ಬ್ರೇಕಿಂಗ್ ನ್ಯೂಸ್
06-11-22 11:43 am HK News Desk ದೇಶ - ವಿದೇಶ
ಅಹ್ಮದಾಬಾದ್, ನ.6: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ದುರಂತಕ್ಕೆ ದುರಸ್ತಿ ಕಾರ್ಯ ಕೈಗೊಂಡಿದ್ದ ಅಜಂತಾ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ತೂಗು ಸೇತುವೆಯನ್ನು ಸಾರ್ವಜನಿಕ ಸಂಚಾರ ನಿಷೇಧಿಸಿ ದುರಸ್ತಿ ಕಾರ್ಯ ಕೈಗೊಳ್ಳಲು ಅಜಂತಾ ಒರೆವಾ ಕಂಪನಿಗೆ ವಹಿಸಲಾಗಿತ್ತು. ಆದರೆ ತೂಗು ಸೇತುವೆ ದುರಸ್ತಿ ಅನುಭವ ಹೊಂದಿಲ್ಲದ ಒರೆವಾ ಕಂಪನಿ ಬೇರೊಂದು ಕಂಪನಿಗೆ ಉಪ ಗುತ್ತಿಗೆ ನೀಡಿತ್ತು. ಇದಕ್ಕಾಗಿ ಮೋರ್ಬಿ ನಗರ ಪಾಲಿಕೆಯು ಖಾಸಗಿ ಕಂಪನಿಗೆ ಎರಡು ಕೋಟಿ ರೂಪಾಯಿ ನೀಡಿತ್ತು. ಆದರೆ ಕಂಪನಿಯು ಎರಡು ಕೋಟಿ ಮೊತ್ತದಲ್ಲಿ ಏಳು ತಿಂಗಳ ಅವಧಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮೊತ್ತವನ್ನು ಮಾತ್ರ ದುರಸ್ತಿ ಕಾರ್ಯಕ್ಕೆ ವಹಿಸಿತ್ತು. ಅಂದರೆ ಕೇವಲ ಆರು ಶೇಕಡಾ ಮೊತ್ತವನ್ನು ಮಾತ್ರ ವ್ಯಯಿಸಿತ್ತು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಹೀಗಾಗಿ ಓರೆವಾ ಕಂಪನಿಯ ಭ್ರಷ್ಟಾಚಾರದಿಂದಲೇ ತೂಗು ಸೇತುವೆ ಕುಸಿದು ಬೀಳುವಂತಾಗಿದೆ. ಉಪ ಗುತ್ತಿಗೆ ಪಡೆದಿದ್ದ ದೇವಪ್ರಕಾಶ್ ಸೊಲ್ಯುಷನ್ಸ್ ಕಂಪನಿಯಿಂದ ದುರಸ್ತಿ ಕಾರ್ಯಕ್ಕೆ ವ್ಯಯಿಸಿದ್ದ ಮೊತ್ತದ ಕುರಿತು ದಾಖಲೆಗಳನ್ನು ಪೊಲೀಸರು ಪಡೆದಿದ್ದಾರೆ. ಈ ವೇಳೆ, ಕೇವಲ 12 ಲಕ್ಷ ರೂ. ಮೊತ್ತವನ್ನಷ್ಟೇ ಖರ್ಚು ಮಾಡಿರುವುದು ತಿಳಿದುಬಂದಿದೆ. ಹೀಗಿದ್ದರೂ ಗುಜರಾತಿನ ಹೊಸ ವರ್ಷ ಅಕ್ಟೋಬರ್ 24 ಮತ್ತು ದೀಪಾವಳಿ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆಂದು ತರಾತುರಿಯಲ್ಲಿ ಸೇತುವೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ಆದರೆ ಅತಿಯಾದ ಜನ ದಟ್ಟಣೆಯಿಂದಾಗಿ ಸೇತುವೆ ಕುಸಿದು ಬಿದ್ದಿತ್ತು. ಇದಕ್ಕೆ ಅಜಂತಾ ಒರೆವಾ ಕಂಪನಿಯೇ ಹೊಣೆಯೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
)

ಕಳೆದ ಮಾರ್ಚ್ ತಿಂಗಳಲ್ಲಿ ಅಹ್ಮದಾಬಾದ್ ಮೂಲದ ಅಜಂತಾ ಓರೆವಾ ಕಂಪನಿಗೆ ತೂಗು ಸೇತುವೆಯ ನಿರ್ವಹಣಾ ಗುತ್ತಿಗೆಯನ್ನು 15 ವರ್ಷಕ್ಕೆ ನೀಡಲಾಗಿತ್ತು. ಕಂಪನಿಯ ಅಧ್ಯಕ್ಷ ಜಯಸುಖ್ ಪಟೇಲ್ ಈ ಗುತ್ತಿಗೆಯನ್ನು ಪಡೆದಿದ್ದರು. ಮೇಲ್ನೋಟಕ್ಕೆ ತೂಗು ಸೇತುವೆ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದ್ದು ಮೋರ್ಬಿ ನಗರ ಪಾಲಿಕೆಯ ಅಧಿಕಾರಿಗಳನ್ನೂ ದುರಂತಕ್ಕೆ ಹೊಣೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಮೋರ್ಬಿ ಸೇತುವೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಮೋರ್ಬಿ ಪುರಸಭೆಯ ಮುಖ್ಯಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು.
The shocking collapse of the 143-year-old Morbi suspension footbridge in Gujarat can be termed one of the most tragic events in the recent past. The mishap that occurred on October 30 claimed 135 lives.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm