ಬ್ರೇಕಿಂಗ್ ನ್ಯೂಸ್
01-10-24 03:09 pm HK News Desk ದೇಶ - ವಿದೇಶ
ಚೆನ್ನೈ , ಅ.1: ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಹೆಣ್ಣು ಮಕ್ಕಳನ್ನು ಬ್ರೈನ್ ವಾಶ್ ಇಶಾ ಫೌಂಡೇಶನ್ನಲ್ಲಿ ಇರಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೊಯಮತ್ತೂರಿನ ಪ್ರಾಧ್ಯಾಪಕ ಎಸ್. ಕಾಮರಾಜ್ ಮದ್ರಾಸ್ ಹೈಕೋರ್ಟ್ನಲ್ಲಿ ದೂರು ನೀಡಿದ್ದು ವಿಚಾರಣೆ ವೇಳೆ ಕೋರ್ಟ್ ಮಹತ್ವದ ಪ್ರಶ್ನೆಯನ್ನು ಎತ್ತಿದೆ.
ನಿವೃತ್ತ ಪ್ರಾಧ್ಯಾಪಕ ಎಸ್ ಕಾಮರಾಜ್ ತಮ್ಮ ಇಬ್ಬರು ವಿದ್ಯಾವಂತ ಹೆಣ್ಣು ಮಕ್ಕಳನ್ನು ಬ್ರೈನ್ ವಾಶ್ ಮಾಡಲಾಗಿದೆ ಮತ್ತು ಇಶಾ ಯೋಗ ಕೇಂದ್ರದಲ್ಲಿ ಒತ್ತಾಯಪೂರ್ವಕ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಅವರು ತಮ್ಮ ಇಬ್ಬರು ಮಕ್ಕಳನ್ನು ಖುದ್ದು ವಿಚಾರಣೆಗೆ ಹಾಜರು ಪಡಿಸುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ 'ತನ್ನ ಮಗಳನ್ನು ಮದುವೆ ಮಾಡಿಸಿ, ಆಕೆಯನ್ನು ಜೀವನದಲ್ಲಿ ಉತ್ತಮವಾಗಿಸಿದ ಸದ್ಗುರು, ಇತರರ ಹೆಣ್ಣು ಮಕ್ಕಳನ್ನು ಏಕಾಂತ ಜೀವನ ನಡೆಸುವಂತೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆ' ಎಂದು ತರಾಟೆಗೆ ತೆಗೆದುಕೊಂಡಿದೆ.
ಆದರೆ ಸೋಮವಾರ ಪ್ರಾಧ್ಯಾಪಕರ 42 ಮತ್ತು 39 ವರ್ಷದ ಇಬ್ಬರು ಪುತ್ರಿಯರು ನ್ಯಾಯಾಲಯಕ್ಕೆ ಹಾಜರಾಗಿದ್ದು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇಶಾ ಫೌಂಡೇಶನ್ನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನು ಬಲವಂತವಾಗಿ ಯಾರೂ ಕೂಡ ಇಟ್ಟುಕೊಂಡಿಲ್ಲ ಎಂದಿದ್ದಾರೆ. ಈ ಹೇಳಿಕೆಯನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಎಂ ಸುಬ್ರಮಣ್ಯಂ ಮತ್ತು ವಿ. ಶಿವಗಣಂ ಅವರ ಪೀಠವು ಇಶಾ ಫೌಂಡೇಶನ್ ಸಂಸ್ಥಾಪಕರನ್ನು ಪ್ರಶ್ನೆ ಮಾಡಿದೆ. 'ತನ್ನ ಮಗಳಿಗೆ ಮದುವೆ ಮಾಡಿಸಿ ಜೀವನದಲ್ಲಿ ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದ ವ್ಯಕ್ತಿ, ಇತರರನ್ನು ಏಕಾಂಗಿಯಾಗಿ ಇರಲು ಏಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಇವರ ಮಾತು ಕೇಳಿ ಹೆಣ್ಣು ಮಕ್ಕಳು ಯಾಕಾಗಿ ಏಕಾಂತದ ಜೀವನ ನಡೆಸಬೇಕು?' ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.
ಈಶಾ ಫೌಂಡೇಶನ್ ವಿರುದ್ಧ ಹಿಂದೆಯೂ ದೂರು
ಒಂದು ದಶಕದ ಹಿಂದೊಮ್ಮೆ ಇದೇ ರೀತಿಯ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಪೋಷಕರು ತಮ್ಮ ಹೆಣ್ಣು ಮಕ್ಕಳು ತಮ್ಮನ್ನು ತೊರೆದಿದ್ದಾರೆ. ನಂತರ ಅವರ ಜೀವನ 'ನರಕ'ವಾಗಿದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ನ್ಯಾಯಾಧೀಶರು ಪ್ರಕರಣದ ಮುಂದಿನ ತನಿಖೆಗೆ ಆದೇಶಿಸಿದ್ದಾರೆ ಮತ್ತು ಇಶಾ ಫೌಂಡೇಶನ್ಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
When spiritual leader Sadhguru Jaggi Vasudev got his own daughter married, why is he encouraging young women to tonsure their heads and renounce worldly lives to live like hermits, the Madras High Court has questioned. A bench of Justices SM Subramaniam and V Sivagnanam posed the question for the Isha Foundation founder after a retired professor alleged that his two well-educated daughters had been "brainwashed" into permanently staying at the Isha Yoga Centre.
01-10-24 10:46 pm
Bangalore Correspondent
Siddaramaiah, K N Rajanna: ಕೊಲೆ ಕೇಸ್ನಲ್ಲಿ ಇರ...
01-10-24 10:35 pm
Pratap Simha, Siddaramaiah, Muda scam: ಒಡವೆ ಕ...
01-10-24 05:24 pm
Chitradurga, Heart Attack: ಚಿತ್ರದುರ್ಗ ; ಪತಿಯ...
01-10-24 02:43 pm
Bangalore News, lodge women death: ರಾತ್ರಿ ಲಾಡ...
01-10-24 12:41 pm
01-10-24 07:36 pm
HK News Desk
Sadhguru, Madras High Court: ಹೆಣ್ಣು ಮಕ್ಕಳಿಗೆ...
01-10-24 03:09 pm
500 ರೂ. ನೋಟಿನಲ್ಲಿ ಗಾಂಧೀಜಿ ಬದಲು ನಟ ಅನುಪಮ್ ಖೇರ್...
30-09-24 11:03 pm
M Kharge, PM Modi: ಮೋದಿಯನ್ನ ಅಧಿಕಾರದಿಂದ ಕೆಳಗಿಳ...
29-09-24 09:45 pm
Ankola Landslide, Arjun Body Found: ಅಂಕೋಲಾ ಗು...
25-09-24 05:36 pm
01-10-24 07:29 pm
Udupi Correspondent
Kishor Kumar Puttur, Nalin Kateel, Vidhana Pa...
01-10-24 05:35 pm
ನಾವು ಸಾಲ ಕೇಳುತ್ತಿಲ್ಲ.. ಕೆಲಸ ಮಾಡಿದ್ದಕ್ಕೆ ನ್ಯಾಯ...
01-10-24 03:26 pm
Tirupati Laddu row, Mangalore VHP: ಆಯಾ ದೇವಸ್ಥ...
30-09-24 10:03 pm
Mangalore Dasara 2024: ಅ.3ರಿಂದ 14 ; ಕುದ್ರೋಳಿ...
30-09-24 08:39 pm
01-10-24 11:18 pm
Mangalore Correspondent
Muneer Goods Muneer, Fraud, Mangalore: ಶೋಕಿಲಾ...
01-10-24 10:00 pm
Mangalore cyber fraud, Crime: ಮಂಗಳೂರು ಏರ್ಪೋರ್...
01-10-24 01:50 pm
ದಾವಣಗೆರೆ ; ಖಾಸಗಿ ಶಿಕ್ಷಕನಿಗೆ ಹಣದ ಆಮಿಷವೊಡ್ಡಿ ಟೋ...
27-09-24 10:59 pm
Puttur crime, Mangalore, Gun: ಸಾಲ ಕೇಳಿಕೊಂಡು ಬ...
27-09-24 02:27 pm