Ram Mandir, Rahul Gandhi, Acharya Pramod Krishnam: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮ ಮಂದಿರ ತೀರ್ಪನ್ನೇ ರದ್ದುಗೊಳಿಸಲು ರಾಹುಲ್ ಗಾಂಧಿ ಬಳಗ ನಿರ್ಣಯಿಸಿತ್ತು ; ಆಚಾರ್ಯ ಪ್ರಮೋದ್‌ ಕೃಷ್ಣಂ ಸ್ಫೋಟಕ ಹೇಳಿಕೆ

07-05-24 05:16 pm       HK News Desk   ದೇಶ - ವಿದೇಶ

ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಓಲೈಸಲು ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ಐಸಿಹಾಸಿಕ ತೀರ್ಪನ್ನೇ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದರು ಎಂಬ ಸ್ಫೋಟಕ ಸಂಗತಿಯನ್ನು ಕಾಂಗ್ರೆಸ್‌ ಉಚ್ಛಾಟಿತ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಬಹಿರಂಗಪಡಿಸಿದ್ದಾರೆ. 

ನವದೆಹಲಿ, ಮೇ.7: ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಓಲೈಸಲು ರಾಮ ಮಂದಿರ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ಐಸಿಹಾಸಿಕ ತೀರ್ಪನ್ನೇ ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದರು ಎಂಬ ಸ್ಫೋಟಕ ಸಂಗತಿಯನ್ನು ಕಾಂಗ್ರೆಸ್‌ ಉಚ್ಛಾಟಿತ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ ಬಹಿರಂಗಪಡಿಸಿದ್ದಾರೆ. 

ಕಾಂಗ್ರೆಸ್‌ನಲ್ಲಿ 32 ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದೇನೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಮತ್ತವರ ಉನ್ನತ ಮಟ್ಟದ ಚಿಂತಕರ ತಂಡ ಇಂತಹದೊಂದು ಯೋಜನೆ ರೂಪಿಸಿತ್ತು. ಈ ಹಿಂದೆ ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಕಾಯಿದೆ ರೂಪಿಸಿದ್ದ ರಾಜೀವ್‌ ಗಾಂಧಿ ಅವರ ಸರಕಾರದ ಮಾದರಿಯಲ್ಲಿ ಉನ್ನತ ಮಟ್ಟದ (ಸೂಪರ್‌ ಪವರ್‌) ಆಯೋಗ ರಚನೆ ಮಾಡಿ, ಮಂದಿರ ಕುರಿತು ನೀಡಿರುವ ತೀರ್ಪನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದರು ಎಂದು ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಚಾರ್ಯ ಕೃಷ್ಣಂ ಆರೋಪಿಸಿದ್ದಾರೆ. 

Ram Mandir - Wikipedia

In open letter, 181 academics seek legal action against Rahul Gandhi for  spreading falsehoods on Vice Chancellor appointments - India News | The  Financial Express

ಅಯೋಧ್ಯೆಯ ರಾಮ ಮಂದಿರ- ಬಾಬ್ರಿ ಮಸೀದಿ ಭೂ ಮಾಲೀಕತ್ವದ ಕುರಿತ ಪ್ರಕರಣದಲ್ಲಿ 2019 ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಈ ವೇಳೆ, ತಮ್ಮ ಆಪ್ತರ ಸಭೆ ಕರೆದಿದ್ದ ರಾಹುಲ್‌ ಗಾಂಧಿ, ಚುನಾವಣೆ ಬಳಿಕ ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ತೀರ್ಪು ಬದಲಿಸುವ ನಿರ್ಧಾರ ಕೈಗೊಳ್ಳಲಿದೆ. ಶಾಬಾನೋ ಪ್ರಕರಣದಲ್ಲಿ ರಾಜೀವ್‌ ಗಾಂಧಿ ಸರಕಾರ ನಡೆದುಕೊಂಡಂತೆ ಸೂಪರ್ ಪವರ್ ಆಯೋಗವನ್ನು ರಚಿಸಿ ಮಂದಿರ ತೀರ್ಪನ್ನು ಬದಲಿಸುವ ವಿಷಯದಲ್ಲಿ ನಾವು ಮುಂದುವರಿಯುತ್ತೇವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ಭರವಸೆ ನೀಡಿದ್ದರು ಎಂಬುದಾಗಿ ಆಚಾರ್ಯ ಪ್ರಮೋದ್‌ ಕೃಷ್ಣಂ ಹೊಸ ಬಾಂಬ್ ಹಾಕಿದ್ದಾರೆ. 

ರಾಹುಲ್ ಗಾಂಧಿ ಅವರು ಈ ಆಲೋಚನೆಯನ್ನು ಅಮೆರಿಕದಲ್ಲಿ ವಾಸವಿರುವ ತಮ್ಮ ಹಿತೈಷಿಯೊಬ್ಬರ ಸಲಹೆ ಹಾಗೂ ಸೂಚನೆ ಮೇರೆಗೆ ಪ್ರತಿಪಾದಿಸಿದ್ದರು ಎಂದು ಪ್ರಮೋದ್ ಕೃಷ್ಣಂ ಹೇಳಿದ್ದಾರೆ. ಆಮೂಲಕ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

Former Congress leader Acharya Pramod Krishnam on Monday claimed that Rahul Gandhi had made plans to overturn the Supreme Court verdict which facilitated construction of grand Ram Mandir in Ayodhya if the grand old party formed a government at the center.