ಬ್ರೇಕಿಂಗ್ ನ್ಯೂಸ್
20-02-26 09:07 pm HK News Desk ಕ್ರೈಂ
ಗದಗ, ಫೆ 20: ಲಕ್ಕುಂಡಿ ನಿಧಿ ಪತ್ತೆಯ ಪ್ರಕರಣದ ಬೆನ್ನಲ್ಲೇ, ಇದೀಗ ಮತ್ತೊಂದು ನಿಧಿ ಶೋಧದ ಮೋಸದ ದೊಡ್ಡ ಜಾಲ ಬಯಲಾಗಿದೆ. ಹಳೆ ಪ್ರಕರಣ ಇದಾಗಿದ್ದು, ಹೊಸ ತಿರುವು ಸಿಕ್ಕಿದೆ. 01-01-2021 ರಿಂದ 30-05-2022ರ ಅವಧಿಯಲ್ಲಿ ನಡೆದ ನಿಧಿ ಶೋಧ ಪ್ರಕರಣದಲ್ಲಿ ಪೊಲೀಸರ ತನಿಖೆ ವೇಳೆ ನಕಲಿ ಬಂಗಾರದ ಬಿಸ್ಕತ್ ಪತ್ತೆಯಾಗಿದ್ದು, ನಿಧಿ ಹೆಸರಿನಲ್ಲಿ ನಡೆದ ಅಂತಾರಾಜ್ಯ ಮಟ್ಟದ ಮೋಸ ಇದೀಗ ಬಹಿರಂಗವಾಗಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದು, ಅಂತಾರಾಜ್ಯ ಮೋಸಗಾರರ ಜಾಲವನ್ನು ಗದಗ ಗ್ರಾಮೀಣ ಪೊಲೀಸರು ಭೇದಿಸಿದ್ದು, ಅಂದು ಲಕ್ಕುಂಡಿಯಲ್ಲಿ ನಿಧಿ ಹುಡುಕಿ ಕೊಡುವುದಾಗಿ ಮೋಸ ಮಾಡಿದ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಉತ್ತರಾಖಂಡದ ಕಿಂಗ್ಪಿನ್ ಬಂಧನ:
ಉತ್ತರಾಖಂಡದ ಕಾಶಿಪುರ ಮೂಲದ ಹಜರತ್ ಮೌಲ್ವಿ ಎಂಬಾತನೇ ಈ ನಿಧಿ ಶೋಧದ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಈತನನ್ನು ಗದಗ ಪೊಲೀಸರು ಈಗ ಬಂಧಿಸಿದ್ದಾರೆ. ಆರೋಪಿಯು ಆರು ಅಡಿ ಆಳದ ಗುಂಡಿ ತೆಗೆಸಿ, ಅದರಲ್ಲಿ ಹಂಡಿ ಇಟ್ಟು ಹಂಡಿಯೊಳಗೆ ಬಂಗಾರದ ನಾಣ್ಯಗಳಿವೆ ಎಂದು ಹಲವರನ್ನು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ. ಹೀಗೆ ಹಲವರಿಗೆ ಮೋಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹಜರತ್ ಮೌಲ್ವಿಯನ್ನು ಬಂಧಿಸಿರುವುದಾಗಿ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಮೋಸದ ಜಾಲ ಶುರುವಾಗಿದ್ದು ಹೇಗೆ? :
ಧಾರವಾಡ ಮೂಲದ ಬಸೀರಾಬೇಗಂ ಎಂಬ ಮಹಿಳೆಗೆ, ಶಾದಿ ಡಾಟ್ ಕಾಂ ಮೂಲಕ ಉತ್ತರಾಖಂಡದ ಈ ಹಜರತ್ ಮೌಲ್ವಿಯ ಪರಿಚಯವಾಗಿತ್ತು. ಬಸೀರಾಬೇಗಂ ಧಾರವಾಡದಲ್ಲಿ ಗ್ಯಾಸ್ ಎಜೆನ್ಸಿ ಇಟ್ಟುಕೊಂಡಿದ್ದು, ಅನಿರೀಕ್ಷಿತವಾಗಿ ಆದ ಭೇಟಿಯ ವೇಳೆ ತನಗೆ ಮಾಟ - ಮಂತ್ರ ಹಾಗೂ ನಿಧಿ ತೆಗೆಯುವ ವಿದ್ಯೆ ಗೊತ್ತಿದೆ ಎಂದು ಮೌಲ್ವಿ ಈ ವೇಳೆ ಹೇಳಿಕೊಂಡಿದ್ದ. ಇದನ್ನೂ ಬಸೀರಾಬೇಗಂ ನಂಬಿದ್ದಳು. ನಂತರ ಬಸೀರಾಬೇಗಂ ಮೂಲಕ ಗದಗದ ಇಕ್ಬಾಲ್, ಗೂಳಪ್ಪ, ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಹೀಗೆ...ಒಬ್ಬರಿಗೊಬ್ಬರ ಪರಿಚಯ ಒಂದು ಕೊಂಡಿ ರೂಪದಲ್ಲಿ ಬೆಳೆದಿತ್ತು. ಸಣ್ಣಬಸಪ್ಪ ಹಾಗೂ ದೊಡ್ಡಬಸಪ್ಪ ಅವರ ಜಮೀನಿನಲ್ಲಿ ನಿಧಿ ಇದೆ ಅಂತ ಹೇಳಿ ನಂಬಿಸಿ ಅಗೆಯಿಸಲಾಗಿತ್ತು. ಅದಕ್ಕೂ ಮುನ್ನ ಗದಗದ ಅಂಗಡಿಯಲ್ಲಿ ಹಳೆ ಬಿಂದಿಗೆಯನ್ನು ಖರೀದಿ ಮಾಡಿ, ಅದನ್ನು ಜಮೀನಿನಲ್ಲಿ ಹುದುಗಿಸಿದ್ದ. ಬಳಿಕ ನಿಧಿ ಶೋಧ ಮಾಡಿದ ಹಾಗೇ ನಾಟಕ ಮಾಡಿದ್ದ ಹಜರತ್, ಎಲ್ಲರಿಗೂ ಮೋಸ ಮಾಡಿದ್ದ. ಅಲ್ಲದೇ, ಸಣ್ಣಬಸಪ್ಪ ಮತ್ತು ದೊಡ್ಡ ಬಸಪ್ಪರಿಂದ ಹಣದ ಬೇಡಿಕೆ ಇಟ್ಟಿದ್ದನು. ಹಣ ನೀಡಲು ನಿರಾಕರಿಸಿದಾಗ ಕೋಪಗೊಂಡ ಮೌಲ್ವಿ, ಚಿನ್ನವೆಲ್ಲಾ ಮಣ್ಣಾಗಿದೆ ಎಂದು ಹೇಳಿ ಎಸ್ಕೇಪ್ ಆಗಿದ್ದನು. ಈಗ ಈ ಹಜರತ್ ಮೌಲ್ವಿಯನ್ನು ಅರೆಸ್ಟ್ ಮಾಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.
22-06-26 08:18 pm
HK News Staffer
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 03:18 pm
HK News Staffer
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm