ಬ್ರೇಕಿಂಗ್ ನ್ಯೂಸ್
15-10-22 03:52 pm HK News Desk ದೇಶ - ವಿದೇಶ
ಹೈದರಾಬಾದ್, ಅ.15: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಹಿಂದಿ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ದೇಶಾದ್ಯಂತ ಸದ್ದು ಮಾಡಿದೆ. ತಮಿಳಿನ ಧನುಷ್ ಕಾಂತಾರ ಸಿನಿಮಾವನ್ನು ನೋಡಲೇಬೇಕು ಎಂದು ಟ್ವೀಟ್ ಮಾಡಿದ ಬಳಿಕ ಪಾನ್ ಇಂಡಿಯಾ ಸ್ಟಾರ್ ನಟ ಬಾಹುಬಲಿ ಪ್ರಭಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ ಸ್ಟಾ ಗ್ರಾಮಿನಲ್ಲಿ ಬರೆದುಕೊಂಡಿರುವ ಪ್ರಭಾಸ್, ತಾನು ಎರಡನೇ ಬಾರಿ ಕಾಂತಾರ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅದೊಂದು ಅದ್ಭುತ ಅನುಭವ. ನಾನು ಎರಡನೇ ಬಾರಿ ಥಿಯೇಟರಿನಲ್ಲಿ ಸಿನಿಮಾ ನೋಡಿದ್ದೇನೆ. ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್. ಥಿಯೇಟರಿನಲ್ಲಿ ನೋಡಲೇಬೇಕಾದ ಚಿತ್ರವಿದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ತಮಿಳು ಸೂಪರ್ ಸ್ಟಾರ್ ಧನುಷ್ ಕೂಡ ಟ್ವೀಟ್ ಮಾಡಿ ಹೊಗಳಿದ್ದರು. ಕಾಂತಾರ, ಮೈಂಡ್ ಬ್ಲೋವಿಂಗ್.. ನೋಡಲೇಬೇಕಾದ ಸಿನಿಮಾ.. ರಿಷಬ್ ಶೆಟ್ಟಿ ಹೆಮ್ಮೆ ಪಡುವ ರೀತಿ ನಟಿಸಿದ್ದಾರೆ. ಇಂಥ ಚಿತ್ರ ನೀಡಿದ್ದಕ್ಕಾಗಿ ಅಭಿನಂದನೆಗಳು. ಕಾಂತಾರ ಚಿತ್ರ ತಂಡದ ಎಲ್ಲರಿಗೂ ನಾನು ಅಪ್ಪುಗೆಯ ಅಭಿನಂದನೆ ಹೇಳುತ್ತೇನೆ. ದೇವರು ಒಳ್ಳೆದು ಮಾಡಲಿ ಎಂದು ಹೇಳಿದ್ದರು.
Kantara .. Mind blowing !! A must watch .. Rishab Shetty , you should be very proud of yourself. Congratulations hombale films .. keep pushing the boundaries. A big hug to all the actors and technicians of the film. God bless
— Dhanush (@dhanushkraja) October 14, 2022
ಕಡಿಮೆ ಬಜೆಟ್ಟಿನಲ್ಲಿ ತಯಾರಾಗಿದ್ದ ಕನ್ನಡ ಚಿತ್ರ ಕಾಂತಾರ ಸಿನಿಮಾ, ಐಎಂಡಿಬಿ ರ್ಯಾಂಕ್ ನಲ್ಲಿ ಕೆಜಿಎಫ್ ಚಿತ್ರಕ್ಕಿಂತ ಹೆಚ್ಚು ರೇಟಿಂಗ್ ಪಡೆದಿದೆ. ಸಿನಿಮಾದ ಬಗ್ಗೆ ಅತಿ ಹೆಚ್ಚು ವಿಮರ್ಶೆ, ಮೆಚ್ಚುಗೆಯ ಮಾತುಗಳು ಬಂದಿವೆ. ಕಳೆದ ವಾರ ಕನ್ನಡದ ಸೂಪರ್ ಸ್ಟಾರ್ ಸುದೀಪ್ ಕೂಡ ಕಾಂತಾರ ಸಿನಿಮಾ ನೋಡಿ ಸುದೀರ್ಘ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿದ್ದರು. ಅತ್ಯದ್ಬುತ ನಟನೆ ಎಂದು ಕಾಂತಾರ ಸಿನಿಮಾ ನಟರನ್ನು ಕೊಂಡಾಡಿದ್ದರು. ಸಂಗೀತ ನಿರ್ದೇಶನ ಮಾಡಿದ್ದ ಅಜನೀಶ್ ಲೋಕನಾಥ್ ಅವರ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದರು.
ತೆಲುಗು, ತಮಿಳು ಚಿತ್ರರಂಗದ ದಿಗ್ಗಜರ ಸಿನಿಮಾಗಳ ಜೊತೆಗೆ ಕಾಂತಾರ ಫೈಟ್ ಕೊಟ್ಟಿದೆ. ಮನಿರತ್ನಂ ಅವರ ಪೊನ್ನಿಯಿನ್ ಸೆಲ್ವನ್-1, ನಾಗಾರ್ಜುನ ಅವರ ದಿ ಘೋಸ್ಟ್, ಚಿರಂಜೀವಿ ಅವರ ಗಾಡ್ ಫಾದರ್ ಚಿತ್ರಗಳು ತೆರೆ ಕಂಡಿರುವಾಗಲೇ ಕಾಂತಾರ ತೆಲುಗು, ತಮಿಳು ಭಾಷಿಗರನ್ನು ಆಕರ್ಷಿಸಿದೆ. ಕೇವಲ 16 ಕೋಟಿ ಬಳಸಿ ನಿರ್ಮಿಸಲಾಗಿದ್ದ ಕಾಂತಾರ ಸಿನಿಮಾ ಒಂದೇ ವಾರದಲ್ಲಿ ಅದರ ಮೂರು ಪಟ್ಟು ಕಲೆಕ್ಷನ್ ಮಾಡಿದ್ದು, ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ವಿಶೇಷ.
Kannada film ‘Kantara,’ starring Rishabh Shetty, has been generating a huge buzz across the country. Made on a small budget, Kantara hit the theatres on September 30. The film has been drawing everyone’s attention for its spectacular content and performances.On Friday, pan-India star Prabhas took to Instagram to share his review of the film and revealed that he had watched it twice in theatre.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm