ಬ್ರೇಕಿಂಗ್ ನ್ಯೂಸ್
21-12-22 08:37 pm HK News Desk ದೇಶ - ವಿದೇಶ
ನವದೆಹಲಿ, ಡಿ.21 : ಮಾನವ ರಹಿತ ವೈಮಾನಿಕ ವಾಹನಗಳ ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋಣ್ ಗಳನ್ನು ಅಮೆರಿಕದಿಂದ ಖರೀದಿಸಲು ಭಾರತವು ಮುಂದಾಗಿದೆ. ಇದಕ್ಕಾಗಿ ಅಮೆರಿಕದೊಂದಿಗೆ ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಿದೆ.
ನಿಖರವಾದ ಗುರಿಗಳನ್ನು ಲೇಸರ್ ಆಧರಿಸಿ ಬೆನ್ನತ್ತಿ ಕ್ಷಿಪಣಿಗಳನ್ನು ಉಡಾಯಿಸುವುದರಿಂದ ಈ ಮಾದರಿಯ ಡ್ರೋಣ್ ಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಅಸ್ತ್ರ ಎಂದು ಪರಿಗಣಿಸಲಾಗಿದೆ. ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್ ಜವಾಹಿರಿಯನ್ನು ಕೊಲ್ಲಲು ಈ ಡ್ರೋಣ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಡಿ.22ರಂದು ನಿಗದಿಯಾಗಿರುವ ರಕ್ಷಣಾ ಉಪಕರಣಗಳ ಖರೀದಿ ಕುರಿತ ಮಂಡಳಿ ಸಭೆಯಲ್ಲಿ ಚರ್ಚೆಗೆ ಪಟ್ಟಿ ಮಾಡಲಾದ ಪ್ರಸ್ತಾವನೆಗಳಲ್ಲಿ ಎಂಕ್ಯು-9 ರೀಪರ್ ಖರೀದಿಯೂ ಒಂದು ಎನ್ನಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆ ಕಾರ್ಯದರ್ಶಿ, ರಕ್ಷಣಾ ಸಚಿವಾಲಯದ ಇತರ ಉನ್ನತ ಅಧಿಕಾರಿಗಳು, ಕಿರಿಯ ಸಚಿವರು ಮತ್ತು ಮೂರು ಸೇನೆಗಳ ಮುಖ್ಯಸ್ಥರು ಮಂಡಳಿಯ ಸದಸ್ಯರು. ಇವರ ಸಭೆಯಲ್ಲಿ ಈ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಗುಪ್ತಚರ, ಕಣ್ಗಾವಲು, ವಿಚಕ್ಷಣ ಮತ್ತು ನಿಖರ ದಾಳಿಗಳಿಗೆ ಈ ಮಾದರಿಯ ಡ್ರೋಣ್ ಗಳನ್ನು ಬಳಸಲಾಗುತ್ತದೆ. ಇದನ್ನು ಭೂಮಿಯ ಮೇಲಿನ ನಿಲ್ದಾಣ ಮತ್ತು ಹಡಗಿನಿಂದಲೂ ನಿಯಂತ್ರಿಸಬಹುದು. ಮೂಲಗಳ ಪ್ರಕಾರ, ಸರ್ಕಾರವು 30 MQ-9 ವಾಹನಗಳನ್ನು ಮೂರು ಸೇನಾ ಪಡೆಗಳಿಗೆ ತಲಾ 10ರಂತೆ ಖರೀದಿಸಲು ಯೋಜಿಸಿದೆ.
ಭಾರತೀಯ ನೌಕಾಪಡೆಯು 2017 ರಲ್ಲಿ ಎರಡು MQ-9 ಗಳನ್ನು ಎರಡು ವರ್ಷಗಳ ಗುತ್ತಿಗೆಗೆ ಪಡೆದಿತ್ತು. ಹಿಂದೂ ಮಹಾಸಾಗರದಲ್ಲಿ ಕಣ್ಗಾವಲಿಗಾಗಿ ಅವುಗಳನ್ನು ಪಡೆಯಲಾಗಿತ್ತು.
India is likely to enter into a billion-dollar deal with the US to buy MQ-9 Reaper drones, which fall in the category of hunter-killer Unmanned Aerial Vehicles (UAVs). They are considered the world’s most dangerous as they use laser-guided Hellfire missiles for precision strikes. The drone was reportedly used to kill Al-Qaeda chief Ayman al-Zawahiri.Sources said their purchase is one of the proposals listed for discussion in the Defence Acquisition Council (DAC) meet scheduled on Thursday.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm