ಬ್ರೇಕಿಂಗ್ ನ್ಯೂಸ್
20-03-24 11:20 am HK News Desk ದೇಶ - ವಿದೇಶ
ಆಳಪ್ಪುಝ, ಮಾ.20: ಕೇರಳದ ಆಳಪ್ಪುಝ ಜಿಲ್ಲೆಯ ಪೂರಕ್ಕಾಡ್ ಎಂಬಲ್ಲಿ ಸಮುದ್ರ ತೀರದಿಂದ 50 ಮೀಟರ್ ಒಳಕ್ಕೆ ಹೋಗಿದ್ದು, ದಿಢೀರ್ ಆಗಿ ಉಂಟಾದ ವಿದ್ಯಮಾನದಿಂದ ಜನರು ಅಚ್ಚರಿಗೀಡಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸಮುದ್ರ ತೀರದಿಂದ 50 ಮೀಟರ್ ದೂರಕ್ಕೆ ಸಾಗಿತ್ತು. ಪೂರಕ್ಕಾಡ್ ಬೀಚ್ ಏರಿಯಾದ ಅಯ್ಯಂಕೋಲಿಕ್ಕಾಲ್ ನಿಂದ ಎಸ್ ಡಿವಿ ಸ್ಕೂಲ್ ವರೆಗೆ 500 ಮೀಟರ್ ವ್ಯಾಪ್ತಿಯಲ್ಲಿ ಸಮುದ್ರ 50 ಮೀಟರ್ ಹಿಂದೆ ಹೋಗಿರುವುದು ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಬೆಳಗ್ಗೆ 6.30ರ ವೇಳೆಗೆ ಇಂತಹ ವಿದ್ಯಮಾನ ಕಂಡುಬಂದಿದ್ದು, ಜನರು ಸುನಾಮಿ ಬರುತ್ತೆ ಎಂಬ ಭೀತಿಗೆ ಒಳಗಾಗಿದ್ದರು. 2004ರ ಡಿಸೆಂಬರ್ 26ರಂದು ಇಂಡೋನೇಶ್ಯಾದಲ್ಲಿ ಭೂಕಂಪ, ಸುನಾಮಿ ಉಂಟಾಗಿದ್ದಾಗಲೂ ಇದೇ ರೀತಿಯ ವಿದ್ಯಮಾನ ಘಟಿಸಿತ್ತು. ಸಮುದ್ರ ಹಿಂದಕ್ಕೆ ಹೋಗಿದ್ದರಿಂದ ತೀರದಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟುಗಳನ್ನು ಸಮುದ್ರಕ್ಕೆ ಒಯ್ಯಲು ಸಾಧ್ಯವಾಗಲಿಲ್ಲ.
ಕೆಲವು ಮೀನುಗಾರರು ಭೀತಿಗೆ ಒಳಪಟ್ಟರೆ, ಕೆಲವೊಬ್ಬರು ಹೆಚ್ಚಿನ ಉಬ್ಬರ ಇದ್ದಾಗ ಈ ರೀತಿಯ ಘಟನೆ ವರ್ಷದಲ್ಲಿ ಕೆಲವೊಮ್ಮೆ ಆಗುತ್ತೆ. ಒಂದೆರಡು ದಿನ ಇರುತ್ತೆ, ಆನಂತರ ಸರಿಯಾಗುತ್ತೆ ಎಂದಿದ್ದಾರೆ. ರಾತ್ರಿ ಹೊತ್ತಿನಲ್ಲಿಯೂ ಇಂತಹ ಘಟನೆಗಳು ಬೇರೆ ಬೇರೆ ಕಡೆ ಆಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ವಿಕೋಪ ನಿರ್ವಹಣಾ ಸಮಿತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅರಬ್ಬೀ ಸಮುದ್ರದಲ್ಲಿ ಯಾವುದೇ ಭೂಕಂಪ ಉಂಟಾಗಿಲ್ಲ. ಹೀಗಾಗಿ ಸುನಾಮಿ ಬರುವ ಸಾಧ್ಯತೆ ಇಲ್ಲ. ಈ ರೀತಿಯ ಘಟನೆ ಯಾಕಾಗಿ ಸಂಭವಿಸಿದೆ ಎನ್ನುವ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
A stretch of the coast near Alappuzha witnessed an unusual phenomenon on Tuesday, where the sea receded from its usual shoreline, leaving a portion of the seabed exposed. The sea receded approximately 50 metres along a half-kilometre stretch from Purakkad to Ayyankovil near Ambalappuzha, raising concerns among the fishing community.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm