ಬ್ರೇಕಿಂಗ್ ನ್ಯೂಸ್
26-04-24 02:58 pm HK News Desk ದೇಶ - ವಿದೇಶ
ಬಿಹಾರ, ಏ 26: ಬೆಂಕಿ ಅನಾಹುತದಿಂದ ಮದುವೆ ಮನೆ ಅಕ್ಷರಶಃ ಶೋಕದ ಮನೆಯಾಗಿ ಮಾರ್ಪಟ್ಟಿರುವ ಘಟನೆ ನಡೆದಿದೆ. ಮದುವೆ ಮೆರವಣಿಗೆ ಸಂಭ್ರಮದಲ್ಲಿ ಹಚ್ಚಿದ್ದ ಪಟಾಕಿ ಕಿಡಿಯಿಂದ ಆದ ಅಗ್ನಿ ಅನಾಹುತದಲ್ಲಿ ಮೂರು ಜಾನುವಾರು, ನವ ದಂಪತಿ ಸೇರಿ ಆರು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ದರ್ಬಾಂಗ್ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಮದುವೆ ಮೆರವಣಿಗೆ ಹಿನ್ನೆಲೆ ಸಂಭ್ರಮದಿಂದ ಪಟಾಕಿ ಹೊಡೆಯಲಾಗಿದ್ದು, ಈ ಬೆಂಕಿ ಕಿಡಿ ಸಿಲಿಂಡರ್ ಮತ್ತು ಡೀಸೆಲ್ ಸಂಗ್ರಹಕ್ಕೆ ಬಿದ್ದ ಪರಿಣಾಮ ಈ ಭಾರಿ ಅನಾಹುತ ಸಂಭವಿಸಿದೆ. ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಗ್ನಿ ಶಾಮಕದಳ ಕೂಡ ಬೆಂಕಿ ಆರಿಸುವ ಯತ್ನದಲ್ಲಿ ನಿರತರವಾಯಿತು.
ಬಹೇರಾ ಪೊಲೀಸ್ ಠಾಣೆಯ ಅಂತೋರ್ ಗ್ರಾಮದಲ್ಲಿ ಛಗನ್ ಪಾಸ್ವಾನ್ ಅವರ ಮಗಳ ಮದುವೆ ಸಮಾರಂಭ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಸಮಾರಂಭದ ಹಿನ್ನೆಲೆ ಮನೆಯ ಪಕ್ಕದಲ್ಲಿ ಅತಿಥಿಗಳು ತಂಗಲು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ರಾತ್ರಿ ಮದುವೆ ದಿಬ್ಬಣ ಬಂದಿದ್ದು, ಅದ್ದೂರಿಯಾಗಿ ಸಂಭ್ರಮಾಚರಣೆ ಸಾಗಿತ್ತು. ಈ ವೇಳೆ ಪಟಾಕಿ ಹೊಡೆಯಾಗಿದ್ದು, ಇದರ ಕಿಡಿ ಹಾಕಿದ್ದ ಶಾಮೀಯಾನದ ಮೇಲೆ ಬಿದ್ದ ಪರಿಣಾಮ ಇಡೀ ಟೆಂಟ್ ಹೊತ್ತಿ ಉರಿದಿದೆ. ಈ ವೇಳೆ ಅಲ್ಲಿಯೇ ಇದ್ದ ಸಿಲಿಂಡರ್ ಮತ್ತು ಡೀಸೆಲ್ ಸಂಗ್ರಹಕ್ಕೂ ಕಿಡಿ ತಗುಲಿದ್ದು, ಭಾರೀ ಅನಾಹುತ ಸಂಭವಿಸಿತು. ನವ ದಂಪತಿ ಸೇರಿ 6 ಮಂದಿ ಸಜೀವ ದಹನ ಆಗಿದ್ದಾರೆ.
ದುರ್ಘಟನೆ ತಿಳಿದಾಕ್ಷಣ ಗ್ರಾಮಸ್ಥರು ಆಗಮಿಸಿ ಬೆಂಕಿ ನಿಯಂತ್ರಿಸಲು ಹರಸಾಹಸ ಮಾಡಿದರು. ಆದರೆ, ಸಿಲಿಂಡರ್ ಮತ್ತು ಡೀಸೆಲ್ ಗೆ ಕಿಡಿ ತಗುಲಿದ ಹಿನ್ನಲೆ ಬೆಂಕಿ ಕೆನ್ನಾಲಿಗೆ ಚಾಚಿತು. ಇದರಿಂದ ಮೂರು ಜಾನುವಾರು ಸೇರಿದಂತೆ 6 ಮಂದಿಯನ್ನ ರಕ್ಷಿಸುವ ಯತ್ನವೂ ವಿಫಲವಾಯಿತು.
At least six people were killed and six others injured after a cylinder exploded during a wedding ceremony in Bihar’s Darbhanga on Thursday night, police said on Friday. The incident took place after a major blaze erupted due to bursting fireworks at the wedding in Antor village of the Bahera police station area, they said.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm