Kuwait fire, Kerala: ಕುವೈತ್ ಸಿಟಿಯಲ್ಲಿ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಬೆಂಕಿ ; ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವು

21-07-24 05:45 pm       HK News Desk   ದೇಶ - ವಿದೇಶ

ಕುವೈತ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಇಬ್ಬರು ಮಕ್ಕಳು ಸೇರಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿದ್ದಾರೆ.

ಕುವೈತ್, ಜುಲೈ 21: ಕುವೈತ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಇಬ್ಬರು ಮಕ್ಕಳು ಸೇರಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ದುರಂತ ಸಾವಿಗೀಡಾಗಿದ್ದಾರೆ.

ಆಲಪ್ಪುಝ ಜಿಲ್ಲೆಯ ನೀರಾಟ್ಟುಪುರಂ ನಿವಾಸಿಗಳಾದ ಮ್ಯಾಥ್ಯೂಸ್ ಮುಲಕ್ಕಲ್, ಅವರ ಪತ್ನಿ ಲೀನ್ ಅಬ್ರಹಾಂ ಮತ್ತವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಏರ್ ಕಂಡೀಶನರಲ್ಲಿ ಶಾರ್ಟ್ ಸರ್ಕಿಟ್ ಆಗಿ ಬೆಂಕಿ ಹತ್ತಿಕೊಂಡಿದ್ದು ಹೊಗೆಯಿಂದಾಗಿ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಮ್ಯಾಥ್ಯೂಸ್ ಮುಲಕ್ಕಲ್ ಕುವೈತ್ ಸಿಟಿಯಲ್ಲಿ ಕಳೆದ 15 ವರ್ಷಗಳಿಂದ ಉದ್ಯೋಗಿಯಾಗಿದ್ದು, ಬೇಸಿಗೆಯ ರಜೆಯಲ್ಲಿ ಊರಿಗೆ ತೆರಳಿ ಜುಲೈ19ರಂದು ಸಂಜೆ 4 ಗಂಟೆಗೆ ಕುವೈತ್ ತಲುಪಿದ್ದರು. ಅದೇ ದಿನ ರಾತ್ರಿ ಅಪಾರ್ಟ್ಮೆಂಟಿನ ಎರಡನೇ ಮಹಡಿಯಲ್ಲಿದ್ದಾಗಲೇ ಬೆಂಕಿ ಹತ್ತಿಕೊಂಡಿತ್ತು. ಪತ್ನಿ ಲೀನಿ ನರ್ಸ್ ಆಗಿದ್ದರೆ, ಇಬ್ಬರು ಮಕ್ಕಳು ಅಲ್ಲಿಯೇ ಶಾಲೆಗೆ ಹೋಗುತ್ತಿದ್ದರು.

ಭಾರತದ ರಾಯಭಾರ ಕಚೇರಿಯವರು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ಬೇಸಿಗೆ ರಜೆ ಮುಗಿಸಿ ಮರಳಿದ ದಿನವೇ ದುರಂತ ನಡೆದುಹೋಗಿದೆ. ಒಂದು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ಭಾರತೀಯರು ವಾಸವಿದ್ದ ಅಪಾರ್ಟ್ಮೆಂಟಿಗೆ ಬೆಂಕಿ ಹತ್ತಿಕೊಂಡು 45 ಮಂದಿ ಸಾವಿಗೀಡಾಗಿದ್ದರು. ಈಗ ಅದೇ ಪರಿಸರದ ಮತ್ತೊಂದು ಕಟ್ಟಡದಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

In a tragic incident, an Indian couple and their two children were killed in a fire that broke out in their flat in Kuwait City, local authorities said on Saturday. The tragedy happened on Friday night, the same day they returned from Kerala after vacation.