ಮಂತ್ರವಾದಿ ನಂಬಿ ಮಹಿಳೆಯರನ್ನು ಸಂಪುಟದಿಂದ ದೂರವಿಟ್ಟಿದ್ದ ಕೆಸಿಆರ್ ; ಸಚಿವೆ ನಿರ್ಮಲಾ ವಾಗ್ದಾಳಿ 

09-10-22 06:00 pm       HK News Desk   ದೇಶ - ವಿದೇಶ

ಲಂಗಾಣ ಕ್ಯಾಬಿನೆಟ್​​ನಲ್ಲಿ ಮಹಿಳೆಯರಿದ್ದರೇ ಒಳ್ಳೆಯದಲ್ಲ ಎಂದು ಯಾರೋ ಹೇಳಿದ್ದರಿಂದ 2014 ರಿಂದ 2018ರ ವರೆಗೂ ತೆಲಂಗಾಣ ಕ್ಯಾಬಿನೆಟ್​​ನಲ್ಲಿ ಮಹಿಳೆಯರನ್ನು ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ಮಾಡಿದ್ದಾರೆ.

ಹೈದರಾಬಾದ್, ಅ.9: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರಿಗೆ ಮಂತ್ರ-ತಂತ್ರಗಳ ಮೇಲೆ ನಂಬಿಕೆ ಜಾಸ್ತಿ. ತೆಲಂಗಾಣ ಕ್ಯಾಬಿನೆಟ್​​ನಲ್ಲಿ ಮಹಿಳೆಯರಿದ್ದರೇ ಒಳ್ಳೆಯದಲ್ಲ ಎಂದು ಯಾರೋ ಹೇಳಿದ್ದರಿಂದ 2014 ರಿಂದ 2018ರ ವರೆಗೂ ತೆಲಂಗಾಣ ಕ್ಯಾಬಿನೆಟ್​​ನಲ್ಲಿ ಮಹಿಳೆಯರನ್ನು ತೆಗೆದುಕೊಂಡಿರಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ಮಾಡಿದ್ದಾರೆ.

ಪ್ರತ್ಯೇಕ ತೆಲಂಗಾಣ ಸ್ಥಾಪನೆಗಾಗಿಯೇ ಪಕ್ಷವನ್ನು ರಚನೆ ಮಾಡಿದ್ದೆವು ಎಂದು ಹೇಳುತ್ತಿದ್ದ ಕೆಸಿಆರ್​ ಇಂದು ಪಕ್ಷದ ಹೆಸರನ್ನೇ ಬದಲಿಸಿದ್ದಾರೆ. ಇದರ ಹಿಂದಿರುವ ಆಂತರ್ಯವೇನು ಎಂದು ಕೇಂದ್ರ ಸಚಿವೆ ಪ್ರಶ್ನೆ ಮಾಡಿದ್ದಾರೆ. ನೀರು, ನಿಧಿಗಳು, ನೇಮಕಾತಿಗಳು ಎಂಬ ಘೋಷ ವಾಕ್ಯದಡಿ ಟಿಆರ್​ಎಸ್​ ಪಕ್ಷ ಸ್ಥಾಪನೆ ಮಾಡಿ, ಅಧಿಕಾರಕ್ಕೆ ಬಂದ ಬಳಿಕ 3 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿ, ಆ ಭಾರವನ್ನು ಜನರ ಮೇಲೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

K Chandrashekar Rao - BJP slams K Chandrashekar Rao for not welcoming Prime  Minister Narendra Modi - Telegraph India

ಮಂತ್ರವಾದಿ ಹೇಳಿದ ಮಾತುಗಳಿಂದ ಪ್ರೇರಿತರಾಗಿ ಸಿಎಂ ಇದುವರೆಗೂ ಸಚಿವಾಲಯಕ್ಕೆ ಹೋಗದೆ, ಕೇವಲ ಫಾರ್ಮ್​ ಹೌಸ್, ಪ್ರಗತಿ ಭವನಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅಲ್ಲದೆ, ಈ ಹಿಂದೆ ಟಿಆರ್​ಎಸ್ ಪಾರ್ಟಿ ತೆಲಂಗಾಣ ಜನರಿಗೆ ನೀಡಿರುವ ಭರವಸೆಗಳು ಏನಾಗಬೇಕು..? ತೆಲಂಗಾಣ ಮೇಲಿನ ಸೆಂಟಿಮೆಂಟ್​​ನಿಂದಲೇ ಜನರು ಟಿಆರ್​​ಎಸ್​ ಪರ ವೋಟ್​ ಹಾಕಿದ್ದರು. ಆದರೆ ಈಗ ಪಕ್ಷದಲ್ಲಿ ತೆಲಂಗಾಣ ಹೆಸರೇ ಇಲ್ಲದಂತೆ ಮಾಡಿದ್ದಾರೆ. ಸಿಎಂ ಆಗಿ ಇದ್ದಾಗಲೇ ಕೆಸಿಆರ್ ರಾಜ್ಯದ ಜನರಿಗೆ ಏನೂ ಮಾಡಿಲ್ಲ, ಇನ್ನು ದೇಶದ ಜನರಿಗೆ ಇವರು ಏನು ಮಾಡ್ತಾರೆ..? ತೆಲಂಗಾಣ ಜನರಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡದಿರೋರು ದೇಶದ ಜನರಿಗೆ ಏನೋ ಮಾಡ್ತಾರೆ ಅಂತ ಹೇಳಿದ್ರೆ ಯಾರು ನಂಬುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Union finance minister Nirmala Sitharaman alleged that KCR deliberately changed his party's name to Bharat Rashtra Samithi (BRS) "on the advice of Tantriks."