ನಟ ಸಲ್ಮಾನ್ ಖಾನ್ ಕೊಲ್ಲದೆ ಬಿಡಲ್ಲ ; ಮತ್ತೆ ಗುಡುಗಿದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ

22-05-23 07:29 pm       HK News Desk   ದೇಶ - ವಿದೇಶ

ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರನ್ನು ಯಾವತ್ತಾದರೂ ಕೊಲ್ಲದೇ ಬಿಡಲ್ಲ ಎಂದು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಮುಂಬೈ, ಮೇ 22: ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರನ್ನು ಯಾವತ್ತಾದರೂ ಕೊಲ್ಲದೇ ಬಿಡಲ್ಲ ಎಂದು ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಸಲ್ಮಾನ್ ಖಾನ್ ತನ್ನ ನಂಬರ್ ವನ್ ಟಾರ್ಗೆಟ್ ಆಗಿದ್ದು, ಆತನನ್ನು ಕೊಲ್ಲಲು ಈಗಾಗಲೇ ಮುಂಬೈಗೆ ತನ್ನ ಶೂಟರನ್ನು ಕಳಿಸಿಕೊಟ್ಟಿದ್ದೇನೆ ಎಂದು ಬಿಷ್ಣೋಯಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಸದ್ಯಕ್ಕೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಬಿಷ್ಣೋಯಿ, ಮತ್ತೊಮ್ಮೆ ತನ್ನ ಟಾರ್ಗೆಟ್ ಬಗ್ಗೆ ಬಾಯಿಬಿಟ್ಟಿದ್ದಾನೆ. ಪಂಜಾಬಿ ಸಿಂಗರ್ ಸಿಧು ಮೂಸೇವಾಲಾ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಬಂಧಿತನಾಗಿದ್ದು, ತಿಹಾರ್ ಜೈಲಿನಲ್ಲಿ ಇಡಲಾಗಿದೆ.

ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದು, ಅದಕ್ಕಾಗಿ ಟಾರ್ಗೆಟ್ ಆಗಿದ್ದಾನೆ. ಕೃಷ್ಣಮೃಗ ರಾಜಸ್ಥಾನದ ಜೋಧಪುರ್ ನಲ್ಲಿ ಆರಾಧನೆಗೊಳ್ಳುವ ಪ್ರಾಣಿಯಾಗಿದೆ. ಬಿಷ್ಣೋಯಿ ಅದನ್ನು ಆರಾಧಿಸುವ ಪಂಗಡಕ್ಕೆ ಸೇರಿದವನಾಗಿದ್ದು, ಅದೇ ಕಾರಣಕ್ಕೆ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ಹೂಡಿದ್ದಾನೆ. ಲಾರೆನ್ಸ್ ಬಿಷ್ಣೋಯಿ ಪಂಜಾಬ್ ಮೂಲದವನೇ ಆಗಿದ್ದರೂ, ಕೆನಡಾದಲ್ಲಿದ್ದುಕೊಂಡು ಗ್ಯಾಂಗ್ ಕಟ್ಟಿದ್ದ. ಪಂಜಾಬಿನಲ್ಲಿ ತನ್ನ ವಿರೋಧಿಗಳನ್ನು ಕೊಲ್ಲುವುದಕ್ಕಾಗಿಯೇ ತಂಡ ಕಟ್ಟಿಕೊಂಡಿದ್ದಾನೆ. ವರ್ಷದ ಹಿಂದೆ ಮೂಸಾವಾಲ ಕೊಲೆ ಪ್ರಕರಣದಲ್ಲಿ ಬಿಷ್ಣೋಯಿ ಪ್ರಮುಖ ಸಂಚುಕೋರ ಎನ್ನುವುದು ಗೊತ್ತಾಗುತ್ತಲೇ ಪೊಲೀಸರು ಇಂಟರ್ ಪೋಲ್ ನೋಟಿಸ್ ಮಾಡಿ, ಅರೆಸ್ಟ್ ಮಾಡಿ ತಂದಿದ್ದಾರೆ.

Salman Khan is the number one target on the hit list of jailed gangster Lawrence Bishnoi and he has vowed to kill him in any way possible and had sent a man to Mumbai to carry out surveillance of the superstar as part of Bishnoi’s plan.