ಬ್ರೇಕಿಂಗ್ ನ್ಯೂಸ್
26-03-24 10:42 pm HK News Desk ದೇಶ - ವಿದೇಶ
ನವದೆಹಲಿ, ಮಾ.26: ಬಿಜೆಪಿಯಿಂದ ಟಿಕೆಟ್ ವಂಚಿತವಾಗಿರುವ ಗಾಂಧಿ ಕುಟುಂಬದ ಕುಡಿ, ಮೂರು ಬಾರಿಯ ಸಂಸದ ವರುಣ್ ಗಾಂಧಿಗೆ ಕಾಂಗ್ರೆಸ್ ಆಫರ್ ನೀಡಿದೆ. ವರುಣ್ ಗಾಂಧಿ ಕಾಂಗ್ರೆಸ್ ಸೇರುವುದಾದರೆ ಮುಕ್ತವಾಗಿ ಸ್ವಾಗತಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಗಾಂಧಿ ಕುಟುಂಬದ ಕುಡಿ ಎನ್ನುವ ಕಾರಣಕ್ಕಾಗಿಯೇ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಅಧೀರ್ ರಂಜನ್ ಹೇಳಿದ್ದಾರೆ. ವರುಣ್ ಗಾಂಧಿ ಇನ್ನೂ ತನ್ನ ತೀರ್ಮಾನ ಪ್ರಕಟಿಸಿಲ್ಲ.
ಎರಡು ದಿನಗಳ ಹಿಂದೆ ಬಿಜೆಪಿ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯಲ್ಲಿ ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಫಿಲಿಬಿಟ್ ಕ್ಷೇತ್ರದಿಂದ ಕಾಂಗ್ರೆಸಿನಿಂದ ಬಂದಿದ್ದ ಜತಿನ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿದೆ. ಆಮೂಲಕ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದ ವರುಣ್ ಗಾಂಧಿಗೆ ಖಡಕ್ ಸಂದೇಶ ರವಾನಿಸಿದೆ. ಇದೇ ವೇಳೆ, ವರುಣ್ ತಾಯಿ ಮನೇಕಾ ಗಾಂಧಿಗೆ ಸುಲ್ತಾನ್ ಪುರ ಕ್ಷೇತ್ರದಿಂದ ಟಿಕೆಟ್ ನೀಡಿದೆ.

ಹಾಗೆ ನೋಡಿದರೆ, ಸುಲ್ತಾನ್ ಪುರ ಮತ್ತು ಫಿಲಿಬಿಟ್ ಕ್ಷೇತ್ರ ಮನೇಕಾ ಮತ್ತು ಪುತ್ರ ವರುಣ್ ಗಾಂಧಿ ಅವರೇ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳು. 1996ರಿಂದ ಮನೇಕಾ ಗಾಂಧಿ ಫಿಲಿಬಿಟ್ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದರು. 2009ರಲ್ಲಿ ಮಗನಿಗೆ ತನ್ನ ಕ್ಷೇತ್ರ ಬಿಟ್ಟುಕೊಟ್ಟು ಸುಲ್ತಾನ್ ಪುರದಲ್ಲಿ ಮನೇಕಾ ನಿಂತು ಗೆದ್ದಿದ್ದರು. 2014ರಲ್ಲಿ ತಮ್ಮ ಕ್ಷೇತ್ರಗಳನ್ನು ಅದಲು ಬದಲುಗೊಳಿಸಿ ಮತ್ತೆ ಫಿಲಿಬಿಟ್ ಕ್ಷೇತ್ರದಿಂದಲೇ ಮನೇಕಾ ಸ್ಪರ್ಧಿಸಿದ್ದರು. ವರುಣ್ ಸುಲ್ತಾನ್ ಪುರವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ಮತ್ತೆ ಫಿಲಿಬಿಟ್ ಕ್ಷೇತ್ರದಿಂದಲೇ ವರುಣ್ ಗಾಂಧಿ ಸ್ಪರ್ಧಿಸಿ 2.50 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಮತ್ತು ಕೇಂದ್ರ ಸರಕಾರದ ಕೆಲವು ನಿರ್ಧಾರಗಳನ್ನು ವಿರೋಧಿಸಿ ವರುಣ್ ಗಾಂಧಿ ಅಂಕಣ ಬರೆದಿದ್ದರು. ಇದಲ್ಲದೆ, ವರುಣ್ ಗಾಂಧಿ ಸ್ವತಃ ಪಕ್ಷದ ಚಟುವಟಿಕೆಯಿಂದ ದೂರ ನಿಂತಿದ್ದರು. 2013ರಲ್ಲಿ ಬಿಜೆಪಿ ಜನರಲ್ ಸೆಕ್ರಟರಿಯಾಗಿದ್ದ ವರುಣ್ ಕೇಂದ್ರ ಕಾರ್ಯಕಾರಿಣಿ ಸದಸ್ಯತ್ವದಿಂದಲೂ ಹೊರಬಿದ್ದಿದ್ದರು.
![]()
2021ರಲ್ಲಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್ ಬಿಜೆಪಿ ಸೇರಿದ್ದು, ಈ ಬಾರಿ ತಾಯಿ- ಮಗ ಸುದೀರ್ಘ ಕಾಲದಿಂದ ಪ್ರತಿನಿಧಿಸುತ್ತಿದ್ದ ಫಿಲಿಬಿಟ್ ಲೋಕಸಭೆ ಕ್ಷೇತ್ರದ ಟಿಕೆಟನ್ನು ಪಡೆದಿದ್ದಾರೆ. ಈ ಬಾರಿ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ಸಿಗಲ್ಲ ಎನ್ನುವ ಮಾತು ತಿಂಗಳ ಹಿಂದೆಯೇ ಕೇಳಿಬಂದಿತ್ತು. ಅಲ್ಲದೆ, ಬಿಜೆಪಿ ಟಿಕೆಟ್ ಸಿಗದಿದ್ದರೆ ವರುಣ್ ಪಕ್ಷೇತರ ನಿಲ್ಲುತ್ತಾರೆ ಎನ್ನುವ ವದಂತಿಯೂ ಹರಡಿತ್ತು. ಆದರೆ ವರುಣ್ ಗಾಂಧಿ ಈ ಬಗ್ಗೆ ಯಾವುದೇ ಹೇಳಿಕೆಯನ್ನೂ ನೀಡಿರಲಿಲ್ಲ. ನಾಮಪತ್ರ ಸಲ್ಲಿಕೆಗೆ
ಇನ್ನೆರಡೇ ದಿನ ಬಾಕಿಯಿದ್ದು ವರುಣ್ ಮಾತ್ರ ತುಟಿ ಬಿಚ್ಚಿಲ್ಲ. ವಾರದ ಹಿಂದೆಯೇ ಎರಡು ಸೆಟ್ ನಾಮಪತ್ರಗಳನ್ನು ತಂದಿರಿಸಿದ್ದ ವರುಣ್ ಗಾಂಧಿ ತನ್ನ ಬೆಂಬಲಿಗರಿಗೆ ಚುನಾವಣೆ ಎದುರಿಸಲು ಸಜ್ಜಾಗುವಂತೆ ಸೂಚನೆ ನೀಡಿದ್ದರು. ಪ್ರತಿ ಗ್ರಾಮದಲ್ಲಿ ಎರಡು ಕಾರು ಮತ್ತು ಹತ್ತು ಬೈಕ್ ಗಳನ್ನು ಆಯ್ದುಕೊಳ್ಳುವಂತೆ ಹೇಳಿದ್ದರು. ಆದರೆ, ಈಗ ಟಿಕೆಟ್ ಸಿಗದೇ ಇರುವುದರಿಂದ ಧೃತಿಗೆಟ್ಟಿದ್ದಾರೆ.
ಫಿಲಿಬಿಟ್ ಆರು ಅಸೆಂಬ್ಲಿ ಕ್ಷೇತ್ರಗಳನ್ನು ಹೊಂದಿದ್ದು ಅದರಲ್ಲಿ ನಾಲ್ಕರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿ ಬದಲಾಗಿದೆ. ಈ ನಡುವೆ, ಪಕ್ಷೇತರ ಸ್ಪರ್ಧಿಸುತ್ತಾರೋ, ಕಾಂಗ್ರೆಸ್ ಸೇರುತ್ತಾರೋ ಅನ್ನುವ ಕುತೂಹಲ ಸೃಷ್ಟಿಯಾಗಿದೆ. ಉತ್ತರ ಪ್ರದೇಶದ ಸ್ಥಳೀಯ ವಾಹಿನಿಗಳ ಪ್ರಕಾರ, ಬಿಜೆಪಿ ಟಿಕೆಟ್ ತಪ್ಪಿರುವುದರಿಂದ ವರುಣ್ ನೊಂದಿದ್ದು, ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿದು ಸೈಲಂಟ್ ಆಗಲಿದ್ದಾರಂತೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನಾಗಿರುವ ವರುಣ್ ಗಾಂಧಿ ಮನೇಕಾ ಗಾಂಧಿಯ ಏಕೈಕ ಪುತ್ರ. ಇವರ ತಂದೆ ಸಂಜಯ್ ಗಾಂಧಿ, ವರುಣ್ ಗಾಂಧಿಗೆ ನಾಲ್ಕು ತಿಂಗಳ ಮಗುವಾಗಿರುವಾಗಲೇ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಮನೇಕಾ ಸುದೀರ್ಘ ಅವಧಿಯಲ್ಲಿ ನಿರಂತರ ಸಂಸದೆಯಾಗಿದ್ದು, ಇದೀಗ ತನ್ನ ಪ್ರೀತಿಯ ಮಗನ ರಾಜಕೀಯ ಭವಿಷ್ಯ ಡೋಲಾಯಮಾನ ಆಗಿರುವುದರಿಂದ ಚಿಂತಿತರಾಗಿದ್ದಾರೆ.
Senior Congress leader Adhir Ranjan Chowdhury on Tuesday claimed that Varun Gandhi was denied a Lok Sabha ticket by the BJP because of his connection with the Gandhi family and extended an invitation to him to join the grand old party. Chowdhury described Varun as a "dabang neta (strong leader)" and said he is a learned man with a clean image.
19-02-26 09:29 pm
mangalore
ಪರಮೇಶ್ವರ್ ಅಥವಾ ಡಿಕೆಶಿ ಯಾರಾಗ್ತಾರೆ ಮುಂದಿನ ಮುಖ್ಯ...
19-02-26 03:11 pm
ವಿಧಾನಸೌಧ ಒಳಗಡೆ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ ; ಭದ್...
18-02-26 09:02 pm
ಮಹಾರಾಷ್ಟ್ರದಿಂದ ಬೈಕ್ ನಲ್ಲಿ ಬಾಗಲಕೋಟಗೆ ಬರುತ್ತಿದ...
18-02-26 06:03 pm
ಊಟಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ ; ಬೈಕ್...
17-02-26 10:33 pm
19-02-26 11:04 pm
mangalore
'ಉಚಿತ' ಕೊಡುಗೆಗಳು ದೇಶದ ಅಭಿವೃದ್ಧಿಗೆ ಅಡ್ಡಿ ; ಆದಾ...
19-02-26 10:10 pm
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶೋಚನೀಯ ಸ್ಥಿತಿ ; ಕ...
17-02-26 08:50 pm
ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನ...
16-02-26 12:53 pm
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
19-02-26 10:37 pm
mangalore
2013ರಲ್ಲಿ ಶಿಲಾನ್ಯಾಸಗೊಂಡಿದ್ದ ಅಬ್ಬಕ್ಕ ಭವನ ನಿರ್ಮ...
19-02-26 09:50 pm
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹ, ಹೋರಾಟ...
19-02-26 06:08 pm
ನೇತ್ರಾವತಿ ಸೇತುವೆ ಆವರಣ ಗೋಡೆಗೆ ಅಪ್ಪಳಿಸಿದ ಮಿನಿ ಟ...
19-02-26 05:38 pm
ಬೆಳ್ತಂಗಡಿ : ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ನಿಗೂ...
19-02-26 04:09 pm
20-02-26 03:03 pm
HK News Desk
ಬಿಎಸ್ಸೆನ್ನೆಲ್ ಕೇಬಲ್ ಕಳ್ಳತನ ; ಭೂಗತ ಹಾಕಿದ್ದ ತಾಮ...
20-02-26 02:31 pm
ಅಂತಾರಾಜ್ಯ ಮಾದಕ ವಸ್ತು ಮಾರಾಟ ಜಾಲದ ಆರೋಪಿಗಳು ವಶಕ್...
20-02-26 11:31 am
Mangalore CCB Police, Rowdy Safwan Hussain: ದ...
18-02-26 09:16 pm
Mangalore Shivabagh Suicide: ಕೈ ಕೊಯ್ದುಕೊಂಡು ರ...
18-02-26 07:42 pm