ಜೈಶ್ ಇ-ಮಹಮ್ಮದ್ ಉಗ್ರರ ಹೆಸರಲ್ಲಿ ಹರಿದ್ವಾರ, ಕೇದಾರನಾಥಕ್ಕೆ ಬಾಂಬ್ ಬೆದರಿಕೆ

16-10-22 08:30 pm       HK News Desk   ದೇಶ - ವಿದೇಶ

ಉತ್ತರಾಖಂಡದ ಹರಿದ್ವಾರ, ಕೇದಾರನಾಥ ಸೇರಿದಂತೆ ದೇವಸ್ಥಾನ ಮತ್ತು ರೈಲು ನಿಲ್ದಾಣಗಳಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಜೈಶ್ ಇ- ಮಹಮ್ಮದ್ ಉಗ್ರವಾದಿ ಸಂಘಟನೆ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ.

ಹರಿದ್ವಾರ, ಅ.16: ಉತ್ತರಾಖಂಡದ ಹರಿದ್ವಾರ, ಕೇದಾರನಾಥ ಸೇರಿದಂತೆ ದೇವಸ್ಥಾನ ಮತ್ತು ರೈಲು ನಿಲ್ದಾಣಗಳಿಗೆ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಜೈಶ್ ಇ- ಮಹಮ್ಮದ್ ಉಗ್ರವಾದಿ ಸಂಘಟನೆ ಹೆಸರಲ್ಲಿ ಬೆದರಿಕೆ ಹಾಕಲಾಗಿದೆ. ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ರೈಲು ನಿಲ್ದಾಣಗಳು ಮತ್ತು ದೇವಸ್ಥಾನಗಳನ್ನು ಬಾಂಬಿಟ್ಟು ಸ್ಫೋಟಿಸುವುದಾಗಿ ಪತ್ರ ಬರೆಯಲಾಗಿದೆ.

ಹರಿದ್ವಾರ ರೈಲು ನಿಲ್ದಾಣದ ಸ್ಟೇಶನ್ ಮಾಸ್ಟರ್ ಗೆ ಈ ಬಗ್ಗೆ ಪತ್ರ ಬರೆಯಲಾಗಿದ್ದು, ದೇವಸ್ಥಾನ, ರೈಲು ನಿಲ್ದಾಣ ಸೇರಿದಂತೆ ವಿವಿಧ ಕಡೆ ಬಾಂಬ್ ಇಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದರ ಬೆನ್ನಲ್ಲೇ ಪೊಲೀಸ್ ಮತ್ತು ವಿವಿಧ ಭದ್ರತಾ ಏಜನ್ಸಿಗಳು ಅಲರ್ಟ್ ಆಗಿವೆ. ತನ್ನನ್ನು ಜೈಶ್ ಇ- ಮಹಮ್ಮದ್ ಏರಿಯಾ ಕಮಾಂಡರ್ ಜಮೀರ್ ಅಹ್ಮದ್ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಹಿಂದಿಯಲ್ಲಿ ಪತ್ರವನ್ನು ಬರೆಯಲಾಗಿತ್ತು.

Threats to blow up many railway stations and Chardham, letter received in  the name of Jaish-e-Muhammad: Security increased at Haridwar railway station,  agencies alert – FSJ News | Find Sexy Job &

ಅ.25ರಂದು ರೈಲು ನಿಲ್ದಾಣಗಳನ್ನು ಸ್ಫೋಟಿಸುತ್ತೇವೆ. 27ರಂದು ಚಾರ್ ಧಾಮ್ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಜಿಹಾದಿಗಳ ಹತ್ಯೆಗೆ ಪ್ರತೀಕಾರವಾಗಿ ದಾಳಿ ನಡೆಸುವುದಾಗಿ ಪತ್ರದಲ್ಲಿ ಹೇಳಲಾಗಿದೆ. ಅ.10ರಂದು ಪತ್ರವನ್ನು ಪೋಸ್ಟ್ ಮಾಡಲಾಗಿದ್ದು ರೈಲ್ವೇ ಸ್ಟೇಶನ್ ಮಾಸ್ಟರ್ ಪತ್ರದ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಪೊಲೀಸರನ್ನು ಎಲರ್ಟ್ ಮಾಡಲಾಗಿದೆ. 

In the name of terrorist organization Jaish-e-Mohammed, several railway stations and religious places in Uttarakhand and Uttar Pradesh, including Haridwar railway station, have been threatened with bombs. Haridwar railway station superintendent has received a threatening letter quoting the area commander of the terrorist organization. Security agencies have become alert after receiving the letter. Security has been beefed up at the station.