ಬ್ರೇಕಿಂಗ್ ನ್ಯೂಸ್
21-12-22 08:37 pm HK News Desk ದೇಶ - ವಿದೇಶ
ನವದೆಹಲಿ, ಡಿ.21 : ಮಾನವ ರಹಿತ ವೈಮಾನಿಕ ವಾಹನಗಳ ವರ್ಗಕ್ಕೆ ಸೇರುವ ಎಂಕ್ಯೂ -9 ರೀಪರ್ ಡ್ರೋಣ್ ಗಳನ್ನು ಅಮೆರಿಕದಿಂದ ಖರೀದಿಸಲು ಭಾರತವು ಮುಂದಾಗಿದೆ. ಇದಕ್ಕಾಗಿ ಅಮೆರಿಕದೊಂದಿಗೆ ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲಿದೆ.
ನಿಖರವಾದ ಗುರಿಗಳನ್ನು ಲೇಸರ್ ಆಧರಿಸಿ ಬೆನ್ನತ್ತಿ ಕ್ಷಿಪಣಿಗಳನ್ನು ಉಡಾಯಿಸುವುದರಿಂದ ಈ ಮಾದರಿಯ ಡ್ರೋಣ್ ಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ಅಸ್ತ್ರ ಎಂದು ಪರಿಗಣಿಸಲಾಗಿದೆ. ಅಲ್-ಖೈದಾ ಮುಖ್ಯಸ್ಥ ಅಯಮಾನ್ ಅಲ್ ಜವಾಹಿರಿಯನ್ನು ಕೊಲ್ಲಲು ಈ ಡ್ರೋಣ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಡಿ.22ರಂದು ನಿಗದಿಯಾಗಿರುವ ರಕ್ಷಣಾ ಉಪಕರಣಗಳ ಖರೀದಿ ಕುರಿತ ಮಂಡಳಿ ಸಭೆಯಲ್ಲಿ ಚರ್ಚೆಗೆ ಪಟ್ಟಿ ಮಾಡಲಾದ ಪ್ರಸ್ತಾವನೆಗಳಲ್ಲಿ ಎಂಕ್ಯು-9 ರೀಪರ್ ಖರೀದಿಯೂ ಒಂದು ಎನ್ನಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆ ಕಾರ್ಯದರ್ಶಿ, ರಕ್ಷಣಾ ಸಚಿವಾಲಯದ ಇತರ ಉನ್ನತ ಅಧಿಕಾರಿಗಳು, ಕಿರಿಯ ಸಚಿವರು ಮತ್ತು ಮೂರು ಸೇನೆಗಳ ಮುಖ್ಯಸ್ಥರು ಮಂಡಳಿಯ ಸದಸ್ಯರು. ಇವರ ಸಭೆಯಲ್ಲಿ ಈ ಕುರಿತು ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಗುಪ್ತಚರ, ಕಣ್ಗಾವಲು, ವಿಚಕ್ಷಣ ಮತ್ತು ನಿಖರ ದಾಳಿಗಳಿಗೆ ಈ ಮಾದರಿಯ ಡ್ರೋಣ್ ಗಳನ್ನು ಬಳಸಲಾಗುತ್ತದೆ. ಇದನ್ನು ಭೂಮಿಯ ಮೇಲಿನ ನಿಲ್ದಾಣ ಮತ್ತು ಹಡಗಿನಿಂದಲೂ ನಿಯಂತ್ರಿಸಬಹುದು. ಮೂಲಗಳ ಪ್ರಕಾರ, ಸರ್ಕಾರವು 30 MQ-9 ವಾಹನಗಳನ್ನು ಮೂರು ಸೇನಾ ಪಡೆಗಳಿಗೆ ತಲಾ 10ರಂತೆ ಖರೀದಿಸಲು ಯೋಜಿಸಿದೆ.
ಭಾರತೀಯ ನೌಕಾಪಡೆಯು 2017 ರಲ್ಲಿ ಎರಡು MQ-9 ಗಳನ್ನು ಎರಡು ವರ್ಷಗಳ ಗುತ್ತಿಗೆಗೆ ಪಡೆದಿತ್ತು. ಹಿಂದೂ ಮಹಾಸಾಗರದಲ್ಲಿ ಕಣ್ಗಾವಲಿಗಾಗಿ ಅವುಗಳನ್ನು ಪಡೆಯಲಾಗಿತ್ತು.
India is likely to enter into a billion-dollar deal with the US to buy MQ-9 Reaper drones, which fall in the category of hunter-killer Unmanned Aerial Vehicles (UAVs). They are considered the world’s most dangerous as they use laser-guided Hellfire missiles for precision strikes. The drone was reportedly used to kill Al-Qaeda chief Ayman al-Zawahiri.Sources said their purchase is one of the proposals listed for discussion in the Defence Acquisition Council (DAC) meet scheduled on Thursday.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
15-09-25 04:57 pm
HK News Desk
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm