ಬ್ರೇಕಿಂಗ್ ನ್ಯೂಸ್
21-02-23 10:13 pm HK News Desk ದೇಶ - ವಿದೇಶ
ನವದೆಹಲಿ, ಫೆ.21: ಯುಪಿಐ ಪಾವತಿ ಮೂಲಕ ಹೆಚ್ಚಿನ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ಸ್ ಗಳು ನೆಚ್ಚಿನ ತಾಣಗಳಾಗಿವೆ. ಡಿಜಿಟಲ್ ಇಕಾನಮಿಯಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಿದ್ದು, ಭಾರತೀಯರು ಇನ್ನು ಸಿಂಗಾಪುರದಲ್ಲಿರುವ ಬಂಧುಗಳೊಂದಿಗೆ ಅಲ್ಲಿನದ್ದೇ ಬ್ಯಾಂಕುಗಳ ಜೊತೆಗೆ ನೇರವಾಗಿ ವ್ಯವಹರಿಸಲು ಅವಕಾಶ ನೀಡಲಾಗಿದೆ.
ಯುಪಿಐ ವ್ಯವಸ್ಥೆಯ ಹೊಸ ಅವತರಣಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಿ ಲೀ ಸಿಂಗ್ ಹೂನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತು ಸಿಂಗಾಪುರದ ಮಾನಿಟರಿ ಫಂಡ್ ಅಥಾರಿಟಿಯ ಆಡಳಿತ ನಿರ್ದೇಶಕ ರವಿ ಮೆನನ್ ಉಪಸ್ಥಿತರಿದ್ದು ಮಂಗಳವಾರ ಬೆಳಗ್ಗೆ 11 ಗಂಟೆಗೆ ಹೊಸ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.
ಈ ಮೂಲಕ ಉಭಯ ದೇಶಗಳ ಪ್ರಜೆಗಳು ಒಬ್ಬರಿಗೊಬ್ಬರು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಗೂಗಲ್ ಪೇ, ಪೇಟಿಎಂ ಇನ್ನಿತರ ಏಪ್ ಗಳಿಂದ ಸಿಂಗಾಪುರದ ಬ್ಯಾಂಕ್ ಖಾತೆಗಳಿಗೂ ಹಣ ಪಾವತಿ ಮಾಡಬಹುದು. ಸಿಂಗಾಪುರದಲ್ಲಿರುವ ಎನ್ಆರ್ ಐ ಇನ್ನಿತರ ನಿವಾಸಿಗಳು ತಮ್ಮ ಭಾರತ ಮೂಲದ ವಹಿವಾಟುಗಳಿಗೆ ಡಿಜಿಟಲ್ ಪಾವತಿ ಮಾಡಬಹುದಾಗಿದೆ. ಸಿಂಗಾಪುರದಲ್ಲಿ ಅತಿ ಹೆಚ್ಚು ಭಾರತೀಯ ಮೂಲದವರಿದ್ದಾರೆ. ಅಂದಾಜು ಆರೂವರೆ ಲಕ್ಷ ಮಂದಿ ಭಾರತದ ನಿವಾಸಿಗಳಿದ್ದಾರೆ. ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ಅಲ್ಲಿ ನೆಲೆಸಿದವರು ಇದ್ದಾರೆ. ಅವರಿಗೆಲ್ಲ ಯುಪಿಐ ಪಾವತಿ ವ್ಯವಸ್ಥೆಯಿಂದ ಲಾಭ ಆಗಲಿದೆ.
Indians can now use Google Pay, PayTM and other digital payment systems to send money to their friends, colleagues and relatives in Singapore as Unified Payments Interface (UPI) gets connected to PayNow on Tuesday, February 21. Enabling faster and cost-efficient transfer of money, the linkage of two real-time payment systems will be witnessed by Prime Minister Narendra Modi and his Singapore counterpart Lee Hsien Loong via videoconferencing.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm