ಬ್ರೇಕಿಂಗ್ ನ್ಯೂಸ್
24-11-22 01:24 pm HK News Desk ದೇಶ - ವಿದೇಶ
ನವದೆಹಲಿ, ನ.24: ಹಾಲೆಂಡ್ ನಿಂದ ಮಲೇಶ್ಯಾಕ್ಕೆ ತೆರಳುತ್ತಿದ್ದ ಜೆಟ್ ವಿಮಾನವನ್ನು ಕ್ಷಿಪಣಿ ಉಡಾಯಿಸಿ ಹೊಡೆದುರುಳಿಸಿದ್ದ ಮೂವರಿಗೆ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯ ಜೀವಿತಾವಧಿ ಶಿಕ್ಷೆಯನ್ನು ವಿಧಿಸಿದೆ.
2014ರಲ್ಲಿ ಹಾಲೆಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನಗರದಿಂದ ಮಲೇಶ್ಯಾದ ಕೌಲಾಲಂಪುರಕ್ಕೆ ಜೆಟ್ ವಿಮಾನ ತೆರಳುತ್ತಿತ್ತು. ವಿಮಾನ ಪೂರ್ವ ಉಕ್ರೇನ್ ಭಾಗದಲ್ಲಿ ಸಾಗುತ್ತಿದ್ದಾಗ ನಾಲ್ಕು ಜನ ಬಂಡುಕೋರರು ವಿಮಾನಕ್ಕೆ ಗುರಿಯಿಟ್ಟಿದ್ದರು. ಇದರಿಂದ ವಿಮಾನ ಸ್ಫೋಟಗೊಂಡು ಪತನವಾಗಿದ್ದು, ಅದರಲ್ಲಿದ್ದ 80 ಮಕ್ಕಳು ಸೇರಿ ಎಲ್ಲ 298 ಮಂದಿಯೂ ಸಾವನ್ನಪ್ಪಿದ್ದರು. ರಷ್ಯಾದ ಮಾಜಿ ಗುಪ್ತಚರ ಏಜಂಟ್ ಈಗರ್ ಗಿರ್ಕಿನ್, ಸರ್ಜಿ ಡಬಿನ್ ಸ್ಕಿ ಮತ್ತು ಉಕ್ರೇನ್ ಬಂಡುಕೋರ ನಾಯಕ ಲಿಯೋನಿಡ್ ಕರ್ಷೆಂಕೋ ಅವರನ್ನು ಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿದ್ದು, ಜೀವಿತಾವಧಿ ಕಠಿಣ ಶಿಕ್ಷೆಗೆ ಗುರಿಪಡಿಸಿದೆ. ಅಲ್ಲದೆ, 16 ಮಿಲಿಯನ್ ಯೂರೋ ಹಣವನ್ನು ದಂಡದ ರೂಪದಲ್ಲಿ ನೀಡಲು ಹೇಳಿದ್ದು, ಅದನ್ನು ಸಂತ್ರಸ್ತರ ಕುಟುಂಬಕ್ಕೆ ನೀಡುವಂತೆ ಹೇಳಿದೆ. ಇನ್ನೊಬ್ಬ ಆರೋಪಿ ರಷ್ಯಾ ಪ್ರಜೆ ಒಲೆಗ್ ಪುಲತೊವ್ ನನ್ನು ಕೋರ್ಟ್ ಖುಲಾಸೆ ಮಾಡಿದೆ.



ಆರೋಪಿಗಳು ಮಿಲಿಟರಿ ವಿಮಾನ ಹೊಡೆದುರುಳಿಸುವ ಗುರಿ ಹೊಂದಿದ್ದರು. ತಪ್ಪಾಗಿ ಪ್ಯಾಸೆಂಜರ್ ವಿಮಾನಕ್ಕೆ ಕ್ಷಿಪಣೆ ಉಡಾಯಿಸಿದ್ದರು. ಆದರೆ ವಿಮಾನ ಹೊಡೆಯುವುದು ಅಕ್ಷಮ್ಯ ಅಪರಾಧ ಎಂದು ನ್ಯಾಯಾಧೀಶರು ವಿಚಾರಣೆಯಲ್ಲಿ ಹೇಳಿದ್ದರು. ತನ್ನ ಇಬ್ಬರು ಪ್ರಜೆಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದ್ದಕ್ಕೆ ಕಿಡಿಕಾರಿರುವ ರಷ್ಯಾ, ನಮ್ಮವರು ವಿಮಾನ ಪತನ ಮಾಡಿದ್ದು ಅಲ್ಲ. ನ್ಯಾಯಾಲಯ ಇಂಥ ತೀರ್ಪು ನೀಡಿದ್ದು ದುರಂತಕಾರಿ ಎಂದು ಹೇಳಿದೆ.

2014ರ ಜುಲೈ 17ರಂದು ಮಲೇಶ್ಯಾಕ್ಕೆ ಸೇರಿದ ಎಂಎಚ್ 17 ಹೆಸರಿನ ಜೆಟ್ ವಿಮಾನ ಪತನಗೊಂಡಿತ್ತು. ಅದಕ್ಕೆ ರಷ್ಯನ್ ಬಂಡುಕೋರರ ದಾಳಿ ಎನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನಾಲ್ಕು ಮಂದಿಯನ್ನು ಉಕ್ರೇನ್ ಸರಕಾರ ಬಂಧಿಸಿತ್ತು. ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಇದೀಗ ರಷ್ಯನ್ ಪ್ರಜೆಗಳಿಗೆ ಕಠಿಣ ಶಿಕ್ಷೆ ಜಾರಿಗೊಳಿಸಿದೆ. ಘಟನೆಯಲ್ಲಿ 17 ದೇಶಗಳ ಜನರು ಸತ್ತಿದ್ದರು. 198 ಹಾಲೆಂಡ್ ಪ್ರಜೆಗಳು, 43 ಮಲೇಶ್ಯಾ, 38 ಆಸ್ಟ್ರೇಲಿಯಾ, ಹತ್ತು ಮಂದಿ ಇಂಗ್ಲೆಂಡ್ ಪ್ರಜೆಗಳಿದ್ದರು. ಒಬ್ಬರು 41 ವರ್ಷದ ಭಾರತೀಯ ಪ್ರಜೆ ವಿಮಾನದ ಸಿಬಂದಿಯಾಗಿದ್ದು, ಅವಘಡದಲ್ಲಿ ತೀರಿಕೊಂಡಿದ್ದರು.
A Dutch court sentenced three men to life imprisonment in the downing of Malaysia Airlines flight MH17 over Ukraine 2014, in the early stages of a war that eight years later would put the world on edge.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm