ಬ್ರೇಕಿಂಗ್ ನ್ಯೂಸ್
11-12-20 05:06 pm Headline Karnataka News Network ದೇಶ - ವಿದೇಶ
ವಾಷ್ಟಿಂಗ್ಟನ್, ಡಿ.11: ಕೊರೊನಾ ಕಾರಣದಿಂದ ಜಗತ್ತಿನಾದ್ಯಂತ ಲಾಕ್ಡೌನ್ ಹೇರಿದ್ದು ಉದ್ಯೋಗ ನಷ್ಟ, ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಆದರೆ, ಇದೇ ಲಾಕ್ಡೌನ್ ಕಾರಣದಿಂದ ವಾತಾವರಣಕ್ಕೆ ಮಾಲಿನ್ಯ ಸೇರುವ ಶೇಕಡಾವಾರಿನಲ್ಲಿ ದೊಡ್ಡ ಮಟ್ಟಿಗೆ ಕಡಿಮೆಯಾಗಿದ್ಯಂತೆ.
ಹೌದು... ಅಮೆರಿಕದ ಗ್ಲೋಬಲ್ ಕಾರ್ಬನ್ ಪ್ರಾಜೆಕ್ಟ್ ಎನ್ನುವ ವರದಿಯಲ್ಲಿ ಜಾಗತಿಕವಾಗಿ ಇಂಗಾಲದ ಬಿಡುಗಡೆ 2020ಕ್ಕೆ ಹೋಲಿಸಿದರೆ, ಶೇ.7ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಅರ್ತ್ ಸಿಸ್ಟಮ್ ಸೈನ್ಸ್ ಡಾಟಾ ಎನ್ನುವ ನಿಯತಕಾಲಿಕದಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ. 2019ರಲ್ಲಿ ಜಾಗತಿಕವಾಗಿ 3600 ಕೋಟಿ ಮೆಟ್ರಿಕ್ ಟನ್ ಇಂಗಾಲದ ಅಂಶ ವಾವಾತರಣಕ್ಕೆ ಬಿಡುಗಡೆಯಾಗಿದ್ದರೆ, 20120ರಲ್ಲಿ ಇದರ ಸರಾಸರಿ 3400 ಕೋಟಿಗೆ ಇಳಿಕೆಯಾಗಿದೆ ಅನ್ನುವ ವರದಿಯನ್ನು ನೀಡಿದೆ.

ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ಸೇರಿ ಈ ವರದಿಯನ್ನು ತಯಾರಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು ಹೆಚ್ಚಾಗಿ ಹೊರಗಡೆ ಓಡಾಡದೆ ಮನೆಯಲ್ಲೇ ಇರುತ್ತಿದ್ದರು. ಇದರಿಂದಾಗಿ ವಾಹನಗಳ ಬಳಕೆ ಕಡಿಮೆಯಾಗಿತ್ತು. ಅಲ್ಲದೆ, ಇಂಗಾಲ ಇನ್ನಿತರ ವಿಷ ಹೊರಸೂಸುವ ಹೆಚ್ಚಿನ ಫ್ಯಾಕ್ಟರಿಗಳು ಬಂದ್ ಆಗಿದ್ದವು. ವಾಹನಗಳಿಂದಾಗಿ ಐದನೇ ಒಂದು ಭಾಗದಷ್ಟು ಮಾಲಿನಯ್ ಬಿಡುಗಡೆಯಾಗುತ್ತದೆ. ಇವೆಲ್ಲ ಕಾರಣದಿಂದಾಗಿ ಇಂಗಾಲ ಕಡಿಮೆಯಾಗಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ಈ ವರ್ಷ ಇಂಗಾಲದ ಬಿಡುಗಡೆಯಲ್ಲಿ ಶೇಕಡವಾರು 12ರಷ್ಟು ಕಡಿಮೆಯಾಗಿದ್ದರೆ, ಯುರೋಪಿನಲ್ಲಿ 11 ಶೇ. ಕಡಿಮೆಯಾಗಿರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆದರೆ, ಚೀನಾದಲ್ಲಿ ಕೇವಲ 1.7ರಷ್ಟು ಮಾತ್ರ ಇಂಗಾಲದಂಶ ಕಡಿಮೆಯಾಗಿದೆ. ಅಲ್ಲಿ ಆರಂಭದಲ್ಲಿ ಒಂದಷ್ಟು ಕಾಲ ಮಾತ್ರ ಲಾಕ್ಡೌನ್ ಮಾಡಿದ್ದು ಮತ್ತು ಅತಿ ಹೆಚ್ಚು ಕೈಗಾರಿಕೆಗಳು ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm