ಬ್ರೇಕಿಂಗ್ ನ್ಯೂಸ್
03-05-23 08:33 pm HK News Desk ದೇಶ - ವಿದೇಶ
ನವದೆಹಲಿ, ಮೇ 3: ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ ಜಲ ಮತ್ತು ವಿದ್ಯುತ್ ಕನ್ಸಲ್ಟನ್ಸಿ ಸರ್ವಿಸಸ್ ಲಿಮಿಟೆಡ್ (ವಾಪ್ಕೋಸ್) ಕಂಪನಿಯ ನಿವೃತ್ತ ಮುಖ್ಯ ವ್ಯವಸ್ಥಾಪಕ ರಾಜೀಂದರ್ ಕುಮಾರ್ ಎಂಬಾತನ ಮನೆ ಮತ್ತು 19 ಕಡೆ ಇರುವ ಆಸ್ತಿಗಳಿಗೆ ಏಕಕಾಲದಲ್ಲಿ ಸಿಬಿಐ ದಾಳಿ ನಡೆಸಿದ್ದು, 20 ಕೋಟಿ ರೂಪಾಯಿ ನಗದನ್ನು ವಶಕ್ಕ ಪಡೆಯಲಾಗಿದೆ.
ದೆಹಲಿ, ಗುರುಗ್ರಾಮ್, ಪಂಚ್ ಕುಲಾ, ನೋಯ್ಡಾ, ಲೂಧಿಯಾನ, ಸೋನಿಪತ್, ಚಂಡೀಗಢ, ಉತ್ತರ ಪ್ರದೇಶದ ಗಾಜಿಯಾಬಾದ್ ಸೇರಿದಂತೆ 19 ವಿವಿಧ ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಂಡೀಗಢದಲ್ಲಿ ರಾಜೀಂದರ್ ಕುಮಾರ್ ಪುತ್ರನ ಮನೆ ಒಂದರಲ್ಲೇ ದಾಳಿ ವೇಳೆ 10 ಕೋಟಿ ನಗದು ಪತ್ತೆಯಾಗಿದೆ. ರಾಶಿ ರಾಶಿ ನಗದು ಸಿಕ್ಕಿದ್ದು ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
2011ರಿಂದ 2019ರ ವರೆಗೆ ಸಿಎಂಡಿ ಆಗಿದ್ದ ರಾಜೀಂದರ ಕುಮಾರ್ ಗುಪ್ತಾ ಅಕ್ರಮವಾಗಿ ಆಸ್ತಿ ಗಳಿಸಿದ್ದಾನೆಂದು ದೂರು ಲಭಿಸಿದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. 2019ರಲ್ಲಿ ನಿವೃತ್ತಿಯಾದ ಬಳಿಕ ರಾಜೀಂದರ್ ಕುಮಾರ್ ತನ್ನದೇ ಆದ ಕನ್ಸಲ್ಟೆನ್ಸಿ ಕಂಪನಿಯೊಂದನ್ನು ಆರಂಭಿಸಿದ್ದ. ಇದಲ್ಲದೆ, ದೆಹಲಿ, ಪಂಜಾಬ್ ರಾಜ್ಯದ ಗುರುಗ್ರಾಮ್, ಚಂಡೀಗಢ, ಪಂಚಕುಲಾದಲ್ಲಿ ಅಪಾರ ಆಸ್ತಿ ಮಾಡಿಟ್ಟಿದ್ದ. ಫ್ಲಾಟ್, ರೆಸಾರ್ಟ್, ಹಲವಾರು ಕಮರ್ಶಿಯಲ್ ಕಟ್ಟಡಗಳನ್ನು ಹೊಂದಿದ್ದಾನೆ. ತನಿಖೆ ಮುಂದುವರಿಸಿದ್ದು, ರಾಜೀಂದರ್ ಕುಮಾರ್ ಮತ್ತು ಆತನ ಕುಟುಂಬದ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
More than Rs 20 crore was seized by the Central Bureau of Investigation (CBI) when raids were conducted at premises of Rajinder Kumar Gupta, former Chairman and Managing Director (CMD) of public sector undertaking WAPCOS Limited on Tuesday. Gupta was booked recently for amassing assets disproportionate to his known sources of income.
21-07-25 05:56 pm
HK News Desk
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm