ಪೊಲೀಸ್ ಅಧಿಕಾರಿಯಿಂದಲೇ ಗುಂಡೇಟು ; ಬಿಜೆಡಿ ಸರ್ಕಾರದ ಸಿರಿವಂತ ಸಚಿವನಾಗಿದ್ದ ನಬ ಕಿಶೋರ್ ಸಾವು 

29-01-23 10:10 pm       HK News Desk   ದೇಶ - ವಿದೇಶ

ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ  ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. 

ಭುವನೇಶ್ವರ್, ಜ.29 : ಪೊಲೀಸ್ ಸಿಬ್ಬಂದಿಯಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ  ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. 
 
ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚೌಕ ಎಂಬಲ್ಲಿ ಭಾನುವಾರ ಮಧ್ಯಾಹ್ನ 12:30ಕ್ಕೆ ಘಟನೆ ನಡೆದಿತ್ತು.‌ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿ ಎಎಸ್​ಐ ಗೋಪಾಲಚಂದ್ರ ದಾಸ್ ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಅವರನ್ನು ಕೂಡಲೇ ಭುವನೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಚಿವರು ಸಂಜೆಯ ವೇಳೆಗೆ ಕೊನೆಯುಸಿರೆಳೆದಿದ್ದಾರೆ. 

Odisha's health minister Naba Kishore Das succumbs of bullet injury I  UPDATES | Odisha News – India TV

Odisha

ನಬ ಕಿಶೋರ್, ಬಿಜು ಪಾಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದಲ್ಲಿ ಪ್ರಬಲ ಸಚಿವರಲ್ಲಿ ಒಬ್ಬರಾಗಿದ್ದರು. ಅಲ್ಲದೆ, ಬಿಜೆಡಿ ಸರ್ಕಾರದ ಶ್ರೀಮಂತ ಸಚಿವರೂ ಅಗಿದ್ದರು. ಸಚಿವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತನ್ನ ಸ್ವಕ್ಷೇತ್ರ ಝಾರ್ಸುಗಢಕ್ಕೆ ಬಂದಿದ್ದು ಕಾರಿನಿಂದ ಕೆಳಗಿಳಿಯುವಾಗಲೇ ಗುಂಡಿನ ದಾಳಿ ನಡೆದಿತ್ತು. ನಬ ದಾಸ್ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿದ್ದವು. ಈ ವೇಳೆ, ಜೊತೆಗಿದ್ದ ಇನ್ನೊಬ್ಬ ಯುವಕನಿಗೂ ಗುಂಡು ತಗಲಿತ್ತು.  

ನಬಾ ಕಿಶೋರ್‌ ಮೇಲೆ ಫೈರಿಂಗ್‌ ನಡೆಸಿದ್ದ ಎಎಸ್​ಐ ಗೋಪಾಲ್‌ ದಾಸ್​ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಚಿವರ ಎದೆಗೆ ಯಾಕಾಗಿ ಗುಂಡು ಹಾರಿಸಿದರೆಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆಗೆ ಒಡಿಶಾ ಸರ್ಕಾರ ಸಿಐಡಿ ಪೊಲೀಸರ ವಿಶೇಷ ತಂಡವನ್ನು ರಚಿಸಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ಸೈಬರ್ ತಜ್ಞರು, ಬ್ಯಾಲಿಸ್ಟಿಕ್ ತಜ್ಞರು ಮತ್ತು ಕ್ರೈಂ ಬ್ರ್ಯಾಂಚ್‌ ಅಧಿಕಾರಿಗಳನ್ನೊಳಗೊಂಡ 7 ಸದಸ್ಯರ ತಂಡ ರಚನೆ ಮಾಡಲಾಗಿದೆ.

ಕಚೇರಿ ಉದ್ಘಾಟನೆ ವೇಳೆ ಒಡಿಶಾ ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಿದ ಪೊಲೀಸ್ ಸಿಬ್ಬಂದಿ ; ಸ್ಥಿತಿ ಗಂಭೀರ 

Odisha Health Minister Naba Kishore Das died on Sunday hours after he was shot at by a policeman at point-blank range near a busy square in Odisha’s Brajarajnagar in Jharsuguda district. “On operating was found that a single bullet had entered and exited the body, injuring the heart and left lung and causing massive internal bleeding and injury. The injuries were repaired, and steps were taken to improve the pumping of the heart. He was given urgent ICU care. But despite best of efforts, he could not be revived and succumbed to his injuries,” said a statement from Apollo Hospital.