ಬ್ರೇಕಿಂಗ್ ನ್ಯೂಸ್
09-02-23 05:31 pm HK News Desk ದೇಶ - ವಿದೇಶ
ಹಿಮಾಚಲ, ಫೆ.9: ಜಿಎಸ್ಟಿ ಜಮಾ ಮಾಡಿಲ್ಲ ಎಂಬ ಆರೋಪದಡಿ ಗೌತಮ್ ಅದಾನಿ ಒಡೆತನದ ಅದಾನಿ ಕಂಪನಿ ಮೇಲೆ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ತೆರಿಗೆ ಇಲಾಖೆಯು ಪರ್ವಾನೂರಿನಲ್ಲಿರುವ ಅದಾನಿ ಕಂಪನಿ ಮೇಲೆ ದಾಳಿ ಮಾಡಿದೆ.
ಬುಧವಾರದಂದು ರಾತ್ರಿ ವೇಳೆ ಹಿಮಾಚಲ ಪ್ರದೇಶದಲ್ಲಿರುವ ಅದಾನಿ ವಿಲ್ಮಾರ್ ಗ್ರೂಪ್ನ ಸಿ ಆಯಂಡ್ ಎಫ್ ಸ್ಟೋರ್ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕಳೆದ 5 ವರ್ಷದಿಂದ ಸರಕು ಮತ್ತು ಸೇವಾ ತೆರಿಗೆಯನ್ನು ಜಮಾ ಮಾಡಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಇದು ಕಾಂಗ್ರೆಸ್ ನಡೆಸಿದ ದಾಳಿಯೇ?
ಅಬಕಾರಿ ಇಲಾಖೆ ಮತ್ತು ತೆರಿಗೆ ಇಲಾಖೆ ತಂಡವು ದಾಳಿ ಮಾಡುವ ಮೂಲಕ ಮೊದಲಿಗೆ ಗೋದಾಮಿನಲ್ಲಿರುವ ದಾಸ್ತಾನು ಮತ್ತು ದಾಖಲೆಯನ್ನು ಪರಿಶೀಲಿಸಿದ್ದಾರೆ.ಹಿಮಾಚಲ ಪ್ರದೇಶದಲ್ಲಿರುವ ಅದಾನಿ ಒಡೆತನದ ಏಳು ಕಂಪನಿಗಳಿವೆ. ಅವುಗಳಲ್ಲಿ ಹಣ್ಣುಗಳ ಕೋಲ್ಡ್ ಸ್ಟೋರ್ಗಳಿಂದ ಹಿಡಿದು, ದಿನಸಿ ಅಂಗಡಿಯವರೆಗಿನ ಸಾಮಾಗ್ರಿಗಳಿವೆ.ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿ ಅದಾನಿ ಕಂಪನಿ ಮೇಲೆ ನಡೆಸಿದ ಮೊದಲ ದಾಳಿ ಇದಾಗಿದೆ.

8 ಲಕ್ಷ ಕೋಟಿ ನಷ್ಟ ;
ಇತ್ತೀಚೆಗೆ ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಸಂಪತ್ತು ನೆಲಕಚ್ಚಿತ್ತು. ಕೇವಲ ಎರಡು ವಾರಗಳಲ್ಲಿ ದೊಡ್ಡ ನಷ್ಟ ಅನುಭವಿಸಿತ್ತು. 8 ಲಕ್ಷ ಕೋಟಿ ನಷ್ಟ ಹೊಂದಿದ್ದರು. ಈ ಬಗ್ಗೆ ಪಾರ್ಲಿಮೆಂಟ್ನಲ್ಲೂ ಚರ್ಚೆ ನಡೆದಿತ್ತು. ರಾಹುಲ್ಗಾಂಧಿಯವರು ಲೋಕಸಭೆಯಲ್ಲಿ ಗೌತಮ್ ಅದಾನಿ ಮತ್ತು ಮೋದಿ ಸ್ನೇಹದ ಬಗ್ಗೆ ವಾಗ್ವಾದ ನಡೆಸಿದ್ದರು. ಅನೇಕ ವರ್ಷದಿಂದಲೂ ಮೋದಿಗೆ ಗೌತಮ್ ಅದಾನಿ ಜೊತೆಗೆ ಸಂಪರ್ಕ ಇತ್ತು ಎಂದು ಹೇಳಿದ್ದರು. ಜೊತೆಗೆ ಕೆಲವು ಫೋಟೋ ಸಾಕ್ಷಾಧಾರಗಳನ್ನು ತೋರಿಸಿದ್ದರು.
In another major development, the Adani Wilmar Group has reportedly been raided by the State Excise and Taxation department. As per media reports, the GST officials have visited the offices of Adani Wilmar Group over allegations of GST violations. As per Times Now, the raid on Adani Wilmar Group was carried out following allegations of not depositing GST. Further, the officials are reportedly seeking information about input tax credit claims of the company with respect to state operations.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm