ಬ್ರೇಕಿಂಗ್ ನ್ಯೂಸ್
17-10-24 11:16 am HK News Desk ದೇಶ - ವಿದೇಶ
ಗಾಜಿಯಾಬಾದ್, ಅ.17: ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಮಾಲೀಕನ ಮೇಲಿನ ಕೋಪದಲ್ಲಿ ತನ್ನ ಮೂತ್ರವನ್ನೇ ಬಳಸಿ ಚಪಾತಿ ಹಿಟ್ಟು ತಯಾರಿಸಿ ರೊಟ್ಟಿ ಮಾಡಿಕೊಡುತ್ತಿದ್ದ ಕೃತ್ಯ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ ನಿತಿನ್ ಗೌತಮ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ರೀನಾ (32) ಪಾಪ ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾಳೆ.
ಮನೆಯವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉದ್ಯಮಿ ನಿತಿನ್ ಗೌತಮ್ ಅವರ ಪತ್ನಿ ರೂಪಂ ಮನೆಯಲ್ಲಿ ಏನೋ ದುಷ್ಕೃತ್ಯ ನಡೆಯುತ್ತಿದೆಯಾ ಎಂದು ನೋಡಲು ಮನೆ ಕೆಲಸದಾಕೆಯ ಬಗ್ಗೆ ಶಂಕಿಸಿ ಮೊಬೈಲ್ ಕ್ಯಾಮರಾ ಇಟ್ಟಿದ್ದರು. ಮಹಿಳೆಯ ಚಲನವಲನದ ಬಗ್ಗೆ ತಪಾಸಣೆ ನಡೆಸುವ ಸಲುವಾಗಿ ಪರಿಶೀಲಿಸಿದಾ್, ಚಪಾತಿ ಹಿಟ್ಟಿಗೆ ಮಹಿಳೆ ಮೂತ್ರ ಬೆರೆಸುತ್ತಿರುವ ದೃಶ್ಯ ಪತ್ತೆಯಾಗಿದೆ. ಮಾಲೀಕರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು ರೀನಾಳನ್ನು ಬಂಧಿಸಿದ್ದಾರೆ.
ಅಡುಗೆ ತಯಾರಿಸುವ ಪಾತ್ರೆಗೆ ಅದೇ ಕೊಠಡಿಯಲ್ಲಿ ಮೂತ್ರ ಮಾಡಿ, ಅದನ್ನು ಚಪಾತಿ ಹಿಟ್ಟು ತಯಾರಿಸಲು ಬಳಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮೊದಲು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದ ಮಹಿಳೆ ಬಳಿಕ ವಿಡಿಯೋ ತೋರಿಸಿದ ನಂತರ ಒಪ್ಪಿಕೊಂಡಿದ್ದಾಳೆ. ಮನೆ ಮಾಲೀಕರು ನನ್ನ ಮೇಲೆ ವಿನಾಕಾರಣ ಬೈಯುತ್ತಿದ್ದರು, ಆ ಕಾರಣಕ್ಕಾಗಿ ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾಳೆ.
ಒಂದು ತಿಂಗಳ ಹಿಂದೆ ಜ್ಯೂಸ್ ತಯಾರಿಸಲು ತನ್ನ ಮೂತ್ರ ಬಳಸುತ್ತಿದ್ದ ಪ್ರಕರಣ ಗಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಜ್ಯೂಸ್ ಸೆಂಟರ್ ಮಾಲೀಕ ಅಮೀರ್ ಖಾನ್ ನನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶ ಸರ್ಕಾರ, ಮಾನವ ಮೂತ್ರ ಸೇರಿದಂತೆ ತ್ಯಾಜ್ಯ ಬಳಸುವುದನ್ನು, ಉಗುಳಿ ಆಹಾರ ತಯಾರಿಸುವುದನ್ನು ತಡೆಯಲು ಕಠಿಣ ಮಸೂದೆ ತರಲು ಮುಂದಾಗಿದೆ. ಮಸೂದೆಯಲ್ಲಿ ಆರೋಪಿಗಳಿಗೆ ಹತ್ತು ವರ್ಷಗಳ ಕಠಿಣ ಸಜೆ ವಿಧಿಸಲು ಅವಕಾಶ ಇರಲಿದೆ.
A shocking incident has come to light from #Ghaziabad, #UttarPradesh, where a maid has been arrested for preparing food with her urine. The house help identified as #Reena was caught red handed in the kitchen urinating in a vessel.
— Hate Detector 🔍 (@HateDetectors) October 16, 2024
The incident occurred on Monday and was… pic.twitter.com/5Hi1YiKIZz
A 32-year-old domestic help was arrested by police in Uttar Pradesh's Ghaziabad on Wednesday for allegedly mixing urine in the flour dough to make chapatis (flatbread) for her employers. The woman, identified as Reena, was arrested following a complaint by one of her employers.
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm