Arjun missing truck, Shiruru: ಶಿರೂರು ಗುಡ್ಡ ಕುಸಿತ ; ಎರಡು ತಿಂಗಳ ಬಳಿಕ ಕೇರಳದ ಲಾರಿ ನದಿಯಲ್ಲಿ ಪತ್ತೆ, ಮೇಲೆತ್ತುವ ಕಾರ್ಯ ಆರಂಭ

21-09-24 08:05 pm       HK News Desk   ದೇಶ - ವಿದೇಶ

ಶಿರೂರು ಭೂಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್‌ ಕೊನೆಗೂ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ.

ಅಂಕೋಲಾ, ಸೆ.21: ಶಿರೂರು ಭೂಕುಸಿತದ ಬಳಿಕ ಗಂಗಾವಳಿ ನದಿಯಾಳದಲ್ಲಿ ನಾಪತ್ತೆಯಾಗಿದ್ದ ಕೇರಳದ ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್‌ ಕೊನೆಗೂ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. 

ಜುಲೈ 16 ರಂದು ಭೂ ಕುಸಿತ ಸಂಭವಿಸಿದ ಬಳಿಕ ಕೇರಳದ ಅರ್ಜುನ್‌ ಚಲಾಯಿಸುತ್ತಿದ್ದ ಟ್ರಕ್‌ ಗಂಗಾವಳಿ ನದಿಗೆ ಬಿದ್ದಿತ್ತು. ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿ ಇದ್ದ ಕಾರಣ ಟ್ರಕ್‌ ಪತ್ತೆ ಮಾಡಲು ಕಷ್ಟವಾಗಿತ್ತು. ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಟ್ರಕ್‌ ಪತ್ತೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರು. 

ಟ್ರಕ್‌ ಗುಡ್ಡ ಕುಸಿತಗೊಂಡ ಜಾಗದ ಬಳಿಯೇ ನದಿಯಾಳದಲ್ಲಿ ಸಿಕ್ಕಿ ಬಿದ್ದಿದೆ. ಟ್ರಕ್‌ ಮೇಲೆ ಸಾಕಷ್ಟು ಕಲ್ಲು ಮತ್ತು ಮಣ್ಣು ಬಿದ್ದಿದೆ. ಹೀಗಾಗಿ ಅವುಗಳನ್ನು ತೆಗೆದು ಟ್ರಕ್‌ ಮೇಲಕ್ಕೆ ಎತ್ತಲು ಸಿದ್ಧತೆ ನಡೆಯುತ್ತಿದೆ.

ಜುಲೈ 16 ರಂದು ಭೂಕುಸಿತ ಸಂಭವಿಸಿದಾಗ ಕೇರಳ ಮೂಲದ ಅರ್ಜುನ್ ಜೋಯಿಡಾದಿಂದ ಮರ ತುಂಬಿಸಿಕೊಂಡು ಟ್ರಕ್‌ನಲ್ಲಿ  ಕೋಝಿಕ್ಕೋಡ್‌ ಕಡೆಗೆ ತೆರಳುತ್ತಿದ್ದರು. ಶಿರೂರು ಗುಡ್ಡದ ಬಳಿ ನಿಲ್ಲಿಸಿದ್ದಾಗಲೇ ಲಾರಿ ಸಮೇತ ಗುಡ್ಡದ ಜೊತೆಗೆ ಕುಸಿದು ಬಿದ್ದಿತ್ತು. ಆನಂತರ ಕೇರಳದ ಶಾಸಕರು, ಎನ್ ಡಿಆರ್ ಎಫ್, ನೌಕಾಪಡೆ ಸಿಬಂದಿ ಬಂದು ಕಾರ್ಯಾಚರಣೆ ನಡೆಸಿದರೂ, ಚಾಲಕ ಅರ್ಜುನ್ ಮತ್ತು ಆತನ ಲಾರಿ ಪತ್ತೆಯಾಗಿರಲಿಲ್ಲ. ಭಾರೀ ಮಳೆ ಮತ್ತು ನದಿಯಲ್ಲಿ ಹೆಚ್ಚಿದ್ದ ನೀರಿನಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶುಕ್ರವಾರದಿಂದ ಗೋವಾದಿಂದ ದೊಡ್ಡ ಬಾರ್ಜ್ ತರಿಸಿ ಮಣ್ಣು ತೆರವು ಕಾರ್ಯ ಆರಂಭಿಸಲಾಗಿತ್ತು.

The truck of Kerala lorry driver Arjun who went missing following a landslide at Shirur village in Uttara Kannada district was discovered on Saturday, September 21 afternoon.