ಬ್ರೇಕಿಂಗ್ ನ್ಯೂಸ್
29-04-24 12:33 pm HK News Desk ದೇಶ - ವಿದೇಶ
ನವದೆಹಲಿ, ಎ.29: ಉಷ್ಣ ಮಾರುತಕ್ಕೆ ಇಡೀ ದಕ್ಷಿಣ ಭಾರತ ನಲುಗಿದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು ತೀವ್ರ ಉಷ್ಣ ಮಾರುತದಿಂದಾಗಿ ಜನರು ನಲುಗುತ್ತಿದ್ದಾರೆ.
ತೀವ್ರ ಬಿಸಿಲಿನಿಂದಾಗಿ ನಾಗರಿಕರು ತೊಂದರೆಗೀಡಾಗಿದ್ದು ತೀವ್ರ ಬಳಲಿಕೆ, ನೀರಿನ ಅಭಾವ ಎದುರಿಸುತ್ತಿದ್ದಾರೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ತಾಪಮಾನ 43.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈ ಬಾರಿಯ ಗರಿಷ್ಠ ಉಷ್ಣತೆಯ ಎಂದು ಹೇಳಲಾಗಿದೆ. ಭುವನೇಶ್ವರದ ಜನತೆಗೆ ತೀವ್ರ ಧಗೆಯುಳ್ಳ ಬೇಸಗೆ ಹೊಸತೇನಲ್ಲ. ಆದರೆ, ಈ ವರ್ಷದ ಬೇಸಿಗೆಯ ಉಷ್ಣಾಂಶ ಹಿಂದಿನದಕ್ಕಿಂತ ತೀವ್ರವಾಗಿದೆ. ಪೂರ್ವ ಮುಂಗಾರು ಕೊರತೆಯಿಂದಾಗಿ ಈ ಬಾರಿ ಉಷ್ಣಾಂಶ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಒಡಿಶಾ ರಾಜ್ಯ ಸರಕಾರ ಉಷ್ಣ ಮಾರುತದ ಬಗ್ಗೆ ಜನರಿಗೆ ಎಚ್ಚರಿಕೆಯಲ್ಲಿ ಇರುವಂತೆ ಸೂಚನೆ ನೀಡಿದೆ.
ನೆರೆಯ ಆಂಧ್ರಪ್ರದೇಶದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ತೀವ್ರ ಉಷ್ಣ ಮಾರುತದ ಅನುಭವ ಆಗಿದೆ. ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಸಂತ್ರಸ್ತರಿಗೆ ಆಶ್ರಯ ಹಾಗೂ ವೈದ್ಯಕೀಯ ನೆರವು ನೀಡಲು ರಾಜ್ಯ ಸರಕಾರ ವಿಶೇಷ ಉಷ್ಣ ಮಾರುತ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ. ಉಷ್ಣ ಮಾರುತದಿಂದ ಸುಡುತ್ತಿರುವ ಇನ್ನೊಂದು ರಾಜ್ಯ ಕರ್ನಾಟಕ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಈ ವರ್ಷದಲ್ಲೇ ಅತ್ಯಧಿಕ ಉಷ್ಣತೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಂದರ್ಭ ವಾಹನಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ.
ಕೇರಳದಲ್ಲಿ ಅತ್ಯಂತ ಉಷ್ಣಾಂಶದ ಸ್ಥಳ ಪಾಲಕ್ಕಾಡ್. ಇಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು 42 ಡಿಗ್ರಿ ಆಸುಪಾಸಿನಲ್ಲಿದೆ. ಪಾಲಕ್ಕಾಡ್ ಹೊರತುಪಡಿಸಿ ಕೋಝಿಕ್ಕೋಡ್, ಮಲಪ್ಪುರಂ, ತ್ರಿಶೂರು, ಕೊಲ್ಲಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೀವ್ರ ತಾಪಮಾನ ಕಂಡುಬಂದಿದೆ.
ಇನ್ನೆರಡು ದಿನಗಳಲ್ಲಿ ಒಡಿಶಾ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಉಷ್ಣ ಮಾರುತ ಬೀಸುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ತಾಪಮಾನ 45 ಡಿಗ್ರಿಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
East and south peninsular India are reeling under a severe heatwave, with daytime temperature staying above 41 degree Celsius every day, the weather office has said.
14-05-24 05:49 pm
Bangalore Correspondent
ಎಚ್.ಡಿ ರೇವಣ್ಣಗೆ ಕೊನೆಗೂ ಜಾಮೀನು ಮಂಜೂರು ; ಜನಪ್ರತ...
13-05-24 09:17 pm
parishad elections, JDS, BJP: ಪರಿಷತ್ ಚುನಾವಣೆ...
13-05-24 05:57 pm
Prajwal Revanna, Ticket Cancelled: ಪ್ರಜ್ವಲ್ ರ...
13-05-24 04:34 pm
Bangalore accident, Minor, Boy killed: ರಸ್ತೆಯ...
13-05-24 03:02 pm
14-05-24 07:21 pm
HK News Desk
PM narendra modi in varanasi: ಮೋದಿಯಿಂದ ಗಂಗೆಗೆ...
14-05-24 05:40 pm
Couple Caught Kissing in Odisha: ಕಿಕ್ಕಿರಿದು ತ...
14-05-24 04:09 pm
ಕ್ಯೂನಲ್ಲಿ ಬನ್ನಿ ಎಂದಿದ್ದಕ್ಕೆ ಮತದಾರನಿಗೆ ಶಾಸಕ ಕ...
14-05-24 02:17 pm
Mumbai hoarding collapse, Rain: ಮುಂಬೈನಲ್ಲಿ ಮಳ...
14-05-24 11:47 am
14-05-24 10:08 pm
Mangalore Correspondent
Mangalore news, Ullal, Rajeev Shetty: ಸೋಮೇಶ್ವ...
14-05-24 09:13 pm
Harish acharya, Parishad Elections: ನೈರುತ್ಯ ಶ...
13-05-24 10:15 pm
Udupi former MLA Raghupati bhat quits BJP: ಬಂ...
13-05-24 07:27 pm
Ashok Rai, Puttur: ಚುನಾವಣೆ ನೀತಿ ಸಂಹಿತೆ ಉಲ್ಲಂಘ...
13-05-24 02:27 pm
14-05-24 10:45 pm
Bangalore Correspondent
Online fraud, Job offer, Mangalore: ಆನ್ಲೈನಲ್ಲ...
13-05-24 07:15 pm
Part time job, crime, online fraud: ಆನ್ಲೈನ್...
13-05-24 04:10 pm
Fake Currency Notes, Mangalore, Crime: ಕಾಸರಗೋ...
12-05-24 01:53 pm
Mangalore Crime, Sexual Assult: ಅನ್ಯಕೋಮಿನ ಬಾಲ...
11-05-24 10:18 pm