ಬ್ರೇಕಿಂಗ್ ನ್ಯೂಸ್
20-02-26 09:07 pm HK News Desk ಕ್ರೈಂ
ಗದಗ, ಫೆ 20: ಲಕ್ಕುಂಡಿ ನಿಧಿ ಪತ್ತೆಯ ಪ್ರಕರಣದ ಬೆನ್ನಲ್ಲೇ, ಇದೀಗ ಮತ್ತೊಂದು ನಿಧಿ ಶೋಧದ ಮೋಸದ ದೊಡ್ಡ ಜಾಲ ಬಯಲಾಗಿದೆ. ಹಳೆ ಪ್ರಕರಣ ಇದಾಗಿದ್ದು, ಹೊಸ ತಿರುವು ಸಿಕ್ಕಿದೆ. 01-01-2021 ರಿಂದ 30-05-2022ರ ಅವಧಿಯಲ್ಲಿ ನಡೆದ ನಿಧಿ ಶೋಧ ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ನಕಲಿ ಬಂಗಾರದ ಬಿಸ್ಕತ್ ಪತ್ತೆಯಾಗಿದ್ದು, ನಿಧಿ ಹೆಸರಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಮೋಸ ಇದೀಗ ಬಹಿರಂಗವಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಅಂತಾರಾಜ್ಯ ಮೋಸಗಾರರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದು, ಅಂದು ಲಕ್ಕುಂಡಿಯಲ್ಲಿ ನಿಧಿ ಹುಡುಕಿ ಕೊಡುವುದಾಗಿ ಮೋಸ ಮಾಡಿದ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಉತ್ತರಾಖಂಡದ ಕಿಂಗ್ಪಿನ್ ಬಂಧನ:
ಉತ್ತರಾಖಂಡದ ಕಾಶಿಪುರ ಮೂಲದ ಹಜರತ್ ಮೌಲ್ವಿ ಎಂಬಾತನೇ ಈ ನಿಧಿ ಶೋಧದ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಈತನನ್ನು ಗದಗ ಪೊಲೀಸರು ಈಗ ಬಂಧಿಸಿದ್ದಾರೆ. ಆರೋಪಿಯು ಆರು ಅಡಿ ಆಳದ ಗುಂಡಿ ತೆಗೆಸಿ, ಅದರಲ್ಲಿ ಹಂಡಿ ಇಟ್ಟು ಹಂಡಿಯೊಳಗೆ ಬಂಗಾರದ ನಾಣ್ಯಗಳಿವೆ ಎಂದು ಹಲವರನ್ನು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ. ಹೀಗೆ ಹಲವರಿಗೆ ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಜರತ್ ಮೌಲ್ವಿಯನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಮೋಸದ ಜಾಲ ಶುರುವಾಗಿದ್ದು ಹೇಗೆ? :
ಧಾರವಾಡ ಮೂಲದ ಬಸೀರಾಬೇಗಂ ಎಂಬ ಮಹಿಳೆಗೆ, ಶಾದಿ ಡಾಟ್ ಕಾಂ ಮೂಲಕ ಉತ್ತರಾಖಂಡದ ಈ ಹಜರತ್ ಮೌಲ್ವಿಯ ಪರಿಚಯವಾಗಿತ್ತು. ಬಸೀರಾಬೇಗಂ ಧಾರವಾಡದಲ್ಲಿ ಗ್ಯಾಸ್ ಎಜೆನ್ಸಿ ಇಟ್ಟುಕೊಂಡಿದ್ದು, ಅನಿರೀಕ್ಷಿತವಾಗಿ ಆದ ಭೇಟಿಯ ವೇಳೆ ತನಗೆ ಮಾಟ - ಮಂತ್ರ ಹಾಗೂ ನಿಧಿ ತೆಗೆಯುವ ವಿದ್ಯೆ ಗೊತ್ತಿದೆ ಎಂದು ಮೌಲ್ವಿ ಈ ವೇಳೆ ಹೇಳಿಕೊಂಡಿದ್ದ. ಇದನ್ನೂ ಬಸೀರಾಬೇಗಂ ನಂಬಿದ್ದಳು. ನಂತರ ಬಸೀರಾಬೇಗಂ ಮೂಲಕ ಗದಗದ ಇಕ್ಬಾಲ್, ಗೂಳಪ್ಪ, ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಹೀಗೆ...ಒಬ್ಬರಿಗೊಬ್ಬರ ಪರಿಚಯ ಒಂದು ಕೊಂಡಿ ರೂಪದಲ್ಲಿ ಬೆಳೆದಿತ್ತು. ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ನಿಧಿ ಇದೆ ಅಂತ ಹೇಳಿ ನಂಬಿಸಿ ಅಗೆಯಿಸಲಾಗಿತ್ತು. ಅದಕ್ಕೂ ಮುನ್ನ ಗದಗದ ಅಂಗಡಿಯಲ್ಲಿ ಹಳೆ ಬಿಂದಿಗೆಯನ್ನು ಖರೀದಿ ಮಾಡಿ, ಅದನ್ನು ಜಮೀನಿನಲ್ಲಿ ಹುದುಗಿಸಿದ್ದ. ಬಳಿಕ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ ಹಜರತ್, ಎಲ್ಲರಿಗೂ ಮೋಸ ಮಾಡಿದ್ದ. ಅಲ್ಲದೇ, ಸಣ್ಣಬಸಪ್ಪ ಮತ್ತು ದೊಡ್ಡ ಬಸಪ್ಪರಿಂದ ಹಣದ ಬೇಡಿಕೆ ಇಟ್ಟಿದ್ದನು. ಹಣ ನೀಡಲು ನಿರಾಕರಿಸಿದಾಗ ಕೋಪಗೊಂಡ ಮೌಲ್ವಿ, ಚಿನ್ನವೆಲ್ಲಾ ಮಣ್ಣಾಗಿದೆ ಎಂದು ಹೇಳಿ ಎಸ್ಕೇಪ್ ಆಗಿದ್ದನು. ಈಗ ಈ ಹಜರತ್ ಮೌಲ್ವಿಯನ್ನು ಅರೆಸ್ಟ್ ಮಾಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
27-04-26 02:48 pm
HK News Staffer
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
28-04-26 09:18 pm
Mangalore Correspondent
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
28-04-26 02:36 pm
Mangaluru Staffer
ರೈಲಿನಿಂದ ಕೈಜಾರಿ ಬಿದ್ದ ಮಗು ; ಚೈನ್ ಎಳೆದರೂ ನಿಲ್...
27-04-26 10:04 pm
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಪ್ರಮುಖ ಆ...
27-04-26 05:42 pm
ಉಡುಪಿಯಲ್ಲಿ ಕಟ್ಟಡಕ್ಕೆ ಬೆಂಕಿ ; ಮೊಬೈಲ್, ಹಾರ್ಡ್...
26-04-26 09:26 pm
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm