ಮದುವೆ ಮುಗಿಸಿ ವಾಪಾಸ್‌ ಆಗುವ ವೇಳೆ ಭೀಕರ ಅಪಘಾತ ; ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದ ಬಸ್, 9 ಜನರ ದುರ್ಮರಣ

21-04-24 03:23 pm       HK News Desk   ದೇಶ - ವಿದೇಶ

ರಾಜಸ್ಥಾನದ ಜಲಾವರ್-ಅಕ್ಲೇರಾದ ಪಚೋಲಾ ಎಂಬಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ಕೊಂದು ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಾನ್​ನಲ್ಲಿದ್ದ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಲವಾರ್, ಏ 21: ರಾಜಸ್ಥಾನದ ಜಲಾವರ್-ಅಕ್ಲೇರಾದ ಪಚೋಲಾ ಎಂಬಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ಕೊಂದು ಓಮಿನಿ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಾನ್​ನಲ್ಲಿದ್ದ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಜನರು ತಮ್ಮ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿ ವಾಪಸ್​ ಆಗುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ರಕ್​ ಚಾಲಕನನ್ನು ಬಂಧಿಸಲಾಗಿದೆ.

ಅಕ್ಲೇರಾ ಪೊಲೀಸ್ ಠಾಣೆ ಪ್ರಭಾರಿ  ಪ್ರತಿಕ್ರಿಯಿಸಿ, "ಅಕ್ಲೇರಾ ಸಮೀಪದ ಡುಂಗರ್ ಗ್ರಾಮದ ಬಗ್ರಿ ಸಮುದಾಯದ ಒಂಭತ್ತು ಜನರು ಶನಿವಾರ ತಮ್ಮ ಸಂಬಂಧಿಕರ ವಿವಾಹ ಸಮಾರಂಭಕ್ಕೆಂದು ಮಧ್ಯಪ್ರದೇಶಕ್ಕೆ ತೆರಳಿದ್ದರು. ಮದುವೆ ಮುಗಿಸಿ ವಾಪಸ್​ ಆಗುವಾಗ ವೇಗವಾಗಿ ಬಂದ ಟ್ರಕ್​ ಅವರ ವ್ಯಾನ್‌ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಮೃತದೇಹಗಳನ್ನು ಅಕ್ಲೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿಡಲಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

Nine people were killed in a road accident in Panchola near, Jhalawar district, Rajasthan, news agency ANI reported on Sunday. The victims were returning from a wedding procession in a van when it collided with a truck. Jhalawar Superintendent of Police, Richa Tomar, confirmed the incident stating that the accused driver has been apprehended. The bodies have been sent for post-mortem examination.