ಬ್ರೇಕಿಂಗ್ ನ್ಯೂಸ್
22-06-24 10:38 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 22: ಭಾರತ ಮೂಲದ ಮನೆ ಕೆಲಸದವರನ್ನು ಶೋಷಣೆಗೆ ಒಳಪಡಿಸಿದ ಆರೋಪದಲ್ಲಿ ಬ್ರಿಟನ್ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಹಿಂದೂಜಾ ಕುಟುಂಬದ ನಾಲ್ವರನ್ನು ಸ್ವಿಸ್ ನ್ಯಾಯಾಲಯವೊಂದು ತಪ್ಪಿತಸ್ಥರೆಂದು ಘೋಷಿಸಿದ್ದು ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜಿನೀವಾದಲ್ಲಿರುವ ಹಿಂದೂಜಾ ಕುಟುಂಬದ ಬಂಗಲೆಯಲ್ಲಿ ಈ ಘಟನೆ ನಡೆದಿತ್ತು. ಸ್ವಿಸ್ ಕೋರ್ಟ್ ಪ್ರಕಾಶ್ ಹಿಂದೂಜಾ ಮತ್ತು ಅವರ ಪತ್ನಿ ಕಮಲ್ ಹಿಂದುಜಾಗೆ 4.5 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರೆ, ಪುತ್ರ ಅಜಯ್ ಹಿಂದುಜಾ ಮತ್ತು ಅವರ ಪತ್ನಿ ನಮ್ರತಾ ಹಿಂದುಜಾ ಅವರಿಗೆ ತಲಾ ನಾಲ್ಕು ವರ್ಷಗಳ ಶಿಕ್ಷೆ ವಿಧಿಸಿದೆ.
ಕೋರ್ಟ್ ಆದೇಶದ ವಿರುದ್ಧ ನಾಲ್ವರು ಆರೋಪಿಗಳು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಹಿಂದೂಜಾ ಕುಟುಂಬದ ಸದಸ್ಯರು ತಮ್ಮ ಮನೆ ಕೆಲಸಕ್ಕಿದ್ದವರನ್ನು ಶೋಷಣೆಗೆ ಒಳಪಡಿಸಿದ್ದಲ್ಲದೆ, ಅನಾರೋಗ್ಯ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಹಿಂದೂಜಾ ಕುಟುಂಬವು ತನ್ನ ಉದ್ಯೋಗಿಗಳಿಗೆ ಅವರ ಕೆಲಸಕ್ಕಾಗಿ ನೀಡುತ್ತಿರುವ ಸಂಬಳವು ಸ್ವಿಟ್ಜರ್ಲೆಂಡ್ನಲ್ಲಿ ಅಂತಹ ಉದ್ಯೋಗಗಳಿಗೆ ನೀಡುವ ಸಂಬಳದ ಹತ್ತನೇ ಒಂದು ಭಾಗಕ್ಕಿಂತ ಕಡಿಮೆಯಾಗಿತ್ತು ಎಂದೂ ನ್ಯಾಯಾಲಯ ಹೇಳಿದೆ.
ಹಿಂದೂಜಾ ಗ್ರೂಪ್ ಭಾರತ, ಯುಕೆ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉದ್ಯಮ ಹೊಂದಿದ್ದು 37 ಬಿಲಿಯನ್ ಪೌಂಡ್ ಆಸ್ತಿ ಮೌಲ್ಯ ಹೊಂದಿದೆ. ಇವರ ಕುಟುಂಬವು ಸ್ವಿಜರ್ಲ್ಯಾಂಡ್ ದೇಶದ ಜಿನೇವಾದಲ್ಲಿದ್ದಾಗ ಮನೆ ಕೆಲಸದವರನ್ನು ಕೂಡಿಹಾಕಿ ಅವರ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು. ಮನೆ ಕೆಲಸದ ನೌಕರನ ಸಂಬಳಕ್ಕಿಂತ ಕುಟುಂಬ ಸದಸ್ಯರು ತಮ್ಮ ನಾಯಿಗೆ ಹೆಚ್ಚು ಖರ್ಚು ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದಲ್ಲದೆ, ಉದ್ಯೋಗಿಗಳಿಗೆ ಸ್ವಿಸ್ ಫ್ರಾಂಕ್ಗಳ ಬದಲಿಗೆ ರೂಪಾಯಿಗಳಲ್ಲಿ ಪಾವತಿಸಲಾಗುತ್ತಿತ್ತು. ನೌಕರರು ದಿನಕ್ಕೆ 18 ಗಂಟೆಗೂ ಹೆಚ್ಚು ಮತ್ತು ಕೆಲವೊಮ್ಮೆ ರಜೆಯಿಲ್ಲದೆ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು.
Four members of the UK's richest family have received prison sentences for exploiting staff brought over from India to work at their Geneva villa.Prakash and Kamal Hinduja, as well as their son Ajay and his wife Namrata, were found guilty of exploitation and illegal employment by a Swiss court and handed sentences ranging from four to four-and-a-half years.
27-06-24 05:32 pm
Bangalore Correspondent
Heart attack, Kodagu, Madikeri: ಕೊಡಗು ; ಹೃದಯಾ...
27-06-24 04:11 pm
DK Shivakumar, Siddaramaiah, Vokkaliga seer:...
27-06-24 02:56 pm
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವ್ಯಕ್ತಿಯನ್ನ...
27-06-24 02:53 pm
Valmiki Scam, fraud crime ; ವಾಲ್ಮೀಕಿ ನಿಗಮದ ಹಗ...
26-06-24 07:37 pm
26-06-24 05:50 pm
HK News Desk
ಪುಣೆ ಪೋರ್ಷೆ ಕಾರು ಆ್ಯಕ್ಸಿಡೆಂಟ್ ಕೇಸ್ ; ಎರಡು ಜೀ...
25-06-24 09:51 pm
ಸ್ಪೀಕರ್ ಹುದ್ದೆಗೆ ಎನ್ಡಿಎ ಒಕ್ಕೂಟದಿಂದ ಮತ್ತೆ ಓಂ ಬ...
25-06-24 08:25 pm
Ayodhya Ram temple water leak; ತರಾತುರಿಯಲ್ಲಿ ಲ...
25-06-24 02:56 pm
NEET scam, CBI: ನೀಟ್ ಪರೀಕ್ಷೆ ಅಕ್ರಮ ; ಎಫ್ಐಆರ್...
23-06-24 09:39 pm
27-06-24 10:59 pm
Mangalore Correspondent
Mangalore rain, Belthangady, current shock: ಬ...
27-06-24 10:29 pm
Mangalore rain, school college holiday: ದಕ್ಷಿ...
27-06-24 07:36 pm
IAS Suhas LY, Para Badminton: ಪ್ಯಾರಾ ಬ್ಯಾಡ್ಮಿ...
27-06-24 07:14 pm
illegal sand, Pavoor Uliya, Muneer Katipalla;...
27-06-24 03:01 pm
27-06-24 05:10 pm
Bangalore Correspondent
Tumkur police, crime, Child Trafficking: ತುಮಕ...
27-06-24 01:34 pm
Pavoor-Uliya Kudru, Mangalore, Sand Mining: ಪ...
26-06-24 11:10 pm
MLA Harish Gowda, Honey Trap: ಮೈಸೂರಿನಲ್ಲಿ ಶಾಸ...
26-06-24 06:15 pm
Mangalore crime, Surathkal Police: ಸುರತ್ಕಲ್ ಬ...
25-06-24 11:06 pm