ಬ್ರೇಕಿಂಗ್ ನ್ಯೂಸ್
05-07-24 03:55 pm HK News Desk ದೇಶ - ವಿದೇಶ
ಲಂಡನ್, ಜುಲೈ 5: ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ, ಎರಡು ವರ್ಷಗಳಿಂದ ಬ್ರಿಟನ್ ಪ್ರಧಾನಿಯಾಗಿದ್ದ ರಿಷಿ ಸುನಕ್ ತೀವ್ರ ಶಾಕ್ ಅನುಭವಿಸಿದ್ದಾರೆ. 650 ಸದಸ್ಯ ಬಲದ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಕೈರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ ಅಧಿಕಾರ ಹಿಡಿದಿದೆ.
ಸದ್ಯದ ಫಲಿತಾಂಶ ಪ್ರಕಾರ, ಲೇಬರ್ ಪಕ್ಷ ಒಟ್ಟು 326 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ರಿಷಿ ಸುನಕ್ ನೇತೃತ್ವದ ಕನ್ಸರ್ವೇಟೀವ್ ಪಾರ್ಟಿ ಕೇವಲ 61 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ರಿಷಿ ಸುನಕ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ, ನನ್ನನ್ನು ಕ್ಷಮಿಸಿ, ಸೋಲಿನ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ ಎಂದು ಸುನಕ್ ಹೇಳಿದ್ದಾರೆ.
ಬ್ರಿಟನ್ ಸಂಸತ್ತಿನ ಮ್ಯಾಜಿಕ್ ನಂಬರ್ 326. ಈ ಸಂಖ್ಯಾಬಲ ಹೊಂದಿದ ಪಾರ್ಟಿ ಸರ್ಕಾರ ರಚಿಸಲಿದೆ. ಕಳೆದ 14 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಕನ್ಸರ್ವೇಟೀವ್ ಪಾರ್ಟಿ ಈಗ ಹಠಾತ್ ಸೋಲಿಗೆ ಶರಣಾಗಿದೆ. ಭಾರತೀಯ ಮೂಲದ ರಿಷಿ ಸುನಕ್ ಸ್ಥಾನಕ್ಕೆ ಕುತ್ತು ಬಂದರೂ, ದಾಖಲೆ ಎಂಬಂತೆ ಲೇಬರ್ ಪಕ್ಷದಲ್ಲಿ 26 ಮಂದಿ ಭಾರತ ಮೂಲದವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ವಿಪಕ್ಷ ಲೇಬರ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸುವ ಸುಳಿವು ಇತ್ತು. ಹೀಗಾಗಿ ಚುನಾವಣಾ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿತ್ತು. 650 ಕ್ಷೇತ್ರಗಳಿಗೆ 392 ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಹೊಂದಿದ್ದರೂ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಷಿ ಸುನಕ್ ಹಾಗೂ ಪಾರ್ಟಿ ನಾಯಕರಿಗೆ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಸ್ಟಾರ್ಮರ್ ಅವರ ಲೇಬರ್ ಪಾರ್ಟಿಗೆ 460 ಸ್ಥಾನ ನೀಡಿತ್ತು. ಇನ್ನು ರಿಷಿ ಸುನಕ್ ಕನ್ಸರ್ವೇಟೀವ್ ಪಾರ್ಟಿಗೆ 131 ಸ್ಥಾನ ನೀಡಿದ್ದರೆ, ಲಿಬರಲ್ ಡೆಮಾಕ್ರಾಟ್ಸ್ ಪಾರ್ಟಿಗೆ 60 ಸ್ಥಾನ ನೀಡಿದ್ದವು.
Britain’s Prime Minister-elect Keir Starmer pledged to start a period of “national renewal” in the U.K. after his opposition Labour party defeated the ruling Conservatives in the general election. “Today we start the next chapter -- begin the work of change, the mission of national renewal and start to rebuild our country,” Mr. Starmer said in a triumphant victory speech in London after his party secured a majority in parliament.
08-07-24 11:15 pm
Bangalore Correspondent
BC Patil Son in law, Suicide; ಮಾಜಿ ಸಚಿವ ಬಿ.ಸಿ...
08-07-24 08:59 pm
CM Siddaramaiah, D K: ‘’ಸಿಎಂ ಬದಲು’’ ಚರ್ಚೆಗೆ ಬ...
08-07-24 12:00 pm
Shivamogga accident car: ಶಿವಮೊಗ್ಗದಲ್ಲಿ ಕಾರುಗಳ...
06-07-24 01:07 pm
ನಟ ದರ್ಶನ್, ಪವಿತ್ರಾ ಗೌಡಗೆ ಮತ್ತಷ್ಟು ದಿನ ಜೈಲೇ ಗತ...
04-07-24 06:03 pm
08-07-24 07:23 pm
HK News Desk
Collapsed 6 storey building in Surat: ಗುಜರಾತ್...
07-07-24 01:16 pm
ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ...
05-07-24 03:55 pm
15 ವರ್ಷಗಳ ಬಳಿಕ ಮಹಿಳೆ ನಾಪತ್ತೆ ಪ್ರಕರಣ ಭೇದಿಸಿದ ಪ...
04-07-24 09:14 pm
ಜಾರ್ಖಂಡಿನಲ್ಲಿ ಮತ್ತೆ ಅಧಿಕಾರ ಗಿಟ್ಟಿಸಿದ ಹೇಮಂತ್ ಸ...
04-07-24 05:57 pm
08-07-24 08:53 pm
Mangaluru Correspondent
Udupi rain, flood; ಉಡುಪಿಯಲ್ಲಿ ಭಾರೀ ಮಳೆಗೆ ಹಲವೆ...
08-07-24 07:51 pm
Udupi Odisha , Paddy: ಕೋಟದಲ್ಲಿ ಗದ್ದೆ ಕೆಲಸಕ್ಕಿ...
08-07-24 06:37 pm
Rahul Gandhi, BJP, Bharath Shetty MLA, Mangal...
08-07-24 06:13 pm
ಕುಕ್ಕೆ ಸುಬ್ರಹ್ಮಣ್ಯ ಬಳಿ ಕುಮಾರಧಾರ ನದಿಗೆ ಹಾರಿದ ಬ...
08-07-24 04:39 pm
07-07-24 07:54 pm
HK News Desk
News anchor divya vasantha, honey trap, crime...
07-07-24 03:07 pm
Mangalore Bangalore Crime, Drugs; ಬೆಂಗಳೂರಿನಿಂ...
06-07-24 11:00 pm
Mangalore crime, Ullal, Police, Gold: ಶೋಕಿ ಜೀ...
05-07-24 10:34 pm
WhatsApp fraud, crime, Udupi: ವಾಟ್ಸ್ ಆ್ಯಪ್ನ...
04-07-24 10:18 pm