ಬ್ರೇಕಿಂಗ್ ನ್ಯೂಸ್
06-03-24 04:20 pm HK News Desk ದೇಶ - ವಿದೇಶ
ಕೊಲ್ಕತ್ತಾ, ಮಾ.6: ದೇಶದಲ್ಲಿ ಇದೇ ಮೊದಲ ಬಾರಿಗೆ ನದಿಯ ಅಡಿಭಾಗದಲ್ಲಿ ಸುರಂಗ ಕೊರೆದು ಅದರಲ್ಲಿ ಮೆಟ್ರೋ ರೈಲನ್ನು ಸಂಚರಿಸುವಂತೆ ಮಾಡಲಾಗಿದ್ದು, ಅಪೂರ್ವ ಯೋಜನೆಯನ್ನು ಕೊಲ್ಕತ್ತಾ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.
ಕೊಲ್ಕತ್ತಾ ಮತ್ತು ಹೌರಾ ನಗರವನ್ನು ಪೂರ್ವ- ಪಶ್ಚಿಮಕ್ಕೆ ಸಂಪರ್ಕಿಸುವ ಮೆಟ್ರೋ ಯೋಜನೆ ಇದಾಗಿದ್ದು, 4.8 ಕಿಮೀ ಉದ್ದಕ್ಕೆ ಸುರಂಗ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಭಾಗದ ಆರು ಮೆಟ್ರೋ ನಿಲ್ದಾಣಗಳ ಪೈಕಿ ಮೂರು ನಿಲ್ದಾಣಗಳು ಸುರಂಗದ ಒಳಗಡೆಯೇ ಇದೆ. ಹೌರಾ ಮೈದಾನ್ ಮತ್ತು ಇಸ್ಪ್ಲಾನೇಡ್ ನಿಲ್ದಾಣಗಳ ನಡುವೆ 4.8 ಕಿಮೀ ಅಂತರ ಇದೆ. ಇದರ ನಡುವೆ 1.2 ಕಿಮೀ ಅಂತರದಲ್ಲಿ ಹೂಗ್ಲಿ ನದಿಯಿದ್ದು, ಅದರ ಅಡಿಭಾಗದಲ್ಲಿ 30 ಮೀಟರ್ ಆಳದಲ್ಲಿ ಮೆಟ್ರೋ ಸುರಂಗ ಹಾದು ಹೋಗಿದೆ.







ಪ್ರಧಾನಿ ಮೋದಿ ಈ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಲ್ಲದೆ, ಅದೇ ರೈಲಿನಲ್ಲಿ ಮಕ್ಕಳ ಜೊತೆಗೆ ಕುಳಿತು ಸಂಚಾರ ಮಾಡಿದ್ದಾರೆ. ಶಾಲಾ ಮಕ್ಕಳ ಜೊತೆಗೆ ಕುಳಿತು ಸಂವಾದ ನಡೆಸುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಮೆಟ್ರೋ ಸುರಂಗ ಮಾರ್ಗವನ್ನು 4138 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ದೇಶದ ಮೊದಲ ನೀರಿನಾಳದಲ್ಲಿ ನಿರ್ಮಿಸಲ್ಪಟ್ಟ ರೈಲು ಮಾರ್ಗ ಎಂದೆನಿಸಿದೆ.
ಪ್ರಧಾನಿ ಮೋದಿ ಒಟ್ಟು 15450 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇದೇ ಸಂದರ್ಭ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಮೋದಿ ಮತ್ತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅಲ್ಲದೆ, ರಸ್ತೆ ಉದ್ದಕ್ಕೂ ಸೇರಿದ್ದ ಜನರು ಮೋದಿಗೆ ಜೈಕಾರ ಹಾಕಿದ್ದಾರೆ. ಜನರನ್ನು ನೋಡಿ ಉತ್ಸಾಹಗೊಂಡ ಮೋದಿ ಕಾರಿನಲ್ಲೇ 12 ಕಿಮೀ ಉದ್ದಕ್ಕೆ ರಸ್ತೆಯಲ್ಲಿ ಸಂಚರಿಸಿದ್ದಾರೆ.
Prime Minister Narendra Modi on Wednesday inaugurated India's first underwater metro services, an engineering marvel in itself.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm