Haldwani arrest; ಹಲ್ದ್ ವಾನಿ ಹಿಂಸಾಚಾರ ; ಮಸೀದಿಯಿದ್ದ ಜಾಗವನ್ನು ತನ್ನದೆಂದು ಹೇಳಿಕೊಂಡು ಕಿಚ್ಚು ಹಚ್ಚಿದ್ದ ಆರೋಪಿ ಅರೆಸ್ಟ್ 

11-02-24 08:13 pm       HK NEWS   ದೇಶ - ವಿದೇಶ

ಉತ್ತರಾಖಂಡದ ಹಲ್ದ್ ವಾನಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರಕರಣದ ಮಾಸ್ಟರ್​ಮೈಂಡ್ ಎನ್ನಲಾದ ಅಬ್ದುಲ್​ ಮಲಿಕ್​​​ನನ್ನು ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದ್ದಾರೆ. 

ನವದೆಹಲಿ, ಫೆ.11: ಉತ್ತರಾಖಂಡದ ಹಲ್ದ್ ವಾನಿಯಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರಕರಣದ ಮಾಸ್ಟರ್​ಮೈಂಡ್ ಎನ್ನಲಾದ ಅಬ್ದುಲ್​ ಮಲಿಕ್​​​ನನ್ನು ಪೊಲೀಸರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಧಿಸಿದ್ದಾರೆ. 

ಉತ್ತರಾಖಂಡದ ಹಲ್ದ್ ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿ ಆರು ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. 

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡ ಪೊಲೀಸ್​ ಅಧಿಕಾರಿ, ಮದರಸಾ ನಿರ್ಮಿಸಲಾಗಿದ್ದ ಜಾಗ ಸರ್ಕಾರಕ್ಕೆ ಸೇರಿದ್ದಾದರೂ ಅಕ್ರಮವಾಗಿ ಇನ್ನೊಬ್ಬರಿಂದ ಖರೀದಿಸಿ ತನ್ನದೆಂದು ಹೇಳಿಕೊಂಡಿದ್ದ. ಹೀಗಾಗಿ ಸ್ಥಳೀಯಾಡಳಿತ ಮಸೀದಿ ಒಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ.‌ ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಉತ್ತರಾಖಂಡ ಹಾಗೂ ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಹಲ್​ದ್ವಾನಿಯಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 60 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಪೈಕಿ ಓರ್ವ ಸಮಾಜವಾದಿ ಪಕ್ಷದ ಪ್ರಭಾವಿ ನಾಯಕನ ಸಹೋದರ ಎಂದು ತಿಳಿದುಬಂದಿದೆ. ಹಲ್​ದ್ವಾನಿ ನಗರದಲ್ಲಿ ಇಂಟರ್​ನೆಟ್​ ಸೇವೆಯನ್ನು ಮರು ಸ್ಥಾಪಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್​ಗಳನ್ನು ಶೇರ್​ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಪೊಲೀಸರು ಎಚ್ಚರಿಸಿದ್ದಾರೆ.

 Key Accused Arrested In Haldwani Violence Probe | Haldwani News Today | News18Breaking News: Key accused arrested in Haldwani Violence probe; Uttarakhand Government source reveals Abdul Malik's son & 3 others held by police