ಬ್ರೇಕಿಂಗ್ ನ್ಯೂಸ್
09-06-24 09:36 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 8: ಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಗದೇ ಇದ್ದುದಕ್ಕೆ ಎನ್ ಸಿಪಿ ಅಜಿತ್ ಪವಾರ್ ಬಣ ಅಸಮಾಧಾನಗೊಂಡಿದೆ. ಕೇಂದ್ರದ ಕಡೆಯಿಂದ ರಾಜ್ಯ ಸಚಿವ ಸ್ಥಾನ ನೀಡುವ ಬಗ್ಗೆ ಆಫರ್ ಬಂದಿದ್ದನ್ನು ಅಜಿತ್ ಪವಾರ್ ನಿರಾಕರಿಸಿದ್ದಾರೆ.
ರಾಜ್ಯ ಸಚಿವ ಸ್ಥಾನ ನೀಡುವುದು ನಮಗೆ ಹಿನ್ನಡೆ ಎಂದು ಭಾವಿಸುತ್ತೇವೆ. ಕ್ಯಾಬಿನೆಟ್ ಸಚಿವ ಸ್ಥಾನ ಸಿಗಬೇಕೆಂದು ನಮ್ಮ ಬೇಡಿಕೆ. ಅದಕ್ಕಾಗಿ ಕಾಯಲು ಸಿದ್ಧರಿದ್ದೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಅಜಿತ್ ಪವಾರ್ ಬಣದ ಪ್ರಫುಲ್ ಪಟೇಲ್ ಅವರಿಗೆ ರಾಜ್ಯ ಸಚಿವ ಸ್ಥಾನ (ಸ್ವತಂತ್ರ ಖಾತೆ) ನೀಡುವ ಬಗ್ಗೆ ಆಫರ್ ನೀಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಘಟಕದ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್, ಮುಂದಿನ ಬಾರಿ ಸಚಿವ ಸಂಪುಟ ವಿಸ್ತರಣೆಗೊಳ್ಳುವ ಸಂದರ್ಭದಲ್ಲಿ ಆದ್ಯತೆ ಸಿಗಬಹುದು. ಸ್ವತಂತ್ರ ರಾಜ್ಯ ಖಾತೆಯ ಆಫರ್ ನೀಡಲಾಗಿತ್ತು. ಆದರೆ ನಿರಾಕರಣೆ ಮಾಡಿದ್ದಾರೆ. ಮೈತ್ರಿ ಪಕ್ಷಗಳ ಸರಕಾರ ರಚನೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ. ಒಂದು ಪಕ್ಷದ ಕಾರಣಕ್ಕಾಗಿ ಮಾನದಂಡಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹಾಗಿದ್ದರೂ, ಅಜಿತ್ ಪವಾರ್ ಅವರು ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಪ್ರಫುಲ್ ಪಟೇಲ್ ಈ ಹಿಂದೆ ಕೇಂದ್ರ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಹಾಗಿರುವಾಗ, ಈಗ ರಾಜ್ಯ ಖಾತೆಯನ್ನು ಒಪ್ಪಿಕೊಳ್ಳುವುದು ಸರಿಯಾಗಲ್ಲ. ನಾವು ಈಗಾಗಲೇ ಬಿಜೆಪಿಗೆ ತಿಳಿಸಿದ್ದೇವೆ, ಕಾಯಲು ಸಿದ್ಧರಿದ್ದೇವೆ. ಆದರೆ ನಮಗೆ ಕ್ಯಾಬಿನೆಟ್ ಸ್ಥಾನವೇ ಕೊಡಬೇಕು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷದಿಂದ ಸಿಡಿದು ಹೊರಬಂದಿರುವ ಅಜಿತ್ ಪವಾರ್, ಈ ಬಾರಿ ಬಿಜೆಪಿ ಮೈತ್ರಿಕೂಟದಲ್ಲಿದ್ದು ಚುನಾವಣೆ ಎದುರಿಸಿದ್ದರು.
The Ajit Pawar camp of the NCP, part of Mahayuti alliance in Maharashtra, has been left disappointed after their request for a Cabinet berth in the new Modi government was not accommodated. The NCP was instead offered the post of a Minister of State with independent charge, which party leader Praful Patel called a “demotion”.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
08-06-25 10:51 pm
Mangalore Correspondent
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
08-06-25 10:29 pm
HK News Desk
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm