ಬ್ರೇಕಿಂಗ್ ನ್ಯೂಸ್
08-02-23 09:18 pm HK News Desk ದೇಶ - ವಿದೇಶ
ಇಸ್ತಾಂಬುಲ್, ಫೆ.8 : ಭೂಕಂಪದಲ್ಲಿ ಮೃತರ ಸಂಖ್ಯೆ 11 ಸಾವಿರಕ್ಕೇರಿಕೆ, ಪರಿಹಾರಕ್ಕೆ ಭಾರತದಿಂದ 5 ವಿಮಾನ ರವಾನೆ
ಅಂಕಾರ: ಎರಡು ಪ್ರಬಲ ಭೂಕಂಪಗಳ ಪರಿಣಾಮ ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶಗಳಲ್ಲಿ ವಿನಾಶ ತಾಂಡವವಾಡಿದೆ.
ದುರಂತದ ಪ್ರಮಾಣ ಈಗಷ್ಟೇ ಸ್ಪಷ್ಟವಾಗುತ್ತಿದ್ದು, ಸಾವಿನ ಸಂಖ್ಯೆ 11,000 ಮೀರಿದೆ. ಅವಶೇಷಗಳ ನಡುವಿನಿಂದ ಬದುಕುಳಿದಿರಬಹುದಾದವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹೆಣಗಾಡುತ್ತಿದ್ದಾರೆ. ಈ ಪೈಕಿ ಟರ್ಕಿಯೊಂದರಲ್ಲೇ 8500 ಜನರು ಮೃತಪಟ್ಟಿದ್ದಾರೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನಗಳನ್ನು ಕಳುಹಿಸಿ ಕೊಡಲಾಗಿದೆ. ಮತ್ತೊಂದೆಡೆ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರ ಟರ್ಕಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಭೂಕಂಪದಿಂದ ತತ್ತರಿಸಿರುವಾಗ ಟರ್ಕಿಗೆ ಬರುವುದ ಬೇಡ ಎಂದು ಅಲ್ಲಿನ ಸರ್ಕಾರ ಹೇಳಿದ್ದರಿಂದ, ಷರೀಫ್ ಅನಿವಾರ್ಯವಾಗಿ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ.
ಭೂಕಂಪ ಸಂಭವಿಸಿದ ಮೊದಲ ದಿನವಾದ ಸೋಮವಾರ ಪರಿಹಾರ ಕಾರ್ಯಾಚರಣೆಗೆ ಸ್ವಲ್ಪ ಹಿನ್ನೆಡೆಯಾಗಿತ್ತು. ಆದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎದು ಎರ್ಡೋಗನ್ ಅವರು ಹೇಳಿದ್ದಾರೆ. ಯಾವುದೇ ಪ್ರಜೆ ಬೀದಿಯಲ್ಲಿ ಉಳಿಯಲು ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ನಿಯಂತ್ರಿತ ಸಿರಿಯಾ ಪ್ರದೇಶದಲ್ಲಿ 1,250 ಜನರು ಮೃತಪಟ್ಟರೆ, ಬಂಡುಕೋರರು ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಕನಿಷ್ಠ 1280 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿರಿಯಾ ಹೇಳಿಕೊಂಡಿದೆ.
ಟರ್ಕಿ, ಸಿರಿಯಾಗೆ ಭಾರತದಿಂದ ಪರಿಹಾರ ತಂಡಗಳ ಐದು ವಿಮಾನ
ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾ ಜನರಿಗೆ ನೆರವು ನೀಡುವುದಕ್ಕಾಗಿ ಭಾರತದ ಐದು ವಿಮಾನಗಳನ್ನು ಕಳುಹಿಸಲಾಗಿದೆ. ಇದರಲ್ಲಿ ತಜ್ಞ ವೈದ್ಯರು, ಪರಿಹಾರ ಕಾರ್ಯಾಚರಣೆ ತಂಡ, ಪರಿಹಾರ ಸಾಮಾಗ್ರಿ, ಔಷಧಗಳನ್ನು ಕಳುಹಿಸಿಕೊಡಲಾಗಿದೆ. ಜತೆಗೆ ಡಾಗ್ ಸ್ಕಾಟ್ ಕೂಡ ಇದೆ.
Five back-to-back earthquakes since Monday have killed over 8,300 people and left tens of thousands injured in Turkey and Syria. Officials and medics said 8,574 people have died in Turkey and 2,662 in Syria, bringing the total to around 11,200. On Monday, an earthquake of magnitude 7.8 centered in the Pazarcik district jolted Kahramanmaras and hit several provinces, including Gaziantep, Sanliurfa, Diyarbakir, Adana, Adiyaman, Malatya, Osmaniye, Hatay, and Kilis. Later in the day, an earthquake of 7.6 magnitude centred in Kahramanmaras's Elbistan district jolted the region
29-03-24 05:37 pm
HK News Desk
L hanumanthaiah kolar: ಕೋಲಾರದಲ್ಲಿ ಇಬ್ಬರ ಜಗಳದಲ...
29-03-24 03:43 pm
CT Ravi, Amit Shah, Yathindra Siddaramaiah: ಯ...
29-03-24 03:40 pm
ರಾಜ್ಯದಲ್ಲಿ ಬರದ ಬೇಗೆಯ ನಡುವೆ ಉಷ್ಣ ಮಾರುತ ; 5 ದಿನ...
29-03-24 03:03 pm
ಹಾಸನ ; ಐದು ವರ್ಷದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ನಾ...
28-03-24 11:00 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
29-03-24 07:02 pm
Udupi Correspondent
Bantwal Panchayat secretary goes missing: ಬಂಟ...
29-03-24 01:49 pm
ಏರ್ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್ ಕಾಂ...
28-03-24 10:56 pm
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
29-03-24 06:17 pm
Mangalore Correspondent
ಕೋವಿಡ್ ಸಮಯದಲ್ಲಿ ಉದ್ಯೋಗ ಕಳಕೊಂಡಿದ್ದ ಟೆಕ್ಕಿ ; ಲ...
29-03-24 05:09 pm
Gangster Politician Mukhtar Ansari; 68ಕ್ಕೂ ಅಧ...
29-03-24 09:32 am
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm