ಬ್ರೇಕಿಂಗ್ ನ್ಯೂಸ್
31-10-22 05:38 pm HK News Desk ದೇಶ - ವಿದೇಶ
ಕೋಜಿಕ್ಕೋಡ್, ಅ.31 : ಕೇರಳದ ಕೋಝಿಕೋಡ್ ಜಿಲ್ಲೆಯ ನೈನಂವಳಪ್ಪು ಎಂಬಲ್ಲಿ ಸಮುದ್ರ ತೀರದಲ್ಲಿ ಹಠಾತ್ತಾಗಿ 50 ಮೀಟರ್ ಉದ್ದಕ್ಕೆ ಸಮುದ್ರ ಹಿಂದೆ ಸರಿದು ನಿಂತಿದ್ದಲ್ಲದೆ, ಸರೋವರದ ರೀತಿ ಅಲೆಗಳಿಲ್ಲದೆ ನಿಶ್ಚಲವಾಗಿ ನಿಂತ ಘಟನೆ ನಡೆದಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಶನಿವಾರ ಸಂಜೆ ಈ ರೀತಿಯ ವಿದ್ಯಮಾನ ನಡೆದಿದ್ದು ವಿಷಯ ತಿಳಿಯುತ್ತಲೇ ಜನರು ವಿಸ್ಮಯ ನೋಡಲು ಬಂದಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ತಂಡ, ಇದೊಂದು ಪ್ರಕೃತಿ ಸಹಜ ಪ್ರಕ್ರಿಯೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಸುನಾಮಿ ಸಾಧ್ಯತೆಗಳನ್ನು ಅಲ್ಲಗಳೆದಿದೆ.
ಭಾರತೀಯ ಭೂಗರ್ಭಶಾಸ್ತ್ರ ಇಲಾಖೆಯಾಗಲಿ ಇತರೇ ಯಾವುದೇ ತಜ್ಞರು ಭೂಕಂಪ ಅಥವಾ ಸುನಾಮಿ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿಲ್ಲ. ಹೀಗಾಗಿ ಸಮುದ್ರ ತೀರದ ಪ್ರದೇಶದಲ್ಲಿರುವ ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ 200 ಮೀಟರ್ ಉದ್ದಕ್ಕೆ ಸಮುದ್ರ ತೀರದಲ್ಲಿ ಸುಮಾರು 50 ಮೀಟರ್ ನಷ್ಟು ಸಮುದ್ರ ಹಿಂದಕ್ಕೆ ಸರಿದಿದ್ದು ಹಲವು ಗಂಟೆಗಳ ವರೆಗೂ ಅದೇ ಸ್ಥಿತಿ ಉಳಿದಿತ್ತು. ಇದರಿಂದ ಸ್ಥಳೀಯರಲ್ಲಿ ಗಾಬರಿ ಉಂಟಾಗಿತ್ತು. ಸುನಾಮಿ ಸಂದರ್ಭದಲ್ಲಿ ಸಮುದ್ರ ಹಿಂದಕ್ಕೆ ಹೋಗುವ ಪರಿಪಾಠ ಇದ್ದುದರಿಂದ ಜನರು ಭಯಕ್ಕೊಳಗಾಗಿದ್ದರು. 2004 ಮತ್ತು 2017ರಲ್ಲಿ ಭೂಕಂಪದಿಂದ ಸುನಾಮಿ ಉಂಟಾದ ಸಂದರ್ಭದಲ್ಲಿ ಒಮ್ಮೆಲೇ ಸಮುದ್ರ ಹಿಂದಕ್ಕೆ ಹೋದ ಘಟನೆ ನಡೆದಿತ್ತು. ಶನಿವಾರ ರಾತ್ರಿ ಕಳೆದು ಭಾನುವಾರ, ಸೋಮವಾರದ ವೇಳೆಗೆ ಸಮುದ್ರ ಎಂದಿನಂತೆ ಭೋರ್ಗರೆಯುತ್ತಾ ತೀರಕ್ಕೆ ಬಂದಿದ್ದು ಸಹಜವಾಗಿತ್ತು.
കോഴിക്കോട് നൈനാംവളപ്പ് ഭാഗത്ത് കടൽ ഉൾവലിഞ്ഞ ദൃശ്യം#Kozhikode #Kerala pic.twitter.com/JQDGq4uUHA
— News18 Kerala (@News18Kerala) October 29, 2022
For several hours on Saturday evening the sea receded up to 50 metres at the Kothi Beach near Nainamvalappu in Kozhikode. The Kerala State Disaster Management Authority ruled out the possibility of a Tsunami as the withdrawal of sea is normally treated as a natural warning.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm