ಬ್ರೇಕಿಂಗ್ ನ್ಯೂಸ್
22-06-24 08:59 pm HK News Desk ದೇಶ - ವಿದೇಶ
ಮುಂಬೈ, ಜೂನ್.22: ಮಾಜಿ ಸಂಸದ ಶತ್ರುಘ್ನಾ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಎರಡು ದಿನಗಳ ಹಿಂದೆ ಶತ್ರುಘ್ನಾ ಸಿನ್ಹಾ ಅವರು ತನ್ನ ಮಗಳ ಬಯಕೆಗೆ ಒಪ್ಪಿಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಹೀರ್ ಇಕ್ಬಾಲ್ ಅವರ ಇಕ್ಬಾಲ್ ರತನ್ಸಿ ಹೇಳಿಕೆ ನೀಡಿದ್ದು, ಮದುವೆಯಾದ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂಗೆ ಮತಾಂತರ ಆಗಲ್ಲ ಎಂದಿದ್ದಾರೆ.
ಜೂನ್ 23ರಂದು ಅವರು ಸಿವಿಲ್ ಮ್ಯಾರೇಜ್ ಆಗಲಿದ್ದಾರೆ. ಹಿಂದು ಪದ್ಧತಿ ಅಥವಾ ಮುಸ್ಲಿಂ ವಿಧಿಯಂತೆ ಮದುವೆ ಆಗೋದಿಲ್ಲ. ನಾಗರಿಕ ಕಾನೂನು ಪ್ರಕಾರ ರಿಜಿಸ್ಟರ್ ಅಷ್ಟೇ ಆಗಲಿದ್ದಾರೆ. ಮದುವೆ ಬಳಿಕ ಆಕೆ ಮತಾಂತರ ಆಗೋದೂ ಇಲ್ಲ. ಅವರಿಬ್ಬರ ಹೃದಯಗಳು ಬೆಸೆದಿವೆ, ಧರ್ಮ ಅದಕ್ಕೆ ಅಡ್ಡ ಬರೋದಿಲ್ಲ ಎಂದು ಇಕ್ಬಾಲ್ ರತನ್ಸಿ ಹೇಳಿದ್ದಾರೆ.

ಸೋನಾಕ್ಷಿ ಸಿನ್ಹಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಕ್ಕೆ ತಂದೆ ಶತ್ರುಘ್ನಾ ಸಿನ್ಹಾ ಒಪ್ಪಿಕೊಂಡಿಲ್ಲ, ಅಸಮ್ಮತಿ ತೋರಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಶತ್ರುಘ್ನಾ ಸಿನ್ಹಾ ಪ್ರತಿಕ್ರಿಯೆ ಕೊಟ್ಟಿದ್ದು ಮದುವೆಗೆ ತನ್ನದೇನೂ ಆಕ್ಷೇಪ ಇಲ್ಲ ಎಂದಿದ್ದರು. ನನ್ನ ಕುಟುಂಬದ ಬಗ್ಗೆ ಸುಳ್ಳು ವರದಿಗಳನ್ನು ಬಿತ್ತರಿಸಲಾಗುತ್ತಿದೆ. ಯಾರ ಜೀವನ ಹೇಗಿದೆಯೋ ಯಾರಿಗೊತ್ತು. ಇದು ನನ್ನ ಒಬ್ಬಳೇ ಮಗಳ ಜೀವನದ ಪ್ರಶ್ನೆ. ನನಗೆ ಆಕೆಯ ಬಗ್ಗೆ ಹೆಮ್ಮೆ ಇದೆ, ನಾನು ಮದುವೆಯಲ್ಲಿ ಪಾಲ್ಗೊಳ್ಳುತ್ತೇನೆ, ನಾನು ಮದುವೆಗೆ ಹೋಗದೇ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಸೋನಾಕ್ಷಿ – ಜಹೀರ್ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಲಾಗಿದ್ದರೆ, ಜಾಲತಾಣದಲ್ಲಿ ಇವರ ಮದುವೆಗೆ ಪರ- ವಿರೋಧ ಚರ್ಚೆ ನಡೆಸಿದ್ದಾರೆ.
Sonakshi Sinha and her longtime boyfriend Zaheer Iqbal are all set to tie the knot. The couple will have a civil marriage on June 23, the groom-to-be’s father, Iqbal Ratansi has revealed. In a recent interview, Zaheer’s father shed light on their marriage when he told Free Press Journal, “It will have neither Hindu nor Muslim rituals. It will be a civil marriage.”
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm