ಬ್ರೇಕಿಂಗ್ ನ್ಯೂಸ್
25-10-22 06:19 pm HK News Desk ದೇಶ - ವಿದೇಶ
ನವದೆಹಲಿ, ಅ.25: ವಾಟ್ಸಪ್ ಜಾಲತಾಣ ಇಂದು ಮಧ್ಯಾಹ್ನ ಎರಡು ಗಂಟೆಗಳ ಕಾಲ ಸರ್ವರ್ ಡೌನ್ ಆಗಿ ದೇಶಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಟ ನಡೆಸುವಂತಾಯಿತು. ಮಧ್ಯಾಹ್ನ 12ರಿಂದ ಎರಡು ಗಂಟೆ ಕಾಲ ಜನರು ವಾಟ್ಸಪ್ ಮೆಸೇಜ್ ಆಗಲೀ, ವಾಟ್ಸಪ್ ಕರೆಯನ್ನಾಗಲೀ ಮಾಡಲು ಸಾಧ್ಯವಾಗಲಿಲ್ಲ. ವಾಟ್ಸಪ್ ಸಂದೇಶ ಹೋಗದೆ ಕೆಲವರು ತಮ್ಮ ಮೊಬೈಲ್ ಏನೋ ಎಡವಟ್ಟು ಮಾಡಿಕೊಂಡಿದ್ಯೋ ಅಂತ ಸಂಶಯಕ್ಕೀಡಾದರೆ, ಇನ್ನು ಕೆಲವರು ವಾಟ್ಸಪ್ ಸಮಸ್ಯೆಗೀಡಾಗಿದ್ದನ್ನು ಅರಿತು ಹಿಡಿಶಾಪ ಹಾಕಿದರು.
ವಾಟ್ಸಪ್ ಬಳಕೆದಾರರು ಕೂಡಲೇ ಮಾತೃಕಂಪೆನಿ ಮೆಟಾಗೆ ಮೆಸೇಜ್ ಹಾಕಿದ್ರು. ವಾಟ್ಸಪ್ ಸರ್ವರ್ ಡೌನ್ ಅಂತ ಬರೆದು ಟ್ವಿಟರ್ ನಲ್ಲಿ ಕಮೆಂಟ್ ಹಾಕಿದ್ದು ಭಾರೀ ಟ್ರೆಂಡ್ ಆಗಿತ್ತು. ಆನಂತರ, ವಾಟ್ಸಪ್ ಕಂಪನಿಯ ವಕ್ತಾರರು ಶೀಘ್ರದಲ್ಲೇ ಸರಿ ಪಡಿಸಲಾಗುವುದು ಎಂದು ಹೇಳಿಕೆ ಬಿಡುಗಡೆ ಮಾಡಿದರು. ವಾಣಿಜ್ಯ ಬಳಕೆಯ ವಾಟ್ಸಪ್ ಬಳಕೆದಾರರು ದಿಢೀರ್ ಸರ್ವರ್ ಸಮಸ್ಯೆ ಆಗಿದ್ದರಿಂದ ಕಷ್ಟ ಪಡಬೇಕಾಯಿತು. ಇದೇ ವೇಳೆ, ಮೆಟಾ ಕಂಪನಿಯಿಂದಲೇ ನಡೆಸಲ್ಪಡುವ ಫೇಸ್ಬುಕ್, ಇನ್ ಸ್ಟಾಗ್ರಾಮ್, ಮೆಸೆಂಜರ್, ಟ್ವಿಟರ್ ಜಾಲತಾಣಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ವಾಟ್ಸಪ್ ಡೌನ್ ಅನ್ನುವುದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಲಕ್ಷಾಂತರ ಜನರು ಅದೇ ಪೋಸ್ಟನ್ನು ಷೇರ್ ಮಾಡಿದ್ದರು.
ಏನಾಗಿತ್ತು ವಾಟ್ಸಪ್ ಸಮಸ್ಯೆ
ಮೆಟಾ ಕಂಪನಿ ಇನ್ನೂ ವಾಟ್ಸಪ್ ಸಮಸ್ಯೆಗೆ ಖಚಿತ ಕಾರಣ ಏನೆಂದು ಹೇಳಿಲ್ಲ. ವಾಟ್ಸಪ್ ಸಮಸ್ಯೆಗೀಡಾಗಿದ್ದು ಇದು ಮೊದಲೇನಲ್ಲ. ಕಳೆದ 2021ರ ಅಕ್ಟೋಬರ್ ನಲ್ಲಿ ಇದೇ ರೀತಿ ವಾಟ್ಸಪ್ ಸರ್ವರ್ ಡೌನ್ ಆಗಿ ಸ್ತಬ್ಧ ಆಗಿತ್ತು. ಆಗ ಡಿಎನ್ಎಸ್ ವೈಫಲ್ಯದಿಂದಾಗಿ ಸಮಸ್ಯೆ ಆಗಿತ್ತು ಎಂದು ಕಂಪನಿ ಹೇಳಿಕೊಂಡಿತ್ತು. ಇಂದು ಮಧ್ಯಾಹ್ನ ಎರಡು ಗಂಟೆ ನಂತರ ಸಮಸ್ಯೆ ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಆದರೆ ಕೆಲವು ಭಾಗದಲ್ಲಿ ಆನಂತರವೂ ಸಮಸ್ಯೆ ಮುಂದುವರಿದಿತ್ತು. ಭಾರತದಲ್ಲಿ ಅತಿ ಹೆಚ್ಚು ವಾಟ್ಸಪ್ ಬಳಕೆದಾರರಿದ್ದು ಇಡೀ ಜಗತ್ತಿನಲ್ಲಿ ಹೋಲಿಸಿದರೆ ಭಾರತದಲ್ಲಿಯೇ ಹೆಚ್ಚು ಬಳಕೆದಾರರಿದ್ದಾರೆ.
#WhatsApp is working now
— Priya Singh (@priyasi90) October 25, 2022
WhatsApp went down in a major outage affecting the communications app for two hours today. The service started experiencing issues at around 3AM ET, with users greeted with a “connecting” message. WhatsApp web also showed a “make sure your computer has an active internet connection” error. The issues affected users globally, and were resolved around 5AM ET.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm