬೌದ್ಧ ಧರ್ಮ ಎರಡಕ್ಕೂ ಅವಮಾನ. ಎಎಪಿ ಸಚಿವರು ಗಲಭೆ ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವರನ್ನು ಕೂಡಲೇ ಪಕ್ಷದಿಂದ ವಜಾಗೊಳಿಸಬೇಕು. ಅವರ ವಿರುದ್ಧ ನಾವು ದೂರು ಸಲ್ಲಿಸುತ್ತಿದ್ದೇವೆ" ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ.

The Aam Aadmi Party (AAP) minister, Rajendra Pal Gautam, recently attended a mass conversion gathering where people allegedly took a pledge to not worship Hindu gods and goddesses. Over 10,000 people on Wednesday gathered at Ambedkar Bhavan in the national capital to take part in the initiation to convert to Buddhism on October 5.