ಬ್ರೇಕಿಂಗ್ ನ್ಯೂಸ್
05-08-24 11:03 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್.5: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಮಿತಿಮೀರಿದ ಬೆನ್ನಲ್ಲೇ ಪ್ರಧಾನಿ ಸ್ಥಾನ ತ್ಯಜಿಸಿ ತಮ್ಮ ಬಂಗಲೆಯನ್ನೇ ತೊರೆದ ಪ್ರಧಾನಿ ಶೇಖ್ ಹಸೀನಾ ಅವರು ನೇರವಾಗಿ ಮಿಲಿಟರಿ ಹೆಲಿಕಾಪ್ಟರ್ ನಲ್ಲಿ ಭಾರತಕ್ಕೆ ಬಂದಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಹಿಂಡನ್ ವಾಯುನೆಲೆಗೆ ಬಂದು ಇಳಿದಿದ್ದಾರೆ.
ಬಾಂಗ್ಲಾದೇಶದ ಸಿ-130 ಏರ್ ಕ್ರಾಫ್ಟ್ ನಲ್ಲಿ ಹಸೀನಾ ಆಗಮಿಸಿದ್ದು, ಕಾಪ್ಟರ್ ಇಳಿಯುತ್ತಲೇ ವಾಯುಪಡೆ ಮತ್ತು ಆರ್ಮಿ ಸೇನಾ ಪಡೆ ಸುತ್ತುವರಿದು ತಪಾಸಣೆ ನಡೆಸಿದೆ. ಆನಂತರ, ಶೇಖ್ ಹಸೀನಾ ಅವರನ್ನು ಭಾರತಕ್ಕೆ ಸ್ವಾಗತ ಮಾಡಿದೆ. ಇದಕ್ಕೂ ಮುನ್ನ ಹಸೀನಾ ಅವರ ಸೋದರಿ ಶೇಖ್ ರೆಹನಾ ಜೊತೆಗೆ ಇಂಗ್ಲೆಂಡಿಗೆ ತೆರಳಲಿದ್ದಾರೆ ಎನ್ನಲಾಗಿತ್ತು. ರೆಹನಾ ಅವರು ಇಂಗ್ಲೆಂಡ್ ದೇಶದ ನಾಗರಿಕತ್ವ ಪಡೆದಿದ್ದಾರೆ.
ಬಾಂಗ್ಲಾ ಮಿಲಿಟರಿ ಹೆಲಿಕಾಪ್ಟರ್ ನೇರವಾಗಿ ಭಾರತದ ವಾಯುನೆಲೆಗೆ ಬಂದಿರುವುದರಿಂದ ಭಾರತೀಯ ಸೇನಾಪಡೆ ಅಲರ್ಟ್ ಆಗಿದೆ. ಬಾಂಗ್ಲಾದಲ್ಲಿ ಹಿಂಸೆ ಭುಗಿಲೆದ್ದಿರುವುದು ಮತ್ತು ಹಸೀನಾ ಭಾರತಕ್ಕೆ ಬಂದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಸಂಪುಟ ಸಚಿವರ ಜೊತೆಗೆ ಚರ್ಚೆ ನಡೆಸಿದ್ದಾರೆ. ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಮತ್ತು ವಿದೇಶಾಂಗ ಇಲಾಖೆ ಸೆಕ್ರಟರಿ ವಿಕ್ರಮ್ ಮಿಸ್ರಿ ಜೊತೆಗೂ ಮೋದಿ ಮಾತುಕತೆ ನಡೆಸಿದ್ದಾರೆ.
ಶೇಖ್ ಹಸೀನಾ ಭಾರತಕ್ಕೆ ಬರಲು ಆಯ್ದುಕೊಂಡಿರುವುದನ್ನು ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ಸ್ವಾಗತಿಸಿದ್ದು, ನೆರೆಯ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳಿಗೂ ಭಾರತವೇ ತಾಯ್ನಾಡು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಸೇಫ್ ಆಗಿರಲಿದ್ದಾರೆ. ಭಾರತವನ್ನು ಆಯ್ಕೆ ಮಾಡಿರುವುದು ನಮಗೆಲ್ಲ ಹೆಮ್ಮೆ. ನಮ್ಮ ದೇಶದಲ್ಲಿ ನೆಲೆಸಿರುವ ಜನರು ಯಾಕೆ ಹಿಂದು ರಾಷ್ಟ್ರ, ಯಾಕೆ ರಾಮರಾಜ್ಯ ಎಂದು ಕೇಳುತ್ತಾರೆ, ಅದಕ್ಕೀಗ ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.
ಇದೇ ವೇಳೆ, ಮೇಘಾಲಯ ತನ್ನ ಬಾಂಗ್ಲಾ ಗಡಿಯುದ್ದಕ್ಕೂ ನೈಟ್ ಕರ್ಫ್ಯೂ ಹೇರಿದ್ದು, ಗಡಿಯಲ್ಲಿ ಬಿಎಸ್ಎಫ್ ಅಲರ್ಟ್ ಮಾಡಿದೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಿಂಡನ್ ವಾಯುನೆಲೆಗೆ ಆಗಮಿಸಿದ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದೇ ವೇಳೆ, ಅಮೆರಿಕವು ಬಾಂಗ್ಲಾದಲ್ಲಿರುವ ತನ್ನ ಪ್ರಜೆಗಳಿಗೆ ಸೇಫ್ ಜಾಗದಲ್ಲಿ ನೆಲೆಸುವಂತೆ ಸಲಹೆ ಮಾಡಿದೆ.
ಈ ಹಿಂದೆ ತನ್ನ ತಂದೆ ಮುಜೀಬುರ್ ರೆಹ್ಮಾನ್ ಹತ್ಯೆಯಾಗಿದ್ದಾಗಲೂ ಭಾರತಕ್ಕೆ ಬಂದಿದ್ದ ಶೇಖ್ ಹಸೀನಾ ಆರು ವರ್ಷಗಳ ಕಾಲ ದೆಹಲಿಯಲ್ಲಿ ಉಳಿದುಕೊಂಡಿದ್ದರು. ತನ್ನ ಗಂಡ, ಸೋದರಿ ಮತ್ತು ಇಬ್ಬರು ಮಕ್ಕಳೊಂದಿಗೆ ದೆಹಲಿಯ ಲಜಪತ್ ನಗರ್ ಮತ್ತು ಪಂಡರಾ ರೋಡ್ ನಲ್ಲಿ ರಹಸ್ಯ ಸ್ಥಳದಲ್ಲಿ ಉಳಿದಿದ್ದರು. ಈ ಬಾರಿಯೂ ಬಾಂಗ್ಲಾ ತೊರೆದು ಭಾರತಕ್ಕೆ ಬಂದಿರುವ ಶೇಖ್ ಹಸೀನಾ ಕೆಲವು ದಿನಗಳಲ್ಲಿ ಇಂಗ್ಲೆಂಡ್ ತೆರಳುವ ಸನ್ನಾಹದಲ್ಲಿದ್ದಾರೆ.
Bangladesh leader Sheikh Hasina met National Security Advisor Ajit Doval Monday evening after landing at the Hindon Air Force base in Uttar Pradesh's Ghaziabad - around 30 km from Delhi. Prime Minister Narendra Modi has been briefed on the situation in Bangladesh by External Affairs Minister S Jaishankar. There is no word yet if Mr Modi will meet Mrs Hasina.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 03:28 pm
HK News Desk
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
ರಾಜಧಾನಿ ದೆಹಲಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ; ಒಂಬತ್ತ...
10-11-25 08:23 pm
ಫರಿದಾಬಾದ್ ; ಕಾಶ್ಮೀರಿ ವೈದ್ಯನ ಮಾಹಿತಿಯಂತೆ 300 ಕ...
10-11-25 03:04 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
11-11-25 06:33 pm
Mangalore Correspondent
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm