ಬ್ರೇಕಿಂಗ್ ನ್ಯೂಸ್
09-02-23 06:34 pm HK News Desk ದೇಶ - ವಿದೇಶ
ಟರ್ಕಿ, ಫೆ.9: ಕಂಡು ಕೇಳರಿಯದ ಭೂಕಂಪಕ್ಕೆ ಟರ್ಕಿ ಸಿರಿಯಾ ದೇಶಗಳು ಸ್ಮಶಾನವಾಗಿವೆ. ಸಾವಿನ ಸಂಖ್ಯೆ ರಣಕೇಕೆ ಹಾಕುತ್ತಿದೆ. ಶತಮಾನದ ಭೂಕಂಪ ಕಂಡು ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಆತಂಕದ ವಿಷಯ ಅಂದ್ರೆ ಟರ್ಕಿಯಲ್ಲಿನ ಭೂಕಂಪದ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಭಾರತಕ್ಕೂ ಎಚ್ಚರಿಕೆ ಕೊಟ್ಟಿದ್ದಾನೆ.
ಟರ್ಕಿ ಸಿರಿಯಾದಲ್ಲಿ ಶತಮಾನದ ಭೂಕಂಪ ಮರಣ ಮೃದಂಗ ಬಾರಿಸುತ್ತಿದೆ. ಸಾವು ರಣಕೇಕೆ ಹಾಕುತ್ತಿದೆ. ಕ್ಷಣ ಕ್ಷಣಕ್ಕೂ ಸಾನಿನ ಸಂಖ್ಯೆ ಏರಿಕೆ ಆಗುತ್ತಲ್ಲೇ ಸಾಗುತ್ತಿದೆ. 15 ಸಾವಿರ ಗಡಿ ದಾಟಿ ಸಾವಿನ ಸಂಖ್ಯೆ ಮುನ್ನುಗ್ತಿದೆ. ಎಲ್ಲೆಲ್ಲೂ ಸಾವಿನ ಆಕ್ರಂದನ ಮುಗಿಲು ಮುಟ್ಟಿದೆ.
ಫ್ರಾಂಕ್ ಹೂಗರ್ಬೀಟ್ಸ್ ಹೇಳಿದಂತೆ ಟರ್ಕಿ ಹಾಗೂ ಸಿರಿಯಾ 7.5ಕ್ಕೂ ಹೆಚ್ಚು ತೀವ್ರತೆಯ ವಿನಾಶಕಾರಿ ಭೂಕಂಪಕ್ಕೆ ತುತ್ತಾಗಿದೆ. ಅಚ್ಚರಿ ಎಂಬಂತೆ ಫ್ರಾಂಕ್ ಹೂಗರ್ಬೀಟ್ಸ್ ನುಡಿದ ಆ ಭವಿಷ್ಯ ನಿಜವಾಗಿದೆ. ಆತಂಕದ ವಿಷಯ ಇದೇ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್, ಭಾರತಕ್ಕೂ ಎಚ್ಚರಿಕೆಯ ಸಂದೇಶವನ್ನ ಕೊಟ್ಟಿದ್ದಾನೆ. ಟರ್ಕಿ, ಸಿರಿಯಾದಂತೆ ಭಾರತದಲ್ಲೂ ಭೂಕಂಪ ಅಪ್ಪಳಿಸುವ ಭವಿಷ್ಯ ನುಡಿದಿದ್ದಾನೆ.
ಭಾರತಕ್ಕೂ ಭೂಕಂಪದ ಎಚ್ಚರಿಕೆ?
ಅಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದ ಭೂಕಂಪ ಪ್ರಾರಂಭವಾಗುತ್ತೆ. ಬಳಿಕ ಆ ಭೂಕಂಪದ ಚಟಿವಟಿಕೆ ಪಾಕಿಸ್ತಾನ ಹಾಗೂ ಭಾರತವನ್ನು ದಾಟಿಲಿದೆ. ಬಳಿಕ ಅದು ಹಿಂದೂ ಮಹಾಸಾಗರದಲ್ಲಿ ಕೊನೆಗೊಳ್ಳುತ್ತೆ. ಇಲ್ಲಿನ ವಾತಾವರಣದ ಏರಿಳಿತಗಳನ್ನ ನೋಡಿದ್ರೆ, ಈ ಮೂರು ಪ್ರದೇಶಗಳು ದೊಡ್ಡ ಭೂಕಂಪ ಸಂಭವಿಸುವ ಮುಂದಿನ ಸರದಿಯಲ್ಲಿವೆ. ಆದರೆ ನೆನಪಿರಲಿ, ಇದು ಕೇವಲ ಅಂದಾಜು ಮಾತ್ರ, ಎಲ್ಲಾ ದೊಡ್ಡ ಭೂಕಂಪಗಳು ವಾತಾವರಣದಲ್ಲಿ ತಮ್ಮ ಹೆಜ್ಜೆಗುರುತನ್ನು ಬಿಟ್ಟು ಕೊಡುವುದಿಲ್ಲ. ಇದು ಕೇವಲ ಒಂದು ಅಂದಾಜು ಅಷ್ಟೇ. ಕಾರಣ ಎಲ್ಲಾ ಭೂಕಂಪಗಳನ್ನ ನಾವು ವಾಯುಮಂಡಲದ ಏರಿಳಿತಗಳಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ ಅಂತಾ ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್ ತಿಳಿಸಿದ್ದಾರೆ.
ಡಚ್ ಸಂಶೋಧಕಮ ಈ ಭವಿಷ್ಯ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಹಾಗೂ ಭಾರತದಲ್ಲಿ ಹೊಸ ಆತಂಕವನ್ನ ಸೃಷ್ಟಿಸಿದೆ. ಭಾರತಕ್ಕೂ ಟರ್ಕಿಯಂಥ ವಿನಾಶಕಾರಿ ಭೂಕಂಪ ಅಪ್ಪಳಿಸುತ್ತಾ ಎಂಬ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ. ಆದ್ರೆ ಭಯಪಡುವ ಅವಶ್ಯಕತೆ ಇಲ್ಲ ಕಾರಣ. ಡಚ್ ಸಂಶೋಧಕನ ಹೇಳಿದಂತೆ ಇದು ಕೇವಲ ಅಂದಾಜು ಅಷ್ಟೇ.
Dutch researcher Frank Hoogerbeets, who predicted the earthquake in turkey, syria, and lebanon 3 days before its arrival, has said that an earthquake will also occur in India. Netherlands-based researcher Frank Hoogerbeets posted on his twitter page that a magnitude 7.8 earthquake is likely to occur in turkey and syria on the 3rd. Similarly, at 4.10 am last Monday, the epicenter was 33km from the town of Gaziantep on the Turkey-Syria border, followed by aftershocks. It has turned both countries upside down.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm