ಬ್ರೇಕಿಂಗ್ ನ್ಯೂಸ್
04-07-24 05:57 pm HK News Desk ದೇಶ - ವಿದೇಶ
ರಾಂಚಿ, ಜುಲೈ 4: ಜಾರ್ಖಂಡ್ 13ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೈಲಿನಿಂದ ಹೊರಬಂದ ನಾಲ್ಕೇ ದಿನದಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಸೊರೇನ್ ಅವರಿಗೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಪ್ರಮಾಣ ವಚನ ಬೋಧಿಸಿದರು.
ನಿನ್ನೆಯಷ್ಟೇ ಚಂಪೈ ಸೊರೆನ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೇನ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಮತ್ತು ಆರ್ಜೆಡಿ ಮುಖಂಡ ಸತ್ಯಾನಂದ್ ಭೋಕ್ತಾ ಅವರೊಂದಿಗೆ ರಾಜಭವನಕ್ಕೆ ತೆರಳಿ ರಾಜಿನಾಮೆ ನೀಡಿದ್ದರು.
ಭೂಹಗರಣ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನಿನಲ್ಲಿ ಜೈಲಿನಿಂದ ಹೊರಗೆ ಬಂದಿರುವ ಹೇಮಂತ್ ಸೊರೇನ್ ಮತ್ತೆ ಅಧಿಕಾರಕ್ಕೇರಲು ತನ್ನ ಪರವಾಗಿದ್ದ ಚಂಪೈ ಸೊರೇನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು.
ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದ ಸೊರೇನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ ಜೂನ್ 28 ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಜನವರಿ 31 ರಂದು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನಕ್ಕೂ ಮುನ್ನ ಸೊರೇನ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೊರೇನ್ ಜೈಲಿನಿಂದ ಹೊರಬಂದ ಕೂಡಲೇ ಜುಲೈ 2ರಂದು ಸಭೆ ಸೇರಿದ್ದ ಶಾಸಕರು ಸೊರೇನ್ ಅವರನ್ನೇ ತಮ್ಮ ಶಾಸಕಾಂಗ ನಾಯಕನಾಗಿ ಆಯ್ಕೆ ಮಾಡಿದ್ದರು.
ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಇಡಿ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದರೆ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ.
Jharkhand chief minister Champai Soren resigned on Wednesday and Hemant Soren, who is out on bail in a money laundering case, staked claim to form the government, hours after leaders of the JMM-led alliance in the state unanimously elected him as the legislature party leader.
06-07-24 01:07 pm
HK News Desk
ನಟ ದರ್ಶನ್, ಪವಿತ್ರಾ ಗೌಡಗೆ ಮತ್ತಷ್ಟು ದಿನ ಜೈಲೇ ಗತ...
04-07-24 06:03 pm
ಡೆಂಗಿ ಪರೀಕ್ಷೆಗೆ ಹೆಚ್ಚಿನ ಬೆಲೆ ವಿಧಿಸುತ್ತಿದ್ದ ಆಸ...
03-07-24 09:23 pm
Kolar crime, College Baby; ಕಾಲೇಜಿನ ಶೌಚಾಲಯದಲ್ಲ...
03-07-24 08:07 pm
VRL Vijay Sankeshwar daughter husband, crime:...
02-07-24 09:58 pm
07-07-24 01:16 pm
HK News Desk
ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ...
05-07-24 03:55 pm
15 ವರ್ಷಗಳ ಬಳಿಕ ಮಹಿಳೆ ನಾಪತ್ತೆ ಪ್ರಕರಣ ಭೇದಿಸಿದ ಪ...
04-07-24 09:14 pm
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
ಬಿಹಾರದಲ್ಲಿ 17 ದಿನಗಳ ಅಂತರದಲ್ಲಿ 12 ಸೇತುವೆ ಕುಸಿತ...
04-07-24 03:40 pm
06-07-24 10:21 pm
Mangalore Correspondent
Mangalore, Suratkal toll gate: ಸುರತ್ಕಲ್ ಟೋಲ್...
06-07-24 07:40 pm
Mangalore, Harish Poonja MLA: ಎಫ್ಐಆರ್ ರದ್ದು ಕ...
06-07-24 04:45 pm
Mangalore minister Dinesh Gundu Rao: ವೃತ್ತಿಪರ...
06-07-24 04:26 pm
Siddaramaiah, MLC Ravi Kumar, Muda: ಮೂಡಾಕ್ಕೆ...
06-07-24 01:41 pm
07-07-24 03:07 pm
Bangalore Correspondent
Mangalore Bangalore Crime, Drugs; ಬೆಂಗಳೂರಿನಿಂ...
06-07-24 11:00 pm
Mangalore crime, Ullal, Police, Gold: ಶೋಕಿ ಜೀ...
05-07-24 10:34 pm
WhatsApp fraud, crime, Udupi: ವಾಟ್ಸ್ ಆ್ಯಪ್ನ...
04-07-24 10:18 pm
Mangalore Ulaibettu Dacoity case, 10 arrested...
04-07-24 07:41 pm