ಬ್ರೇಕಿಂಗ್ ನ್ಯೂಸ್
22-11-22 08:33 pm HK News Desk ದೇಶ - ವಿದೇಶ
ನವದೆಹಲಿ, ನ.22: ಸೌದಿ ಅರೇಬಿಯಾದಲ್ಲಿ ಕದ್ದವರ ಕೈ ಕಡಿಯುವುದು, ಅತ್ಯಾಚಾರ ಎಸಗಿದವರ ಜನನಾಂಗ ಕಡಿಯುವುದು, ಕೊಲೆ ಮಾಡಿದವರ ತಲೆ ಕಡಿಯುವ ಕಾನೂನು ಇದೆ. ಮುಸ್ಲಿಮರ ಷರಿಯಾ ಕಾನೂನಿನಡಿ ಅಲ್ಲಿ ಅಪರಾಧಿಗಳಿಗೆ ಕ್ರೂರ ಶಿಕ್ಷೆಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೇ ಕಾನೂನಿನಡಿ ಕಳೆದ ಹತ್ತು ದಿನಗಳಲ್ಲಿ 12 ಮಂದಿಯನ್ನು ತಲೆ ಕಡಿಯುವ ಶಿಕ್ಷೆ ಜಾರಿಗೊಳಿಸಲಾಗಿದೆ ಎನ್ನುವ ಸುದ್ದಿ ಬಂದಿದೆ.
ಈ ಬಗ್ಗೆ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು, ಹತ್ತು ದಿನಗಳಲ್ಲಿ 12 ಮಂದಿಯನ್ನು ತಲೆ ಕಡಿಯುವ ಶಿಕ್ಷೆಗೆ ಗುರಿಪಡಿಸಲಾಗಿದೆ. ಅದರಲ್ಲಿ ಮೂರು ಪಾಕಿಸ್ಥಾನೀಯರು, ನಾಲ್ವರು ಸಿರಿಯನ್ನರು, ಇಬ್ಬರು ಜೋರ್ಡಾನ್ ಪ್ರಜೆಗಳು ಮತ್ತು ಮೂವರು ಸೌದಿ ಅರೇಬಿಯಾ ಪ್ರಜೆಗಳಾಗಿದ್ದಾರೆ. ಇಷ್ಟಕ್ಕೂ ಅವರ ಅಪರಾಧ ಏನಿತ್ತೆಂದರೆ, ಅವರು ಅಕ್ರಮವಾಗಿ ಡ್ರಗ್ ಸಾಗಾಟ ಮತ್ತು ಮಾರಾಟದಲ್ಲಿ ತೊಡಗಿರುವುದು.
ಕಳೆದ ಮಾರ್ಚ್ ಒಂದೇ ತಿಂಗಳಲ್ಲಿ ಸೌದಿಯ ಇತಿಹಾಸದಲ್ಲೇ ಅತಿ ಹೆಚ್ಚು ಅಂದರೆ 81 ಮಂದಿಗೆ ಶಿರಚ್ಛೇದ ಶಿಕ್ಷೆಗೆ ಗುರಿ ಪಡಿಸಲಾಗಿದೆ. ಉಗ್ರರಿಗೆ ಬೆಂಬಲ ನೀಡಿದ್ದು ಸೇರಿದಂತೆ ವಿವಿಧ ರೀತಿಯ ಅಪರಾಧಗಳಿಗಾಗಿ ತಲೆ ಕಡಿಯುವ ಶಿಕ್ಷೆ ನೀಡಲಾಗಿದೆ. 2018ರಲ್ಲಿ ಅಮೆರಿಕದ ಪತ್ರಕರ್ತ ಜಮಾಲ್ ಕಶೋಗಿ ಎಂಬಾತನನ್ನು ಸೌದಿಯ ರಾಜನ ಅಪ್ಪಣೆಯಂತೆ ತಲೆ ಕಡಿಯಲಾಗಿತ್ತು. ಈ ಕೃತ್ಯಕ್ಕೆ ಜಗತ್ತಿನಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು. ಆನಂತರ, ಎರಡು ವರ್ಷಗಳಲ್ಲಿ ತಲೆ ಕತ್ತರಿಸುವ ಶಿಕ್ಷೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಹಳೆ ಮಾದರಿಯ ಶಿರಚ್ಛೇದ ಶಿಕ್ಷೆ ಜಾರಿ ಮಾಡಲಾಗುತ್ತಿದೆ. 2018ರ ನಂತರ ಕೇವಲ ಕೊಲೆ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಮಾತ್ರ ಶಿರಚ್ಛೇದ ಶಿಕ್ಷೆ ಜಾರಿಗೊಳಿಸುವ ಬಗ್ಗೆ ಸರಕಾರ ತೀರ್ಮನ ಕೈಗೊಂಡಿತ್ತು. ಆದರೆ ಇತ್ತೀಚೆಗೆ ಅಲ್ಲಿನ ರಾಜನ ನಿಧನಾನಂತರ ಹೊಸ ರಾಜನ ಆಗಮನವಾಗಿದ್ದು, ಹಳೆ ಕಾಲದ ಕ್ರೂರ ಶಿಕ್ಷೆಯೂ ಜಾರಿಗೆ ಬಂದಿದೆ.
Saudi Arabia has reportedly executed 12 people in the last 10 days for drug-related offences. Some of these were beheadings with a sword, a report said. As many as 12 people were sentenced to death after being imprisoned on non-violent drug charges and included three Pakistanis, four Syrians, two Jordanians and three Saudis, the Telegraph reported.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
21-12-25 01:18 pm
Mangalore Correspondent
Fraud Abroad Job Scam, Mangalore, Armenia: ಅರ...
18-12-25 04:53 pm
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm