ಬ್ರೇಕಿಂಗ್ ನ್ಯೂಸ್
25-10-22 06:19 pm HK News Desk ದೇಶ - ವಿದೇಶ
ನವದೆಹಲಿ, ಅ.25: ವಾಟ್ಸಪ್ ಜಾಲತಾಣ ಇಂದು ಮಧ್ಯಾಹ್ನ ಎರಡು ಗಂಟೆಗಳ ಕಾಲ ಸರ್ವರ್ ಡೌನ್ ಆಗಿ ದೇಶಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಟ ನಡೆಸುವಂತಾಯಿತು. ಮಧ್ಯಾಹ್ನ 12ರಿಂದ ಎರಡು ಗಂಟೆ ಕಾಲ ಜನರು ವಾಟ್ಸಪ್ ಮೆಸೇಜ್ ಆಗಲೀ, ವಾಟ್ಸಪ್ ಕರೆಯನ್ನಾಗಲೀ ಮಾಡಲು ಸಾಧ್ಯವಾಗಲಿಲ್ಲ. ವಾಟ್ಸಪ್ ಸಂದೇಶ ಹೋಗದೆ ಕೆಲವರು ತಮ್ಮ ಮೊಬೈಲ್ ಏನೋ ಎಡವಟ್ಟು ಮಾಡಿಕೊಂಡಿದ್ಯೋ ಅಂತ ಸಂಶಯಕ್ಕೀಡಾದರೆ, ಇನ್ನು ಕೆಲವರು ವಾಟ್ಸಪ್ ಸಮಸ್ಯೆಗೀಡಾಗಿದ್ದನ್ನು ಅರಿತು ಹಿಡಿಶಾಪ ಹಾಕಿದರು.
ವಾಟ್ಸಪ್ ಬಳಕೆದಾರರು ಕೂಡಲೇ ಮಾತೃಕಂಪೆನಿ ಮೆಟಾಗೆ ಮೆಸೇಜ್ ಹಾಕಿದ್ರು. ವಾಟ್ಸಪ್ ಸರ್ವರ್ ಡೌನ್ ಅಂತ ಬರೆದು ಟ್ವಿಟರ್ ನಲ್ಲಿ ಕಮೆಂಟ್ ಹಾಕಿದ್ದು ಭಾರೀ ಟ್ರೆಂಡ್ ಆಗಿತ್ತು. ಆನಂತರ, ವಾಟ್ಸಪ್ ಕಂಪನಿಯ ವಕ್ತಾರರು ಶೀಘ್ರದಲ್ಲೇ ಸರಿ ಪಡಿಸಲಾಗುವುದು ಎಂದು ಹೇಳಿಕೆ ಬಿಡುಗಡೆ ಮಾಡಿದರು. ವಾಣಿಜ್ಯ ಬಳಕೆಯ ವಾಟ್ಸಪ್ ಬಳಕೆದಾರರು ದಿಢೀರ್ ಸರ್ವರ್ ಸಮಸ್ಯೆ ಆಗಿದ್ದರಿಂದ ಕಷ್ಟ ಪಡಬೇಕಾಯಿತು. ಇದೇ ವೇಳೆ, ಮೆಟಾ ಕಂಪನಿಯಿಂದಲೇ ನಡೆಸಲ್ಪಡುವ ಫೇಸ್ಬುಕ್, ಇನ್ ಸ್ಟಾಗ್ರಾಮ್, ಮೆಸೆಂಜರ್, ಟ್ವಿಟರ್ ಜಾಲತಾಣಗಳಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ. ವಾಟ್ಸಪ್ ಡೌನ್ ಅನ್ನುವುದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಲಕ್ಷಾಂತರ ಜನರು ಅದೇ ಪೋಸ್ಟನ್ನು ಷೇರ್ ಮಾಡಿದ್ದರು.
ಏನಾಗಿತ್ತು ವಾಟ್ಸಪ್ ಸಮಸ್ಯೆ
ಮೆಟಾ ಕಂಪನಿ ಇನ್ನೂ ವಾಟ್ಸಪ್ ಸಮಸ್ಯೆಗೆ ಖಚಿತ ಕಾರಣ ಏನೆಂದು ಹೇಳಿಲ್ಲ. ವಾಟ್ಸಪ್ ಸಮಸ್ಯೆಗೀಡಾಗಿದ್ದು ಇದು ಮೊದಲೇನಲ್ಲ. ಕಳೆದ 2021ರ ಅಕ್ಟೋಬರ್ ನಲ್ಲಿ ಇದೇ ರೀತಿ ವಾಟ್ಸಪ್ ಸರ್ವರ್ ಡೌನ್ ಆಗಿ ಸ್ತಬ್ಧ ಆಗಿತ್ತು. ಆಗ ಡಿಎನ್ಎಸ್ ವೈಫಲ್ಯದಿಂದಾಗಿ ಸಮಸ್ಯೆ ಆಗಿತ್ತು ಎಂದು ಕಂಪನಿ ಹೇಳಿಕೊಂಡಿತ್ತು. ಇಂದು ಮಧ್ಯಾಹ್ನ ಎರಡು ಗಂಟೆ ನಂತರ ಸಮಸ್ಯೆ ಸ್ವಲ್ಪ ಮಟ್ಟಿಗೆ ಸರಿಯಾಗಿತ್ತು. ಆದರೆ ಕೆಲವು ಭಾಗದಲ್ಲಿ ಆನಂತರವೂ ಸಮಸ್ಯೆ ಮುಂದುವರಿದಿತ್ತು. ಭಾರತದಲ್ಲಿ ಅತಿ ಹೆಚ್ಚು ವಾಟ್ಸಪ್ ಬಳಕೆದಾರರಿದ್ದು ಇಡೀ ಜಗತ್ತಿನಲ್ಲಿ ಹೋಲಿಸಿದರೆ ಭಾರತದಲ್ಲಿಯೇ ಹೆಚ್ಚು ಬಳಕೆದಾರರಿದ್ದಾರೆ.
#WhatsApp is working now
— Priya Singh (@priyasi90) October 25, 2022
WhatsApp went down in a major outage affecting the communications app for two hours today. The service started experiencing issues at around 3AM ET, with users greeted with a “connecting” message. WhatsApp web also showed a “make sure your computer has an active internet connection” error. The issues affected users globally, and were resolved around 5AM ET.
23-02-26 11:14 am
HK News Staffer
ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್...
21-02-26 11:27 am
ಹಾಸನಾಂಬೆ ಉತ್ಸವ ಟೆಂಡರ್ನಲ್ಲಿ ಭಾರೀ ಗೋಲ್ಮಾಲ್ ? ;...
20-02-26 09:20 pm
ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ ; 26 ತ...
19-02-26 09:29 pm
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
22-02-26 06:19 pm
HK News Desk
ಲವ್ ಜಿಹಾದ್’ ತಡೆಗೆ ಗುಜರಾತ್ ನಲ್ಲಿ ವಿವಾಹ ನೋಂದಣಿ...
21-02-26 05:01 pm
ಸುಂಕ ನೀತಿ ಕಾನೂನುಬಾಹಿರ ಎಂದ ಅಮೆರಿಕ ಸುಪ್ರೀಂ ಕೋರ್...
21-02-26 03:07 pm
ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಶರ್ಟ್ ಬಿ...
20-02-26 08:45 pm
ಗಲ್ಫ್ ದೇಶಗಳತ್ತ ಅಮೆರಿಕದ ಯುದ್ಧ ವಿಮಾನಗಳು ; ಇರಾನ್...
19-02-26 11:04 pm
22-02-26 06:55 pm
Mangalore Correspondent
ಸುಜಿತ್ ಮಾಡೂರು ಬಿಜೆಪಿಯಿಂದ ಉಚ್ಚಾಟನೆ ಪ್ರಕರಣ ; ಸಾ...
21-02-26 09:30 pm
ಲೂಡೋ ಆಡುವಾಗ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟು ವರ್...
21-02-26 09:02 pm
Mangalore, SIT, Sridhar: ಶಿಬಾಜೆ ಶ್ರೀಧರ ಮುಗೇರ...
20-02-26 06:05 pm
Kotekar, Mangalore News: ಕೋಟೆಕಾರು ಪ.ಪಂ ಸದಸ್ಯ...
20-02-26 04:18 pm
22-02-26 10:43 pm
Mangalore Correspondent
ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ; ಜೈಶ್ ಕಮಾ...
22-02-26 10:00 pm
ಮದುವೆ ದಿನವೇ ಆಘಾತ ; ಹಸೆಮಣೆ ಏರಬೇಕಿದ್ದ ಇಬ್ಬರು ಸೋ...
22-02-26 09:32 pm
ಒಂದು ಕೋಟಿ ಕಾಮಗಾರಿಗೆ 11 ಲಕ್ಷ ಬೇಡಿಕೆ ; ಗುತ್ತಿಗೆ...
21-02-26 05:50 pm
ಬೆಂಗಳೂರಿನಲ್ಲಿ ಭಯೋತ್ಪಾದಕ ಜಾಲ ; ಎನ್ಐಎ ವಾಂಟೆಡ್ ಲ...
21-02-26 04:29 pm