ಬ್ರೇಕಿಂಗ್ ನ್ಯೂಸ್
03-12-22 11:12 pm HK News Desk ದೇಶ - ವಿದೇಶ
ಚೆನ್ನೈ, ಡಿ.3 : ಮತಾಂತರಗೊಂಡವರಿಗೆ ಯಾವುದೇ ಮೀಸಲು ನೀಡುವಂತಿಲ್ಲ ಎಂಬ ಮಹತ್ವದ ಆದೇಶ ಹೊರಬಿದ್ದಿದೆ. ಮತಾಂತರಗೊಂಡವರು ತಮ್ಮ ಹಿಂದಿನ ಜಾತಿಯ ಮೀಸಲಾತಿಯನ್ನು ಕೇಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಇಸ್ಲಾಮ್ಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ ಮೀಸಲಾತಿ ಸಲುವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ ಶನಿವಾರ ಈ ಆದೇಶವನ್ನು ನೀಡಿದೆ.
ಇನ್ನೊಂದು ಧರ್ಮಕ್ಕೆ ಮತಾಂತರಗೊಂಡ ಮೇಲೆ ಜಾತಿಯ ಮೀಸಲಾತಿ ಕೇಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ. ಹಿಂದುಳಿದ ವರ್ಗದ ಹಿಂದು ವ್ಯಕ್ತಿಯೊಬ್ಬ ಇಸ್ಲಾಮ್ಗೆ ಮತಾಂತರಗೊಂಡು ಜಾತಿ ಮೀಸಲಾತಿ ಕೇಳಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ದೂರುದಾರ ವ್ಯಕ್ತಿ 2008ರಲ್ಲಿ ಇಸ್ಲಾಮ್ಗೆ ಮತಾಂತರಗೊಂಡಿದ್ದು, 2018ರಲ್ಲಿ ತಮಿಳುನಾಡು ಕಂಬೈನ್ಡ್ ಸಿವಿಲ್ ಸರ್ವಿಸಸ್ ಎಕ್ಸಾಮ್ಗೆ ಹಾಜರಾಗಿದ್ದ. ಆದರೆ ಈತ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲ್ಪಟ್ಟಿದ್ದರಿಂದ ಅರ್ಹತೆ ಪಡೆಯದಿರುವುದು ತಿಳಿದುಬಂದಿದೆ. ಆಗ ಈತ ರಾಜ್ಯ ಸರ್ಕಾರದ ಉದ್ಯೋಗಕ್ಕೆ ಸಂಬಂಧಿಸಿದಂತೆ ತನ್ನ ಜನ್ಮತಃ ಜಾತಿ ಮೀಸಲಾತಿ ಪರಿಗಣಿಸುವಂತೆ ಕೋರಿದ್ದ. ತನ್ನನ್ನು ಹಿಂದುಳಿದ ಮುಸ್ಲಿಂ ಎಂದು ಪರಿಗಣಿಸಬೇಕು ಎಂದು ಆತ ಕೇಳಿದ್ದ.
ತಮಿಳುನಾಡು ಸರ್ಕಾರ ಕೆಲವು ಮುಸ್ಲಿಮರನ್ನು ಅತಿ ಹಿಂದುಳಿದ ಸಮುದಾಯ ಎಂದು ಪರಿಗಣಿಸುತ್ತಿದೆ. ಆದರೆ ನ್ಯಾಯಾಲದಲ್ಲಿ ಈತನ ಅರ್ಜಿ ತಿರಸ್ಕೃತಗೊಂಡಿದ್ದು, ಮತಾಂತರಗೊಂಡರೆ ಜಾತಿ ಮೀಸಲಾತಿ ಅನ್ವಯಿಸುವುದಿಲ್ಲ ಎಂಬ ಆದೇಶ ನೀಡಲಾಗಿದೆ.
The Madras High Court recently observed that a person who has converted to another religion cannot claim the benefits of his community before conversion unless it is expressly granted by the State. Justice GR Swaminathan of the Madurai bench was hearing the plea of a candidate challenging the action of the Tamil Nadu Public Service Commission in not treating him as "Backward Class (Muslim)" but considering him as "General" category in the Combined Civil Services Examination-II (Group-II Services).
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm