ಬ್ರೇಕಿಂಗ್ ನ್ಯೂಸ್
09-10-22 01:35 pm HK News Desk ದೇಶ - ವಿದೇಶ
ಲಖನೌ, ಅ.9: ಉತ್ತರ ಪ್ರದೇಶದಲ್ಲಿ 8,000 ಕೋಟಿ ರೂ. ವೆಚ್ಚದ ರಸ್ತೆ ಯೋಜನೆ ಘೋಷಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ಕ್ಕೂ ಮುನ್ನ ಅಮೆರಿಕಕ್ಕಿಂತಲೂ ಉತ್ತಮವಾದ ರಸ್ತೆಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುವುದು ಎಂದಿದ್ದಾರೆ.
ಭಾರತೀಯ ರಸ್ತೆ ಕಾಂಗ್ರೆಸ್ನ (ಐಆರ್ಸಿ) 81ನೇ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಕೇಂದ್ರ ಸಚಿವ ಗಡ್ಕರಿ, ತಮ್ಮ ಭಾಷಣದ ವೇಳೆ ಈ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
"ಉತ್ತರ ಪ್ರದೇಶದ ರಸ್ತೆಗಳನ್ನು 2024ಕ್ಕೂ ಮುನ್ನ ಅಮೆರಿಕದ ರಸ್ತೆಗಳಿಗಿಂತಲೂ ಉತ್ತಮವಾಗಿ ಮಾಡಬೇಕಿದೆ. ಇದಕ್ಕಾಗಿ ಮೋದಿ ಸರ್ಕಾರವು ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶಗಳಲ್ಲಿ ಐದು ಲಕ್ಷ ಕೋಟಿ ರೂ ಮಂಜೂರು ಮಾಡುತ್ತಿದೆ" ಎಂದು ಗಡ್ಕರಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ, ಇಂದು ಎಂಟು ಸಾವಿರ ಕೋಟಿ ರೂ ಮೌಲ್ಯದ ಯೋಜನೆ ನೀಡಲಾಗುತ್ತಿದೆ ಎಂದು ಗಡ್ಕರಿ ಘೋಷಿಸಿದ್ದಾರೆ. "ಇದರಲ್ಲಿ ಶಹಬಾದ್- ಹಾರ್ದೋರ್ ಬೈಪಾಸ್, ಶಹಜಾನ್ಪುರ- ಶಹಬಾದ್ ಬೈಪಾಸ್, ಮೊರದಾಬಾದ್- ಠಾಕೂರ್ದ್ವಾರಾ- ಕಾಶೀಪುರ ಬೈಪಾಸ್, ಗಾಜಿಪುರ- ಬಲ್ಲಿಯಾ ಬೈಪಾಸ್, 13 ಆರ್ಒಬಿಗಳು ಸೇರಿದಂತೆ ಒಟ್ಟು 8,000 ಕೋಟಿ ರೂ ಮಂಜೂರು ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಇದು ಇನ್ನೂ ಆರಂಭವಷ್ಟೇ. ಇಡೀ ಸಿನಿಮಾ ಬರಬೇಕಿದೆ ಎಂದಿದ್ದಾರೆ. "ಉತ್ತಮ ರಸ್ತೆಗಳನ್ನು ನಿರ್ಮಿಸಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ" ಎಂದು ಹೇಳಿದ್ದಾರೆ.
"ಈ ಮೂರು ದಿನಗಳ ಐಆರ್ಸಿಯ ಸಮಾವೇಶವು ಎಂಜಿನಿಯರ್ಗಳು, ವೃತ್ತಿಪರರು ಮತ್ತು ಭಾರತ ಹಾಗೂ ವಿದೇಶಗಳ ರಸ್ತೆ ವಲಯದ ಪರಿಣತರು ಜತೆಯಾಗಿ ಬರಲು ಮತ್ತು ಸುರಕ್ಷತೆ ಹಾಗೂ ಸುಸ್ಥಿರ ರಸ್ತೆಗಳ ನಿರ್ಮಾಣದ ಕಡೆಗೆ ಪ್ರಯತ್ನ ಮಾಡುವುದರ ಜತೆ, ಪ್ರಧಾನ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಯೋಜನೆ ಸಾಧಿಸಲು ಮಹತ್ವದ ಅವಕಾಶವಾಗಿದೆ" ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಲಖನೌದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ಗಡ್ಕರಿ ಪರಾಮರ್ಶನಾ ಸಭೆ ಕೂಡ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿನ ಎಲ್ಲ ಹಾಲಿ ಮತ್ತು ಭವಿಷ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
Union Road Transport and Highways Minister Nitin Gadkari on Friday gifted road projects worth ₹ 8,000 crore to Uttar Pradesh and said that the roads of State will be made better than America's before 2024.
06-05-24 01:51 pm
Bangalore Correspondent
R Ashok, Revanna, Prajwal: ರೇವಣ್ಣನನ್ನ ಬಂಧಿಸಿರ...
05-05-24 10:54 pm
Sex Scandal, H D Revanna: ಷಡ್ಯಂತ್ರ ಮಾಡಿ ನನ್ನನ...
05-05-24 09:54 pm
Blue corner notice, Prajwal Revanna: ಪ್ರಜ್ವಲ್...
05-05-24 08:46 pm
Prajwal Revannas, Sexual Assault Video, Harsh...
05-05-24 04:17 pm
06-05-24 12:23 pm
HK News Desk
Accident in Rajasthan: ದೇವರ ದರ್ಶನಕ್ಕೆ ತೆರಳುತ್...
05-05-24 11:51 am
Priyanka Gandhi, Narendra modi, Rahul Gandi:...
04-05-24 03:41 pm
Puri Lok Sabha: ಸೂರತ್, ಇಂದೋರ್ ಬಳಿಕ ಒಡಿಶಾದ ಪುರ...
04-05-24 03:27 pm
ಒಂದೇ ರೀತಿಯ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ...
04-05-24 01:50 pm
06-05-24 02:51 pm
Mangalore Correspondent
Ksrtc Mangalore, crime: ಸೈಡ್ ಕೊಟ್ಟಿಲ್ಲ ಎಂಬ ಕಾ...
06-05-24 02:14 pm
Konkani writer Ronald Sequeira mangalore: ಹಿರ...
06-05-24 01:30 pm
Mangalore Kondana temple, Kotekar: ಕೋಟೆಕಾರು ವ...
05-05-24 08:53 pm
Moodabidri Alvas college, Suicide: ಮೂಡುಬಿದ್ರೆ...
05-05-24 06:43 pm
05-05-24 02:44 pm
HK News Desk
K P K Jeyakumar Dhanasingh: ತಿರುನಲ್ವೇಲಿ ಜಿಲ್ಲ...
04-05-24 11:03 pm
Hubballi Crime Rape Minor, Arrest; ಹುಬ್ಬಳ್ಳಿ...
04-05-24 12:23 pm
Mangalore Fake CBI Call, Crime, Online fraud:...
03-05-24 09:57 pm
House fire, Lover: ಮೂವರು ಮಕ್ಕಳ ತಾಯಿಯನ್ನ ಮದುವ...
03-05-24 03:21 pm