ಬ್ರೇಕಿಂಗ್ ನ್ಯೂಸ್
01-02-24 08:33 pm HK News Desk ದೇಶ - ವಿದೇಶ
ನವದೆಹಲಿ, ಫೆ.1: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಆರನೇ ಬಜೆಟ್ ಮಂಡಿಸಿದ್ದಾರೆ. ಹೊಸ ಸಂಸತ್ ಭವನದಲ್ಲಿ ಮಂಡಿಸಿದ ಮೊದಲ ಬಜೆಟ್ ಮತ್ತು ಎರಡನೇ ಮೋದಿ ಸರ್ಕಾರದ ಕೊನೆಯ ಬಜೆಟ್ ಆಗಿದೆ. ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, ಹೊಸ ಯೋಜನೆಗಳ ಘೋಷಣೆ ಇಲ್ಲದೆ ಆರ್ಥಿಕ ಸ್ಥಿತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ರೀತಿ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದೇ ವೇಳೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ, ಲಕ್ಷದ್ವೀಪ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ, ವಂದೇ ಭಾರತ್ ಮಾದರಿಯಲ್ಲಿ ಇತರೇ ರೈಲುಗಳ ಅಭಿವೃದ್ಧಿ, ಉಡಾನ್ ಯೋಜನೆ ಸಣ್ಣ ಸಣ್ಣ ನಗರಗಳಿಗೂ ವಿಸ್ತರಣೆ, 1 ಕೋಟಿ ಮನೆಗಳಿಗೆ ಸೌರ ವಿದ್ಯುತ್ ಸಂಪರ್ಕ ಸೇರಿದಂತೆ ಕೆಲವು ಅಂಶಗಳನ್ನು ಘೋಷಣೆ ಮಾಡಿದ್ದಾರೆ.
ಬಜೆಟ್ ಮುಖ್ಯಾಂಶಗಳು
ತೆರಿಗೆ ವಿನಾಯಿತಿ: 7 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ. ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ರೈಲ್ವೆ ಇಲಾಖೆಗೆ ಬೂಸ್ಟರ್: 40 ಸಾವಿರ ಸಾಮಾನ್ಯ ಬೋಗಿಗಳು ವಂದೇ ಭಾರತ್ ಮಾದರಿಯಲ್ಲಿ ಅಭಿವೃದ್ಧಿಗೆ ಯೋಜನೆ
ಉಡಾನ್ ಯೋಜನೆ: ಟೈರ್ 1 ಮತ್ತು ಟೈರ್ 2 ನಗರಗಳಿಗೂ ಯೋಜನೆ ವಿಸ್ತರಣೆ
ಆರೋಗ್ಯ ಯೋಜನೆ ವಿಸ್ತರಣೆ : ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ
ಪ್ರಧಾನಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ನಿರ್ಮಿಸುತ್ತಿರುವ 3 ಕೋಟಿ ಮನೆ ಸದ್ಯದಲ್ಲೇ ಪೂರ್ಣ. ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳ ನಿರ್ಮಾಣ ಗುರಿ, 1 ಕೋಟಿ ಮನೆಗಳಿಗೆ ಉಚಿತ ಸೌರ ವಿದ್ಯುತ್ ಸಂಪರ್ಕ. ಈ ಯೋಜನೆಯಿಂದ ಫಲಾನುಭವಿಗಳು ವಾರ್ಷಿಕವಾಗಿ 15-18 ಸಾವಿರ ರೂ. ಹಣ ಉಳಿಸಲಿದ್ದಾರೆ.
ಮೂರು ಆರ್ಥಿಕ ರೈಲ್ವೇ ಕಾರಿಡಾರ್ ನಿರ್ಮಾಣ: ಬಹು ಮಾದರಿ ಸಂಪರ್ಕ ಕಲ್ಪಿಸುವ ಪಿಎಂ ಗತಿ ಶಕ್ತಿ ಕಾರಿಡಾರ್ ಅಡಿಯಲ್ಲಿ ಖನಿಜ ಶಕ್ತಿ ಮತ್ತು ಸಿಮೆಂಟ್ ಕಾರಿಡಾರ್, ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್, ಪೋರ್ಟ್ ಕನೆಕ್ಟಿವಿಟಿ ಕಾರಿಡಾರ್ ಕಾರ್ಯಕ್ರಮ ಜಾರಿ
ಪ್ರವಾಸೋದ್ಯಮ ಅಭಿವೃದ್ಧಿ: ಲಕ್ಷದ್ವೀಪ ಸೇರಿದಂತೆ ಹಲವು ಪ್ರವಾಸಿ ತಾಣಗಳ ಅಭಿವೃದ್ಧಿ
ವಿಕಸಿತ ಭಾರತಕ್ಕಾಗಿ ರಾಜ್ಯ ಸರ್ಕಾರಗಳಿಗೆ 75 ಸಾವಿರ ಕೋಟಿ ರೂ. ಬಡ್ಡಿರಹಿತ ಸಾಲ ನೀಡುವುದಾಗಿ ಘೋಷಣೆ
ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಮಹಿಳಾ ಉದ್ಯಮಿಗಳಿಗಾಗಿ 43 ಕೋಟಿ ರೂ. ಸಾಲ ನೀಡಲಾಗುವುದು
9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆಗೆ ಸರ್ಕಾರ ಉತ್ತೇಜನ
ಉಡಾನ್ ಯೋಜನೆಗೆ 517 ಹೊಸ ಮಾರ್ಗ - ಸಣ್ಣ ನಗರಗಳಿಗೂ ವಿಮಾನ
ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ. ಮೀಸಲು
ದೇಶದ ಒಂದು ಕೋಟಿ ಮಹಿಳೆಯರು 'ಲಕ್ಷಾಧಿಪತಿ ದೀದಿ' ಆಗಲಿದ್ದಾರೆ
ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ
ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ
2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಗುರಿ
ಜಿಡಿಪಿಗೆ ಹೊಸ ಪರಿಭಾಷೆ ನೀಡಿದ ಕೇಂದ್ರ ಹಣಕಾಸು ಸಚಿವೆ. GDG ಎಂದರೆ - ಬೆಳವಣಿಗೆ, ಅಭಿವೃದ್ದಿ ಹಾಗೂ ಪ್ರಗತಿ (Growth - Development - Progress )
ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರವಾಗಿದೆ
10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ
'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ನಮ್ಮ ಧ್ಯೇಯ
ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ
Finance Minister Nirmala Sitharaman on February 1 presented her sixth consecutive Budget with a speech lasting 56 minutes, her shortest-ever. Dressed in a turquoise-coloured embroidered Kantha silk saree, as Ms. Sitharaman delivered her speech, it was lauded at regular intervals by the treasury benches — her remarks on the presentation of the full budget by "our government" in July receiving the loudest cheer.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm