ಬ್ರೇಕಿಂಗ್ ನ್ಯೂಸ್
07-09-24 03:02 pm HK News Desk ದೇಶ - ವಿದೇಶ
ಇಂದೋರ್, ಸೆ.7: ಪತಿಯ ನಿರಂತರ ಕಿರುಕುಳದಿಂದ ನೊಂದ ಮುಸ್ಲಿಂ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತನ್ನ ಪುತ್ರರಿಗೆ ಲವ-ಕುಶ ಎಂದು ಹೆಸರಿಟ್ಟಿದ್ದು ತನ್ನ ಹೆಸರನ್ನು ಮೆಹನಾಜ್ ಬದಲಿಗೆ ಮೀನಾಕ್ಷಿ ಎಂದು ಬದಲಿಸಿದ್ದಾರೆ.
ಧಮ್ನಾರ್ ಗ್ರಾಮದ ನಿವಾಸಿ ಮೆಹನಾಜ್ (30) ಅವರು ತಮ್ಮ 12 ಮತ್ತು 11 ವರ್ಷದ ಇಬ್ಬರು ಪುತ್ರರೊಂದಿಗೆ ಮಂಡಸೌರ್ನ ಗಾಯತ್ರಿ ದೇವಸ್ಥಾನದಲ್ಲಿ ಮತಾಂತರ ಆಗಿದ್ದು ಶುದ್ಧೀಕರಣದ ನಂತರ ಮನೆಗೆ ಮರಳಿದ್ದಾರೆ. ಮನೆಯವರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೀನಾಕ್ಷಿ ಹೇಳಿದ್ದಾರೆ. ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಗೌರವವಿದೆ ಎಂಬ ದೃಷ್ಟಿಯಿಂದ ಮತಾಂತರ ಆಗಿದ್ದೇನೆ ಎಂದು ಹೇಳಿದರು. ತಾನೇ ಹಿಂದೂ ಸಂಘಟನೆಯ ಜನರನ್ನು ಸಂಪರ್ಕಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ, ಮೆಹನಾಜ್ 15 ವರ್ಷಗಳ ಹಿಂದೆ ಧಮ್ನಾರ್ನ ಇರ್ಫಾನ್ ಖಾನ್ ಎಂಬವರನ್ನು ಮದುವೆಯಾಗಿದ್ದರು. ಮೆಹನಾಜ್ ತಂದೆ ಅಬ್ದುಲ್ ರಶೀದ್ ರೈತ. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ನಂತರ ಪತಿ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ಆರಂಭಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ಸಣ್ಣಪುಟ್ಟ ವಿಚಾರಕ್ಕೂ ಕೈ ಎತ್ತುತ್ತಿದ್ದರು. ಈ ಬಗ್ಗೆ ನನ್ನ ತಂದೆಗೆ ತಿಳಿಸಿದಾಗ, ಅವರು ಇದು ನಿಮ್ಮ ಕುಟುಂಬದ ವಿಷಯ ಎಂದು ಹೇಳಿ ಸಹಾಯಕ್ಕೆ ಬರಲಿಲ್ಲ.
ದೇವಸ್ಥಾನದಲ್ಲಿ ಒಂದೂವರೆ ಗಂಟೆಗಳ ಕಾಲ ಮಂತ್ರಗಳನ್ನು ಪಠಿಸಿದ ನಂತರ ತಾಯಿ ಮಕ್ಕಳು ಸನಾತನ ಧರ್ಮಕ್ಕೆ ಮತಾಂತರಗೊಂಡರು. ಮಹಿಳೆ ಮತ್ತು ಇಬ್ಬರು ಪುತ್ರರಿಗೆ ವೇದ ಮಂತ್ರಗಳೊಂದಿಗೆ ಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ಗೋಮೂತ್ರ ಮತ್ತು ಗೋಮಯದಿಂದ ಸ್ನಾನ ಮಾಡಲಾಯಿತು. ಇದೇ ವೇಳೆ, ಹಿಂದೂ ಯುವವಾಹಿನಿಯ ರಾಜ್ಯ ಉಸ್ತುವಾರಿ ಚೈತನ್ಯ ಸಿಂಗ್ ರಜಪೂತ್ ಮಾತನಾಡಿ, 2-3 ತಿಂಗಳ ಹಿಂದೆ ಮೆಹನಾಜ್ ನಮ್ಮನ್ನು ಸಂಪರ್ಕಿಸಿದ್ದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮೆಹ್ನಾಜ್ ಮತ್ತು ಅವರ ಇಬ್ಬರು ಪುತ್ರರನ್ನು ಘರ್ ವಾಪ್ಸಿ ಮಾಡಿಸಲಾಯಿತು. ಇದುವರೆಗೆ 40 ಮಹಿಳೆಯರು, 5 ಪುರುಷರು ಮತ್ತು ಇಬ್ಬರು ಮಕ್ಕಳನ್ನು ಕಾನೂನು ಪ್ರಕಾರವೇ ಘರ್ ವಾಪ್ಸಿ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.
Indore Muslim women converts to Hindu with her two children after torture by husband.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm