ಬ್ರೇಕಿಂಗ್ ನ್ಯೂಸ್
12-06-24 06:15 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ಕುವೈತ್ ದಕ್ಷಿಣ ಭಾಗದ ಮಂಗಾಫ್ ಬ್ಲಾಕ್ ನಲ್ಲಿ ಆರು ಮಹಡಿಯ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಹತ್ತು ಭಾರತೀಯರು ಸೇರಿದಂತೆ 41 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಕುವೈತ್ ಕಾಲಮಾನ ಬೆಳಗ್ಗೆ 5ರಿಂದ 7 ಗಂಟೆಯ ನಡುವೆ ಬೆಂಕಿ ಅವಘಡ ಸಂಭವಿಸಿದೆ.
ಕಿಚನ್ ಕೊಠಡಿ ಒಂದರಲ್ಲಿ ಬೆಂಕಿ ಹತ್ತಿಕೊಂಡಿದ್ದು, ಆನಂತರ, ಇಡೀ ಕಟ್ಟಡಕ್ಕೆ ಪೂರ್ತಿಯಾಗಿ ಬೆಂಕಿ ಆವರಿಸಿದೆ. ಆನಂತರ ಮೇಲ್ಭಾಗಕ್ಕೂ ಬೆಂಕಿ ಹರಡಿದ್ದು, ಜನರು ಭೀತಿಯಿಂದ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಐದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಮಹಡಿಯಿಂದ ಕೆಳಕ್ಕೆ ಹಾರಿ ಕೆಲವರು ಪ್ರಾಣ ಕಳಕೊಂಡಿದ್ದಾರೆ. ಮೃತರಲ್ಲಿ ಐವರು ಕೇರಳದ ಮಲಯಾಳಿಗಳಾಗಿದ್ದು, ಒಟ್ಟು ಹತ್ತು ಮಂದಿ ಭಾರತೀಯರು ಸಾವು ಕಂಡಿದ್ದಾರೆ ಎನ್ನುವ ಮಾಹಿತಿಯಿದೆ.
ಬಿಲ್ಡಿಂಗ್ ಕಟ್ಟಡವು ಎನ್ ಬಿಟಿಸಿ ಗ್ರೂಪ್ ಚೇರ್ಮನ್ ಕೇರಳ ಮೂಲದ ಕೆ.ಜಿ.ಅಬ್ರಹಾಂ ಎಂಬವರಿಗೆ ಸೇರಿದ್ದು, 195 ಮಂದಿ ಅವರದೇ ಕಂಪನಿಯ ಕಾರ್ಮಿಕರು ಕಟ್ಟಡದಲ್ಲಿ ವಾಸವಿದ್ದರು. ಇವರಲ್ಲಿ ಕೇರಳ, ತಮಿಳುನಾಡು, ಉತ್ತರ ಭಾರತೀಯರು ಇದ್ದರು. ಬುಧವಾರ ಬೆಳಗ್ಗೆ ಆರು ಗಂಟೆಗೆ ಏಕಾಏಕಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು. ಇಡೀ ಕಟ್ಟಡಕ್ಕೆ ಬೆಂಕಿ ಮತ್ತು ಹೊಗೆ ಆವರಿಸಿದ್ದು ಹೆಚ್ಚಿನವರು ಮಲಗಿದ್ದಲ್ಲೇ ಹೊಗೆಯಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಕುವೈತ್ ಉಪ ಪ್ರಧಾನಿ ಬೆಂಕಿ ಘಟನೆ ಸಂಬಂಧಿಸಿ ತನಿಖೆಗೆ ಆದೇಶ ಮಾಡಿದ್ದು, ಅಪಾರ್ಟ್ಮೆಂಟ್ ಕಟ್ಟಡದ ಮಾಲೀಕನನ್ನೂ ಬಂಧಿಸುವಂತೆ ಆದೇಶ ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಾರ್ಮಿಕರು ವಾಸವಿದ್ದ ಕೊಠಡಿ ಒಂದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯ ವೇಳೆಗೆ ಬೆಂಕಿ ಹತ್ತಿಕೊಂಡಿದೆ. ಅಲ್ಲಿಂದ ಗ್ಯಾಸ್ ಕೊಳವೆಯ ಮೂಲಕ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದ್ದು, ಪ್ರತಿ ಮನೆಯಲ್ಲೂ ಬೆಂಕಿ ಮತ್ತು ಹೊಗೆ ಆವರಿಸುವಂತೆ ಮಾಡಿದೆ. ಇಡೀ ಕಟ್ಟಡದಲ್ಲಿ ಗ್ಯಾಸ್ ಪೈಪ್ ಲೈನ್ ಇದ್ದುದೇ ಬೆಂಕಿ ದಿಢೀರ್ ಆವರಿಸಲು ಕಾರಣ ಎನ್ನಲಾಗುತ್ತಿದೆ.
The fire broke out at 4:30 am local time in the kitchen of a residential building. By the time authorities were informed at 6 am, the fire had spread rapidly, trapping many inside. According to Kuwait Times, about 160 workers of the same company were residing in the building. A Kerala-based website, Onmanorama, stated that five individuals from Kerala are among the ten Indians who perished in the incident.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm