ಸಚಿವ ಗಡ್ಕರಿ ನಾಗಪುರದ ಕಚೇರಿಗೆ ಮತ್ತೆ ಬೆದರಿಕೆ ; ಜಯೇಶ್ ಪೂಜಾರಿ ಹೆಸರಲ್ಲಿ ಕರೆ, ಹತ್ತು ಕೋಟಿಗೆ ಬೇಡಿಕೆ 

21-03-23 10:36 pm       HK News Desk   ದೇಶ - ವಿದೇಶ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಕಚೇರಿ ಮತ್ತು ಮನೆಗೆ ಮತ್ತೆ ಬೆದರಿಕೆ ಕರೆ ಬಂದಿದೆ. ಹತ್ತು ಕೋಟಿ ಕೊಟ್ಟರೆ ಓಕೆ, ಇಲ್ಲಾಂದ್ರೆ ಕೊಂದು ಬಿಡುತ್ತೇನೆ ಎಂದು ವ್ಯಕ್ತಿಯೊಬ್ಬ ಮೂರು ಬಾರಿ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ.

ಮುಂಬೈ, ಮಾ.21: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಕಚೇರಿ ಮತ್ತು ಮನೆಗೆ ಮತ್ತೆ ಬೆದರಿಕೆ ಕರೆ ಬಂದಿದೆ. ಹತ್ತು ಕೋಟಿ ಕೊಟ್ಟರೆ ಓಕೆ, ಇಲ್ಲಾಂದ್ರೆ ಕೊಂದು ಬಿಡುತ್ತೇನೆ ಎಂದು ವ್ಯಕ್ತಿಯೊಬ್ಬ ಮೂರು ಬಾರಿ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ. 

ಕರೆ ಮಾಡಿದ ವ್ಯಕ್ತಿ ತನ್ನನ್ನು ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ ಎಂದು ಹೇಳಿಕೊಂಡಿದ್ದಾನೆ. ಮಂಗಳವಾರ ಬೆಳಗ್ಗೆ ಎರಡು ಬಾರಿ ಮತ್ತು ಮಧ್ಯಾಹ್ನ ಒಂದು ಬಾರಿ ಕರೆ ಮಾಡಿದ್ದ ಎಂದು ಡಿಸಿಪಿ ರಾಹುಲ್ ಮದಾನೆ ತಿಳಿಸಿದ್ದಾರೆ. 

Union Minister Nitin Gadkari's Nagpur office receives 3 threat calls,  police investigating

ಸಚಿವರ ಮನೆಗೆ ಕರೆ ಮಾಡಿದ ಬಳಿಕ ನಾಗಪುರದ ಕಚೇರಿ ಮತ್ತು ಮನೆಗೆ ಭದ್ರತೆ ಹೆಚ್ಚಿಸಲಾಗಿದೆ. ‌ಕಳೆದ ಜನವರಿ 14ರಂದು ಇದೇ ರೀತಿ ಜಯೇಶ್ ಪೂಜಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ನಿತಿನ್ ಗಡ್ಕರಿಯ ನಾಗಪುರದ ಕಚೇರಿಗೆ ಕರೆ ಮಾಡಿದ್ದ. ನೂರು ಕೋಟಿ ಕೊಡಬೇಕು, ಇಲ್ಲಾಂದ್ರೆ ಜೀವಕ್ಕೆ ಅಪಾಯ ಬರಬಹುದು. ತಾನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದ. ಬಳಿಕ ಪುತ್ತೂರು ಮೂಲದ ಜಯೇಶ್ ಪೂಜಾರಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಸಚಿವರ ನಾಗಪುರದ ಕಚೇರಿಗೆ ಕರೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಕಂಡುಬಂದಿತ್ತು. 

ಇದೀಗ ಮತ್ತೊಮ್ಮೆ ಅದೇ ರೀತಿಯ ಕರೆ ಬಂದಿದ್ದು ಯಾರು ಕರೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Security was increased at Union minister Nitin Gadkari's home and office in Nagpur on Tuesday after a man made three calls threatening to harm the senior BJP leader if Rs 10 crore was not paid to him, a police official said. The caller identified himself as one Jayesh Pujari, alias Jayesh Kantha, the same person whose name had been used to make similar calls to the minister's office in January, he said.